
<p>’ಅಮೃತಧಾರೆ’ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಪ್ರೀತಿ ಇದ್ದರೂ ಇಗೋದಿಂದಾಗಿ ದೂರವಾಗಿದ್ದಾರೆ. ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಇಬ್ಬರೂ ಒಂದಾಗುವುದನ್ನು ತೋರಿಸಲಾಗಿದ್ದು, ಇದು ಕನಸಾಗಿರಬಹುದೆಂಬ ಅನುಮಾನದಿಂದ ವೀಕ್ಷಕರು ನಿರ್ದೇಶಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. </p><img><p>ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಸದ್ಯ ಭೂಮಿಕಾಳ ಇಗೋದಿಂದಾಗಿ ಗಂಡ-ಹೆಂಡತಿ ಒಂದೇ ವಠಾರದಲ್ಲಿ ಇದ್ದರೂ ಒಂದಾಗುತ್ತಿಲ್ಲ. ಇಬ್ಬರ ಮನಸ್ಸಿನಲ್ಲಿಯೂ ಪರಸ್ಪರ ಅಗಾಧ ಪ್ರೇಮ ಇದ್ದರೂ ಮಧ್ಯೆ ಇಗೋ ಎನ್ನುವುದು ಅಡ್ಡ ಬರುತ್ತಿರುವ ಕಾರಣ, ಕೋಳಿ ಜಗಳ ಆಡುತ್ತಲೇ ಇದ್ದಾರೆ.</p><img><p>ಸಂದರ್ಭ ಸಿಕ್ಕಾಗಲ್ಲೆಲ್ಲಾ ಭೂಮಿಕಾ, ಮಲ್ಲಿಯ ಎದುರು ಗೌತಮ್ನನ್ನು ಹೊಗಳುತ್ತಿದ್ದರೂ, ಆತ ಬಂದಾಗ ಮಾತ್ರ ಹುಸಿ ಮುನಿಸು ತೋರಿಸುತ್ತಲೇ ಇದ್ದಾಳೆ. ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಿ ಎಂದು ವೀಕ್ಷಕರು ಗೋಗರೆಯುತ್ತಲೇ ಇದ್ದಾರೆ.</p><img><p>ಆದರೆ, ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಗೌತಮ್, ಭೂಮಿಕಾ ಮನೆಗೆ ಬಂದಿದ್ದಾನೆ. ನಿದ್ರಿಸುತ್ತಿದ್ದ ಭೂಮಿಕಾ ಎಚ್ಚರಗೊಂಡು ಇಲ್ಯಾಕೆ ಬಂದ್ರಿ ಎಂದುಪ್ರಶ್ನಿಸಿದ್ದಾಳೆ. ಆಗ ಗೌತಮ್ ನಿಮ್ಮನ್ನು ನೋಡಲು ಎಂದು ಹೇಳಿ ಹೊರಡಲು ರೆಡಿಯಾದಾಗ, ಭೂಮಿಕಾ ಅವನ ಕೈ ಹಿಡಿದುಕೊಂಡಿದ್ದಾಳೆ.</p><img><p>ಕೊನೆಗೆ, ಆತನನ್ನು ಅಪ್ಪಿಕೊಂಡು ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡಿ. ಇಬ್ಬರೂ ಎಲ್ಲಿಯಾದರೂ ದೂರ ಹೊರಟುಹೋಗೋಣ ಎಂದಿದ್ದಾಳೆ. ಇದರ ಪ್ರೊಮೋ ಇದೀಗ ಬಿಡುಗಡೆಯಾಗಿದೆ.</p><img><p>ಆದರೆ ಇದು ನಿಜ ಅಲ್ಲ, ಕನಸು ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ನಿರ್ದೇಶಕರಿಗೆ ನೆಟ್ಟಿಗರು ಧಮ್ಕಿ ಹಾಕುತ್ತಿದ್ದಾರೆ. ಒಂದು ವೇಳೆ ಇದು ನಿಜವಲ್ಲದೇ ಅವಳ ಅಥವಾ ಅವನ ಕನಸು ಎಂದು ತೋರಿಸಿದರೆ ನಾವು ಸುಮ್ಮನೇ ಇರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ.</p><img><p>ಜೋಡಿಜೀವಗಳ ಬಾಳಲ್ಲಿ ಮತ್ತೆ ವಸಂತ.. ಗೌತಮ್ – ಭೂಮಿ ಪ್ರೇಮದಾರಂಭ! ಎನ್ನುವ ಶೀರ್ಷಿಕೆಯೊಂದಿಗೆ ಈ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಆದರೆ ಹೀಗೆ ಇಬ್ಬರೂ ಒಂದಾಗಿಬಿಟ್ಟರೆ ಸೀರಿಯಲ್ ಬಹುತೇಕ ಮುಗಿದಂತೆ. ಆದ್ದರಿಂದ ಇನ್ನಷ್ಟು ದಿನ ಓಡಿಸಲು ಇದು ಕನಸು ಎಂದು ತೋರಿಸಲಾಗುತ್ತದೆ ಎನ್ನುವುದು ನೆಟ್ಟಿಗರ ಅಭಿಮತ.</p><img><p>ಅದೇ ಇನ್ನೊಂದೆಡೆ, ಜೈದೇವ್ ಭೂಮಿಕಾ ಮತ್ತು ಗೌತಮ್ ಹುಡುಕಾಟದಲ್ಲಿದ್ದಾನೆ. ಆಸ್ತಿಗೆ ಸಹಿ ಹಾಕಿಸಿಕೊಳ್ಳಲು ಆತ ತಡಕಾಡುತ್ತಿದ್ದಾನೆ. ಇದಕ್ಕಾಗಿ ರೌಡಿಗಳನ್ನು ಬಿಟ್ಟಿದ್ದಾನೆ. ಮಲ್ಲಿ ಅದೇ ಜಾಗದಲ್ಲಿ ಓಡಾಡುತ್ತಿರುವುದು ಆ ರೌಡಿಗಳಿಗೆ ತಿಳಿದಿದೆ. ಅಲ್ಲಿಗೆ ಬಂದ ಶಕುನಿ ಮಾಮಾ ಈ ವಿಷಯವನ್ನು ಹೇಗಾದರೂ ಗೌತಮ್ಗೆ ತಿಳಿಸಬೇಕು ಎಂದು ಸ್ಕೆಚ್ ಹಾಕುತ್ತಿದ್ದಾನೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ</p><p>ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್ ಮಾಡಿ</p>
Source link
Amruthadhaare: ಒಂದಾದ ಗೌತಮ್- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?