Karna Nidhi Nitya story: ಕರ್ಣನಿಂದ ನಿಧಿಯನ್ನು ದೂರ ಮಾಡಲು ರಮೇಶ್ ರೂಪಿಸಿದ ಸಂಚು ವಿಫಲವಾಗಿದೆ. ಮನೆ ಕಳೆದುಕೊಂಡ ನಿಧಿಯನ್ನು ಕರ್ಣ ತನ್ನ ಮನೆಗೆ ಕರೆತಂದಿದ್ದು, ಪತ್ನಿ ನಿತ್ಯಾ ಜೊತೆಯಲ್ಲೇ ಮಾಜಿ ಪ್ರೇಯಸಿ ನಿಧಿಯ ಗೃಹಪ್ರವೇಶವೂ ನಡೆದಿದೆ. ಇದು ಕಥೆಯಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
15

Image Credit : Zee Kannada
ಕರ್ಣ ಸೀರಿಯಲ್
ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಪ್ರತಿ ಸಂಚಿಕೆಯಲ್ಲಿಯೂ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿಧಿಯನ್ನು ಪ್ರೀತಿ ಮಾಡಿದ್ದ ಕರ್ಣ ತನ್ನನ್ನು ಸದಾ ದ್ವೇಷಿಸುವ ನಿತ್ಯಾ ಜೊತೆ ಸಪ್ತಪದಿ ತುಳಿದಿದ್ದಾನೆ. ಕರ್ಣನ ಮಾಜಿ ಪ್ರೇಯಸಿ ನಿಧಿ ಆತನ ಮುಂದೆಯೇ ಇರಬೇಕು. ಪ್ರೀತಿ ಕಳೆದುಕೊಂಡ ನೋವು ಪ್ರತಿದಿನ ಕರ್ಣನಿಗೆ ಕಾಡುತ್ತಿರಬೇಕು ಎಂದು ನಿಧಿ ಮನೆಗೆ ರಮೇಶ್ ಬೆಂಕಿ ಹಚ್ಚಿಸಿದ್ದಾನೆ.
25
Image Credit : Zee Kannada
ರಮೇಶ್ನ ನೀಚ ಪ್ಲಾನ್
ಮನೆ ಕಳೆದುಕೊಂಡು ಶಾಂತಜ್ಜಿ ಜೊತೆ ನಿಧಿ ಬೀದಿಗೆ ಬಂದಿದ್ದಾಳೆ. ನಿತ್ಯಾ ನಮ್ಮ ಸೊಸೆ, ಆಕೆಯನ್ನು ನಾವು ಮನೆಗೆ ಕರೆದುಕೊಂಡು ಹೋಗುತ್ತವೆ. ಆದ್ರೆ ನಿಧಿ ಮತ್ತು ಶಾಂತಜ್ಜಿ ಅವರ ಮುಂದಿನ ಕಥೆ ಏನು ಎಂದು ತಾಯಿ ಮುಂದೆ ರಮೇಶ್ ಹೇಳಿದ್ದಾನೆ. ಆಗ ಕರ್ಣ, ಇನ್ಮುಂದೆ ಅವರಿಬ್ಬರು ನಮ್ಮೊಂದಿಗೆ ನಮ್ಮ ಮನೆಯಲ್ಲಿರುತ್ತಾರೆ ಎಂದು ಹೇಳಿದ್ದಾನೆ. ಇಲ್ಲಿಗೆ ರಮೇಶ್ನ ಮತ್ತೊಂದು ಪ್ಲಾನ್ ಸಕ್ಸಸ್ ಆಗಿದೆ.
35
Image Credit : Zee Kannada
ಗೆದ್ದೆ ಎಂಬ ಹೆಮ್ಮೆಯಲ್ಲಿ ರಮೇಶ್
ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತಿದೆ ಎಂದು ರಮೇಶ್ ಹೆಮ್ಮೆಯಿಂದ ಬೀಗುತ್ತಿದ್ದಾನೆ. ಆದ್ರೆ ನಿತ್ಯಾ ಕೊರಳಿಗೆ ಕರ್ಣ ತಾಳಿ ಕಟ್ಟೇ ಇಲ್ಲ ಎಂಬ ವಿಷಯ ರಮೇಶ್ನಿಗೆ ಗೊತ್ತಿಲ್ಲ. ಇನ್ನು ಮಗ-ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ವೇಳೆ ನಿಧಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರಿಂದ ನಿಧಿಯನ್ನು ಎತ್ತಿಕೊಂಡು ನಿತ್ಯಾ ಜೊತೆ ಕರ್ಣ ಮನೆಯೊಳಗೆ ಬಂದಿದ್ದಾನೆ. ಇಬ್ಬರು ಸೋದರಿಯರು ಕರ್ಣನೊಂದಿಗೆ ಮನೆಯೊಳಗೆ ಬಂದಿದ್ದಾರೆ.
45
Image Credit : Zee Kannada
ತಾನೊಂದು ಬಗೆದರೆ ದೈವವೊಂದು ಬಗೆಯಿತು
55
Image Credit : Zee Kannada