Headlines

Horoscope Today 04 November: ಈ ರಾಶಿಯವರಿಗೆ ಅನಿರೀಕ್ಷಿತ ಕಂಕಣಬಲದಿಂದ‌ ಸಂತಸ

Horoscope Today 04 November: ಈ ರಾಶಿಯವರಿಗೆ ಅನಿರೀಕ್ಷಿತ ಕಂಕಣಬಲದಿಂದ‌ ಸಂತಸ


Horoscope Today 04 November: ಈ ರಾಶಿಯವರಿಗೆ ಅನಿರೀಕ್ಷಿತ ಕಂಕಣಬಲದಿಂದ‌ ಸಂತಸ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ಸೂರ್ಯ ನಿತ್ಯನಕ್ಷತ್ರ : ರೇವತೀ, ಯೋಗ : ವಜ್ರ – ಕರ್ಣ : ೦ ೦ ಬಾಲವ, ೦ ೫. 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:57 – 16:24, ಗುಳಿಕ ಕಾಲ 12:03 – 13:30, ಯಮಗಂಡ ಕಾಲ 09:09 – 10:36.

ಮೇಷ ರಾಶಿ: ನಿಮ್ಮ ಜೀವನ ರಹಸ್ಯವನ್ನು ದೈವಜ್ಞರು ಹೇಳುತ್ತಾರೆ. ಜೀವನದ ಬಗ್ಗೆ ಸರಿಯಾದ ದೃಷ್ಟಿಯನ್ನು ಕೊಡಬೇಕಾಗುವುದು. ಬಂಡವಾಳದ ವಿಚಾರದಲ್ಲಿ ಯಾರ ಮಾತು ಪಥ್ಯವಾಗದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಖಾಸಗಿ ಕಂಪನಿ ಉದ್ಯೋಗಿಗಳ ವೇತನವು ಹೆಚ್ಚಾಗುವುದು. ನಿಮ್ಮ ವರ್ಗಾವಣೆಯು ಅನಿವಾರ್ಯವಾಗಿದೆ. ಸಂಗಾತಿಯ ಅನಾರೋಗ್ಯವನ್ನು ನೀವೇ ಉಪಚಾರದಿಂದ ಸರಿಮಾಡುವಿರಿ. ಪ್ರೀತಿಗೆ ಅಸಮ್ಮತಿ ತೋರಿಸುವವರು ನಿಮಗೆ ಸಿಟ್ಟು ಬಂದು ರೇಗಾಡುವಿರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುವುದು. ಪ್ರಸಾರ ಮಾಧ್ಯಮದವರಿಗೆ ಅನವರತ ಕಾರ್ಯಗಳು ಇರುವುದು. ಸಾಹಿತಿಗಳಿಗೆ ಸನ್ಮಾನ ಸಿಗುವುದು. ಅವಿವಾಹಿತರಿಗೆ ಕಂಕಣಬಲ ಪ್ರಾಪ್ತವಾಗಬಹುದು. ಬಂಡವಾಳದಿಂದ ಹೆಚ್ಚಿನ ಲಾಭವಿದೆ. ಇಂದು ಕೆಲವು ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳುವ ಸ್ಥಿತಿ ಬರಬಹುದು.

