ರಸ್ತೆಗಳಿಗೆ ತೇಪೆ ಹಚ್ಚಲು ಶುರು ಮಾಡಿರುವ ಜಿಬಿಎ
ಬೆಂಗಳೂರು, ಅಕ್ಟೋಬರ್ 25: ಟಿವಿ9ನ ‘ಏನ್ ರೋಡ್ ಗುರು’ ಅಭಿಯಾನದ ಬಳಿಕ ಎಚ್ಚೆತ್ತಿರುವ ಜಿಬಿಎ (GBA)ಇದೀಗ ರಾಜಧಾನಿಯ ಹಲವು ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. ಇದರ ಮಧ್ಯೆ ಜನರ ಸಮಸ್ಯೆಗಳನ್ನು ಆಲಿಸುತ್ತಿರುವ ಡಿಸಿ ಡಿಕೆ ಶಿವಕುಮಾರ್ ಸಲಹೆ ಜಿಬಿಎ ಕೆಲಸದ ವೇಗವನ್ನು ಇನ್ನಷ್ಟು ಹೆಚ್ಚಿಸಿದೆ.
ರಾಜಧಾನಿಯಲ್ಲಿ ಶುರುವಾಯ್ತು ರಸ್ತೆ ತೇಪೆ ಕಾರ್ಯ
ಮಾಗಡಿ ರಸ್ತೆ, ಸುಮ್ಮನಹಳ್ಳಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಬೃಹತ್ ಗುಂಡಿಗಳಿಂದ ಹದಗೆಟ್ಟಿದ್ದವು. ವಾಹನ ಸವಾರರು ಸಂಚಾರದ ವೇಳೆ ತೊಂದರೆ ಅನುಭವಿಸುತ್ತಾರೆ. ಜನರ ಈ ಸಮಸ್ಯೆಗೀಗ ಬ್ರೇಕ್ ಬಿದ್ದಿದೆ. ಜಿಬಿಎ ರಸ್ತೆಗಳಿಗೆ ಟಾರ್ ಹಾಸಿ ತೇಪೆ ಹಚ್ಚಿ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಾರಂಭವಾಗಿದೆ.
ಸರ್ಕಾರವು ನಿಮ್ಮ ರಸ್ತೆಗುಂಡಿಗಳನ್ನು ಮುಚ್ಚಲು ಡೆಡ್ಲೈನ್ ನೀಡಿತ್ತು. ಡಿಸಿಎಂ ಡಿ.ಕೆ. ಶಿವನಾಗ ಸಿಟಿ ರೌಂಡ್ಗಳನ್ನು ನಡೆಸುತ್ತಾ, ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ. ರಸ್ತೆಗುಂಡಿಗಳ ವಿಚಾರದಲ್ಲೂ ಬೆಂಗಳೂರಿಗರು ಈ ಹಿಂದೆ ಡಿಸಿಎಂ ಎದುರು ಸಮಸ್ಯೆ ಬಿಚ್ಚಿಟ್ಟಿದ್ದರು. ಅವರ ಸಲಹೆಯಿಂದ ಜಿಬಿಎ ಕಾರ್ಯದ ವೇಗ ಹೆಚ್ಚು.
ಗಾಂಧಿ ಉದ್ಯಾನವನದಲ್ಲಿ ಸಾರ್ವಜನಿಕರೊಂದಿಗೆ ಡಿಸಿಎಂ ಸಂವಾದ
ರಾಜಧಾನಿಯ ಜನರ ಜೊತೆ ನೇರ ಸಂಪರ್ಕ ಸಾಧಿಸಲು ಡಿಸಿಎಂ ‘ಬೆಂಗಳೂರು ನಡಿಗೆ’ ಕಾರ್ಯಕ್ರವನ್ನು ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಹೇರೋಹಳ್ಳಿಯ ಗಾಂಧಿ ಉದ್ಯಾನವನದಲ್ಲಿ ನಡೆಯುವ ಈ ನಡಿಗೆಯಲ್ಲಿ ಡಿಕೆಶಿ ಕಾಣಿಸಿಕೊಂಡಿದ್ದಾರೆ.
ಡಿಸಿಎಂ ಮುಂದೆ ಜನರಿಟ್ಟ ಡಿಮ್ಯಾಂಡ್ಗಳೇನು ಗೊತ್ತಾ?
ಯಶವಂತಪುರ ವಿಧಾನಸಭಾ ವ್ಯಾಪ್ತಿಯ ಪಾರ್ಕ್ನಲ್ಲಿ ಸಾರ್ವಜನಿಕರ ಜೊತೆ ವಾಕ್ ಜೊತೆಗೆ ಸಂವಾದ ಜಾಗ. ಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಅಲ್ಲಿನ ವ್ಯಾಯಾಮ ಶಾಲೆಗೆ ಬಂದ ಡಿಸಿಎಂ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.