ಬೆಂಗಳೂರು, ಅಕ್ಟೋಬರ್ 26: ಅಕ್ಟೋಬರ್ 27 ರಿಂದ ನವೆಂಬರ್ 2 ರಂದು ಈ ವಾರದಲ್ಲಿ ವಿಶ್ವಾವಸು ನಾಮ ಸಂವತ್ಸರ , ದಕ್ಷಿಣಾಯಣ, ಶರದ್ ಋತು, ಕಾರ್ತೀಕ ಮಾಸವಿದ್ದು, ಅನೇಕ ಕಾರ್ಯಕ್ರಮಗಳು ನೆರವೇರಲಿವೆ. ಕಾರ್ತೀಕ ಸೋಮವಾರ, ತಲಕಾಡು ವೈದ್ಯೇಶ್ವರ ದೇವರ ರಥೋತ್ಸವ ಸೇರಿದಂತೆ ಕೆಲವು ಉತ್ಸವಗಳು ಈ ವಾರ ನೆರವೇರಲಿವೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆ ಡಾ ಬಸವರಾಜ ಗುರೂಜಿ ತಿಳಿಸಿದ್ದಾರೆ.