Headlines

ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್​- ನಟನ ಬಾಯಲ್ಲೇ ಕೇಳಿ

ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್​- ನಟನ ಬಾಯಲ್ಲೇ ಕೇಳಿ



ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್​- ನಟನ ಬಾಯಲ್ಲೇ ಕೇಳಿ
<p>ರಿಯಲ್ ಸ್ಟಾರ್ ಉಪೇಂದ್ರ &nbsp;ವಿಧಾನಸೌಧದ ಬಾಗಿಲು ಹಾಕಿಸುವುದಾಗಿ ಶಿವರಾಜ್ ಕುಮಾರ್ ಜೊತೆಗಿನ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅವರು ಹೀಗೆ ಹೇಳಿದ್ಯಾಕೆ? ಅದಕ್ಕೆ ಕಾರಣವೇನು?&nbsp;</p><img><p>ರಿಯಲ್​ ಸ್ಟಾರ್​ ಎಂದೇ ಫೇಮಸ್​ ಆಗಿರೋ ನಟ ಉಪೇಂದ್ರ ಅವರು, ಇದಾಗಲೇ ವಿಭಿನ್ನ ರೀತಿಯ ಲುಕ್​ಗಳನ್ನು ತಮ್ಮ ಸಿನಿಮಾಗಳಲ್ಲಿ ನೀಡಿಯೇ ಫೇಮಸ್​ ಆದವರು. ತಮ್ಮ ಚಿತ್ರಗಳನ್ನು ಮೂರ್ನಾಲ್ಕು ಬಾರಿ ನೋಡಿದರಷ್ಟೇ ಅರ್ಥ ಆಗತ್ತೆ ಎನ್ನುವ ಮೂಲಕ ಕೆಲವು ಸಿನಿಮಾಗಳ ಮೂಲಕವೂ ಕ್ರೇಜ್​ ಹೆಚ್ಚಿಸಿಕೊಂಡವರು.</p><img><p>ಇದೀಗ ನಟ ಉಪೇಂದ್ರ ಅವರು ತೆಲುಗಿನಲ್ಲಿಯೂ ಬಿಜಿ ಆಗಿದ್ದಾರೆ. ‘ಎನರ್ಜಿಟಿಕ್ ಸ್ಟಾರ್’ ಎಂದೇ ಫೇಮಸ್​ ಆಗಿರೋ ರಾಮ್ ಪೋತಿನೇನಿ ಅವರ ‘ಆಂಧ್ರ ಕಿಂಗ್ ತಾಲೂಕಾ’ ಸಿನಿಮಾವನ್ನು ಮಹೇಶ್ ಬಾಬು ನಿರ್ದೇಶಿಸುತ್ತಿದ್ದು, ಇದರಲ್ಲಿ ಉಪೇಂದ್ರ ಅವರು ಸೂರ್ಯಕುಮಾರ್ ಎಂಬ ‘ಸೂಪರ್ ಸ್ಟಾರ್’ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್​ 18ರಂದು ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಪಾತ್ರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು.</p><img><p>ಅಷ್ಟಕ್ಕೂ ತೆಲುಗು ಚಿತ್ರರಂಗ ಅವರಿಗೆ ಹೊಸತಲ್ಲ. ಮೂರು ದಶಕಗಳಿಂದ ತೆಲುಗಿನಲ್ಲೂ ಫೇಮಸ್ ಆಗಿದ್ದಾರೆ ಉಪೇಂದ್ರ ಕನ್ನಡದಲ್ಲಿ ರಿಯಲ್ ಸ್ಟಾರ್ ಎಂದೇ ಹೆಸರಾಗಿರುವ ಉಪೇಂದ್ರಗೆ ತೆಲುಗಿನಲ್ಲಿಯೂ ಅಭಿಮಾನಿಗಳಿದ್ದಾರೆ. ಅವರ ‘ಎ’, ‘ಉಪೇಂದ್ರ’ ಮತ್ತು ‘ಬುದ್ಧಿಮಂತ’, ‘ಯುಐ’ ಇನ್ನಿತರ ಚಿತ್ರಗಳು ತೆಲುಗಿಗೂ ಡಬ್ ಆಗಿವೆ.