ವೃಷಭ ರಾಶಿ: ನಿಮ್ಮ ಮೋಜು ಮಸ್ತಿ ಪ್ರದೇಶದ ಗಾಂಭೀರ್ಯವನ್ನು ಹಾಳುಮಾಡುವುದು. ನಿಮ್ಮ ಆಶಾಗೋಪುರ ಕಳಚಿಬೀಳಬಹುದು. ಸಿಟ್ಟನ್ನು ಯಾವುದಾದರೂ ಒಂದು ದಾರಿಯಲ್ಲಿ ಹೊರಹಾಕಿದರೆ ಸಮಾಧಾನಪಟ್ಟುಕೊಳ್ಳುವಿರಿ. ನಿಮ್ಮ ಬದುಕಿನಲ್ಲಿ ಬದಲಾವಣೆ ಅನಿವಾರ್ಯವಾಗಿ ಮಾಡಿಕೊಳ್ಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು. ಮಹಿಳಾ ಅಧಿಕಾರಿಗಳಿಂದ ಕಿರಿಕಿರಿ ಹೆಚ್ಚು. ಸಹೋದ್ಯೋಗಿಗಳಿಗೆ ಸಹಕರಿಸಿ. ಮೋಜಿನ ಸುತ್ತಾಟವು ಹೆಚ್ಚಾಗಬಹುದು. ಕಾನೂನು ಸಲಹೆಗಾರರಿಗೆ ಆದಾಯ ಹೆಚ್ಚಾಗುತ್ತದೆ. ಬಂಧುಗಳ ಜೊತೆ ವಾಗ್ವಾದ ಬೇಡ ಇಂದು. ತುಲನಾತ್ಮಕ ಅಧ್ಯಯನ ಮಾಡುವವರಿಗೆ ಸರಿಯಾದ ಮಾಹಿತಿ ಕೊರತೆ. ಇಂದು ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳಬಹುದು.

ಮಿಥುನ ರಾಶಿ: ನಿಮಗೆ ಬೇಕಾದವರನ್ನು ಹತ್ತಿರವೇ ಇಟ್ಟುಕೊಳ್ಳುವಿರಿ. ನಿಮ್ಮ ಕಣ್ಣು ಇಲ್ಲದಿದ್ದರೂ ಎಲ್ಲವೂ ಸುಂದರವೇ. ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಗೆಳೆತನದಲ್ಲಿ ಆಕಸ್ಮಿಕವಾಗಿ ದೂರವಾಗುವುದು ಬರಲಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಹೆಚ್ಚುತ್ತಿರುವ ಆದಾಯದಿಂದ ದುರಭ್ಯಾಸವನ್ನು ಬೆಳೆಸಿಕೊಳ್ಳಿ. ಶಿಕ್ಷಕರಿಗೆ ವೇತನದಲ್ಲಿ ಹೆಚ್ಚಳ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. ನಿಮ್ಮ ಪ್ರಭಾವವು ಪ್ರತ್ಯಕ್ಷವಾಗಿ ಕಾರ್ಯ ಮಾಡಿದರೂ ಪರೋಕ್ಷವಾಗಿ ಆಗದು. ನಿಮ್ಮ ಮಕ್ಕಳ ನಡವಳಿಕೆಯಿಂದ ಬೇಸರ ಆಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿ. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ತೃಪ್ತಿ ಸಿಗದು. ತಂದೆಯ ಆರೋಗ್ಯವು ಹದ ತಪ್ಪಬಹುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಲಲಿತಕಲೆಗಳಲ್ಲಿ ನಿಮ್ಮ ಛಾಪು ಮೂಡಿಸುವ ಪ್ರಯತ್ನ ಇರುವುದು.

ಕರ್ಕಾಟಕ ರಾಶಿ: ನಿರುದ್ದೇಶದ ಪ್ರಯಾಣದಿಂದ ಒತ್ತಡದ ಮನಸ್ಸು ಹಗುರಾಗಲಿದೆ. ಪಾಠ್ಯ ಚಟುವಟಿಕೆಗಳ ಬಗ್ಗೆ ಗಮನ ಕಡಿಮೆಯಾಗುವುದು. ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಗಾತಿಯ ಅನುಮತಿ ಪಡೆಯದೇ ಮಾಡುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಅನವಶ್ಯಕ ಸಾಲಗಳಿಂದ ದೂರವಿರಿ. ಸಾಮಾಜಿಕ ಕಾರ್ಯವನ್ನು ಸಮಯ ಹೊಂದಿಸಿ ಮಾಡುವರು. ಹಳೆ ಮಿತ್ರರನ್ನು ಭೇಟಿಯಾಗುವಿರಿ. ಸರ್ಕಾರಿ ನೌಕರರಿಗೆ ಹೆಚ್ಚಿನ ಗಳಿಕೆಯಾಗಲಿದೆ. ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಕ್ಕೆ ತಯಾರಿ ನಡೆಸುವುದು. ಮುಖ್ಯ ಉದ್ಯಮದ ಜೊತೆ ಇನ್ನಾದರೂ ಸಣ್ಣ ಖರ್ಚಿಗೆ ಬೇಕಾದುದನ್ನು ಮಾಡಿಕೊಳ್ಳುವಿರಿ. ನಿಮ್ಮ ಆಸೆಯನ್ನು ನೀಡಲು ಸಾಕಷ್ಟು ಪ್ರಯತ್ನವನ್ನು ಪ್ರಾರಂಭಿಸುತ್ತದೆ. ಇಂದಿನ ದುಡಿಮೆಗೆ ಅಲ್ಪ ಶ್ರಮವಾದರೂ ಇರಲಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನೆರಮನೆಯವರ ಜೊತೆ ವಾದ ಮಾಡಬೇಕಾದೀತು.

