
ಕಲಬುರಗಿ, (ಅಕ್ಟೋಬರ್ 28): ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಸರ್ಕಾರದ ಇತರ ಚಟುವಟಿಕೆಗಳು, ಸಂಸ್ಥೆಗಳ ಕಾರ್ಯಗಳಿಗೆ ಬ್ರೇಕ್ ಹಾಕಿದ್ದ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ. ಮತ್ತೊಂದೆಡೆ ಚಿತ್ತಾಪುರದಲ್ಲಿ RSS ಪಥಸಂಚಲನದ ವಿಚಾರವಾಗಿ ಹೈಕೋರ್ಟ್ ಸೂಚನೆ ಇಂದು (ಅಕ್ಟೋಬರ್ 28) ಕಲಬುರಗಿಯಲ್ಲಿ 10 ಸಂಘಟನೆಗಳ ಜತೆ ಶಾಂತಿ ಸಭೆ ನಡೆದಿದ್ದು ಭಾರೀ ಹೈಡ್ರಾಮಾವೇ ಆಗಿದೆ. ಆದರೆ ಡಿಸಿ ಫೌಜಿಯಾ, ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆಸಲಾಯಿತು, ಒಮ್ಮತ ಮೂಡದೇ ಗೊಂದಲ, ಗದ್ದಲದಲ್ಲೇ ಮುಕ್ತಾಯ.