</p><img><p>ಇನ್ನು ನಟನಾಗಿ ಎಷ್ಟು ಫೇಮಸ್​ ಆದರೋ, ರಾಜಕೀಯದಲ್ಲಿಯೂ ಅಷ್ಟೇ ಫೇಮಸ್​ ಆಗಬೇಕು ಎನ್ನುವ ಕಾರಣಕ್ಕೆ ಪ್ರಜಾಕೀಯ ಎನ್ನುವ ಪಕ್ಷವನ್ನೂ ಆರಂಭಿಸಿದ್ದಾರೆ. ಇದಾಗಲೇ ರಾಜ್ಯದ ಹಲವು ಚುನಾವಣೆಯಲ್ಲಿ ಇದೇ ಪಕ್ಷದಿಂದ ಇವರ ಅಭ್ಯರ್ಥಿಗಳು ಕೂಡ ಸ್ಪರ್ಧಿಸಿದ್ದರು. ಸದ್ಯ ಆ ಪಕ್ಷ ಅವರು ಅಂದುಕೊಂಡಷ್ಟು, ಅವರ ನಿರೀಕ್ಷೆಯಷ್ಟು ಉತ್ತಮ ಫಲಿತಾಂಶ ನೀಡಲಿಲ್ಲ.</p><img><p>ಇದರ ನಡುವೆಯೇ, ಹೊಸದಾಗಿ ಪ್ರಜಾಕೀಯ ಶುರು ಮಾಡಿದ ಸಂದರ್ಭದಲ್ಲಿ, ನಟ ಶಿವರಾಜ್​ ಕುಮಾರ್​ ಅವರು ನಟ ಉಪೇಂದ್ರ ಅವರು ಸಂದರ್ಶನ ಮಾಡಿದ್ದರು. ಅದರಲ್ಲಿ ಅವರು, ರಾಜ್ಯದ ಮುಖ್ಯಮಂತ್ರಿಯಾದರೆ ಮಾಡುವ ಮೊದಲ ಕೆಲಸ ಏನು ಎಂದು ಕೇಳಿದ್ದರು. ಈ ಹಳೆಯ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ.</p><img><p>ಅದಕ್ಕೆ ಉಪೇಂದ್ರ ಅವರು, ನಾನು ಸಿಂಎ ಆದರೆ, ಮಾಡುವ ಮೊದಲ ಕೆಲಸ ವಿಧಾನಸೌಧದ ಬಾಗಿಲು ಹಾಕಿಸುವುದು ಎಂದರು. ಇದಕ್ಕೆ ಶಿವರಾಜ್​ ಕುಮಾರ್​ (Shiva Raj Kumar) ಕಾರಣ ಕೇಳಿದಾಗ ನನ್ನದು ಪ್ರಜಾಕೀಯ. ವಿಧಾನಸೌಧ ನೋಡಿದರೆ ರಾಜಕೀಯ ಎನಿಸುತ್ತದೆ. ರಾಜರ ರೀತಿಯಲ್ಲಿ ಅರಮನೆ ಕಟ್ಟಿಕೊಂಡಿದ್ದಾರೆ. ಅದಕ್ಕಾಗಿಯೇ ಅದನ್ನು ಮುಚ್ಚಿಸುತ್ತೇನೆ ಎಂದರು.</p><img><p>ನನ್ನ ಪ್ರಕಾರ ಎಲ್ಲಾ ಶಾಸಕರು ಕ್ಷೇತ್ರಕ್ಕೆ ಬಂದು ಕೆಲಸ ಮಾಡಬೇಕು. ವಿಧಾನಸೌಧವನ್ನು ಮ್ಯೂಸಿಯಂ ಮಾಡಬೇಕು. ವೀಕೆಂಡ್​ನಲ್ಲಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು. ಪ್ರವಾಸಿ ತಾಣ ಮಾಡಬೇಕು ಎಂದು ಉಪೇಂದ್ರ ಅವರು ಹೇಳಿದ್ದಾರೆ. ಈ ವೇಳೆ ಶಿವರಾಜ್‌ ಕುಮಾರ್‌ ಅವರು, ನೀವು ಸಿನಿಮಾ ರೀತಿ ಆಲೋಚನೆ ಮಾಡಿದ್ದೀರಿ ಅದು ನನಗೆ ಇಷ್ಟ ಆಯಿತು ಎಂದರು.</p><p>ಇದರ ವಿಡಿಯೋ ನೋಡಲು ಈ ಲಿಂಕ್​ ಮೇಲೆ ಕ್ಲಿಕ್​ &nbsp;ಮಾಡಿ</p>



Source link

Leave a Reply

Your email address will not be published. Required fields are marked *