ಸಿಂಹ ರಾಶಿ: ನಿಮ್ಮ ಪರಿಚಯವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಳ್ಳಿ. ಸಮಾನತೆಯನ್ನು ನಿಮ್ಮ ಕೆಳಗೆ ಬರುವ ಎಲ್ಲ ವ್ಯಕ್ತಿಗಳಲ್ಲಿ ತೋರಿಸುತ್ತದೆ. ನೈಪುಣ್ಯತೆಯು ಇಂದು ನಿಮ್ಮ ಕೈ ಹಿಡಿಯದೇ ಇರಬಹುದು. ಮನೆಯಲ್ಲಿ ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ವಿಚಾರಿಸಬಹುದು. ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಇಂದಿನ ನಿಮ್ಮ ಕಾರ್ಯದಲ್ಲಿ ತಾಳ್ಮೆ ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಜಯಿಸಿ. ಹೆಚ್ಚಲಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಆಗುತ್ತದೆ. ನಿಮ್ಮ ಉಪಸ್ಥಿತಿಯೇ ಇಂದು ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಪಡೆಯಲು ಹೊಸ ತಂತ್ರವನ್ನು ರೂಪಿಸಬಹುದು. ನಿಮ್ಮ ಜೀವನದಲ್ಲಿ ಹೊಸ ಬರುವುದರಿಂದ ಸಂತೋಷವಾಗಿ ಇರುತ್ತದೆ. ಇಬ್ಬರ ಸ್ನೇಹವು ನಿಮ್ಮ ಕಾರಣದಿಂದ ದೂರವಾಗಲಿದೆ. ಆರೋಗ್ಯವು ಚೆನ್ನಾಗಿ ಇರಲಿದೆ ಆಲಸ್ಯವನ್ನು ಬಿಡಬೇಕಾದೀತು. ಈ ದಿನ ತಂದೆ ತಾಯಿಯ ಬೆಂಬಲವು ಪೂರ್ಣವಾಗಿ ಇರುವುದು. ಅವರಿಂದ ಆರ್ಥಿಕ ಸಹಾಯವೂ ದೊರೆಯಬಹುದು.

