ಸಚಿವ ಸಂಪುಟದ ಭವಿಷ್ಯ: ಹಣೆಬರಹದಲ್ಲಿ ಬರೆದಿರೋದನ್ನ ತಪ್ಪಿಸೋಕೆ ಆಗೋಲ್ಲ ಎಂದ ತಂಗಡಗಿ | Minister Shivaraj Tangadagi Reacts On Karnataka Cabinet Reshuffle

ಸಚಿವ ಸಂಪುಟದ ಭವಿಷ್ಯ: ಹಣೆಬರಹದಲ್ಲಿ ಬರೆದಿರೋದನ್ನ ತಪ್ಪಿಸೋಕೆ ಆಗೋಲ್ಲ ಎಂದ ತಂಗಡಗಿ | Minister Shivaraj Tangadagi Reacts On Karnataka Cabinet Reshuffle



ಸಚಿವ ಸಂಪುಟದ ಭವಿಷ್ಯ: ಹಣೆಬರಹದಲ್ಲಿ ಬರೆದಿರೋದನ್ನ ತಪ್ಪಿಸೋಕೆ ಆಗೋಲ್ಲ ಎಂದ ತಂಗಡಗಿ | Minister Shivaraj Tangadagi Reacts On Karnataka Cabinet Reshuffle

ಯಾರನ್ನೂ ಮಂತ್ರಿ ಮಂಡಲದಿಂದ ತೆಗೆದುಹಾಕಲು ಸಾಧ್ಯವಿಲ್ಲ, ಎಲ್ಲವೂ ಅವರವರ ಹಣೆಬರಹದಂತೆ ನಡೆಯುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಸೂಚನೆ ಇರುವುದರಿಂದ ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ರಾಜ್ಯದಲ್ಲಿ ಯಾವುದೇ ಸಂಪುಟ ಪುನಾರಚನೆ ಇಲ್ಲ ಎಂದರು.

ಕೊಪ್ಪಳ (ಅ.27): ಯಾರನ್ನು ಸಹ ಮಂತ್ರಿ ಮಂಡಲದಿಂದ ತಪ್ಪಿಸಲು ಆಗುವುದಿಲ್ಲ. ಯಾರ್ಯಾರ ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತದೆ, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. 

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ಸಿಎಂ ಅವರ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದರು. 

ಇದನ್ನೂ ಓದಿ:‘ಸರ್ಕಾರ ಬಂದಾಗಲೇ ನಿರ್ಧಾರ ಆಗಿತ್ತು..’ ಸಂಪುಟ ಪುನಾರಚನೆ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಸ್ಫೋಟಕ ಹೇಳಿಕೆ!

ಸಿಎಂ ಬದಲಾವಣೆ ಬಗ್ಗೆ ನಾನು ಮಾತನಾಡೋಲ್ಲ:

‘ಸಿಎಂ ಬದಲಾವಣೆ ಸೇರಿದಂತೆ ರಾಜಕೀಯವಾಗಿ ಯಾರೊಬ್ಬರೂ ಹೇಳಿಕೆ ನೀಡದಂತೆ ಹೈಕಮಾಂಡ್ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ನಾನು ಹೈಕಮಾಂಡ್ ಸೂಚನೆ ಪಾಲಿಸುತ್ತೇನೆ. ಹೀಗಾಗಿ ಈ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು. 

‘ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೂ ಇಲ್ಲ, ರಾಜ್ಯ ಸಚಿವ ಸಂಪುಟದ ಪುನಾರಚನೆ ಹಾಗೂ ಬದಲಾವಣೆ ಏನೂ ಇಲ್ಲ’ ಎಂದು ಇದೇ ವೇಳೆ ಹೇಳಿದರು.



Source link

Leave a Reply

Your email address will not be published. Required fields are marked *