ಕನ್ಯಾ ರಾಶಿ: ನಿಮಗೆ ವಿದ್ಯೆಗಿಂತ ಹೆಚ್ಚಾಗಿ ಕೌಶಲದ ಕಾರಣ ಉದ್ಯೋಗ ಪ್ರಾಪ್ತಿಯ ಸಾಧ್ಯತೆ ಇದೆ. ನ್ಯಾಯಸಮ್ಮತ ವ್ಯವಸ್ಥೆ ಬಿಟ್ಟುಹೋಗುವುದು ಸರಿಯಾಗದು. ಬಿಡುವಿನ ವೇಳೆಯನ್ನು ಮಕ್ಕಳು ದುರುಪಯೋಗ ಮಾಡಿಕೊಳ್ಳುತ್ತಾರೆ. ಯಾವುದಾದರೂ ಕೆಲಸವನ್ನು ಕೊಡುತ್ತಲೇ ಆತನ ಸರಿಯಾದ ದಾರಿಗೆ ತರಬೇಕಾದೀತು. ಮನೋರಂಜನೆ ನಿಮಗೆ ಅನಿವಾರ್ಯವಾಗುವುದು. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಹೂಡಿಕೆ ಮಾಡಿ. ಕೆಲಸ ಪ್ರತಿ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುವುದು. ಹಳೆಯ ಸಂಗಾತಿಯ ಸ್ಥಿತಿಯನ್ನು ಕೇಳಿ ವಿಕೃತ ಆನಂದಪಡುವಿರಿ. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡಬೇಡಿ. ನೀವು ಮುಖ್ಯವಾದ ಅವಕಾಶಗಳಿಂದ ವಂಚಿತರಾಗುವಿರಿ. ವ್ಯವಹಾರದಲ್ಲಿ ಸ್ನೇಹ ಸಲ್ಲದು. ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ. ಆಚಾತುರ್ಯದಿಂದ ಅನಂತರ ಪಶ್ಚಾತ್ತಾಪ ಪಡುವಿರಿ. ಯಾರ ಪ್ರೀತಿಯನ್ನೂ ಕಡೆಗಣಿಸುವುದು ಬೇಡ. ನಿಮಗೆ ಕಾಣಿಸಿದ್ದನ್ನು ಮಾತ್ರ ನಂಬುವಿರಿ.

ತುಲಾ ರಾಶಿ: ನಿಮ್ಮವರ ದೀರ್ಘಕಾಲದ ಅನಾರೋಗ್ಯವು ಸಕಾರಾತ್ಮಕ ಬದಲಾವಣೆ ಕಾಣದು. ಅಸಮಾಧಾನದಲ್ಲಿಯೂ ಯುಕ್ತಾಯುಕ್ತವಾದ ಮಾತುಗಳನ್ನು ಆಡುವಿರಿ. ನಿಮಗೆ ಭೂಮಿಯ ಒಳ್ಳೆಯ ಲಾಭವಾಗುವುದು. ಆದರೆ ಅದನ್ನು ಖರೀದಿಸುವ ಶಕ್ತಿ ನಿಮಗೆ ಸಿಗದೇ ಕೈಬಿಡಬೇಕಾದೀತು. ನಿಮ್ಮ ಜಾಣ್ಮೆಯಿಂದ ಇಂದಿನ ಆದಾಯವನ್ನು ಹೆಚ್ಚುಮಾಡಿಕೊಳ್ಳಿ. ನಿಮ್ಮ ವೈಯಕ್ತಿಕ ಜೀವನಕ್ಕೆ ಚ್ಯುತಿ ಬಾರದಂತೆ ವ್ಯವಹರಿಸುವಿರಿ. ನಿಮ್ಮ ಸಹಾಯಕತೆಯನ್ನು ಮನೆಯವರ ಮೇಲೆ ಹಾಕುವ ಸಾಧ್ಯತೆಯಿದೆ. ಬಂಧುಗಳ ಜೊತೆ ನಿಮ್ಮ ಸಂಬಂಧವು ಗಟ್ಟಿಯಾಗುವುದು. ಆದಾಯಕ್ಕೆ ತಕ್ಕಂತೆ ಜೀವನ ಇಟ್ಟುಕೊಳ್ಳಿ. ಸ್ಪರ್ಧಾತ್ಮಕ ವಿಚಾರಕ್ಕೆ ಹೆಚ್ಚು ಸಿದ್ಧತೆ ಅಗತ್ಯ. ನೀವು ಸಂಗಾತಿಗೆ ಕೊಡುವ ಅಚ್ಚರಿಯು ಹಳಸಿರುವುದು. ನಿಮ್ಮ ಹೊಸ ವಾಹನ ಖರೀದಿಯ ಕನಸು ನನಸಾಗಬಹುದು. ಬಂಧುಗಳ ಸಲಹೆಯು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಸಣ್ಣ ಲೆಕ್ಕಾಚಾರವೇ ನಿಮ್ಮ ಉಳಿತಾಯದ ಮೂಲವಾಗಿದೆ.

ವೃಶ್ಚಿಕ ರಾಶಿ: ನಿಮ್ಮ ಉದ್ದೇಶವನ್ನು ಸಾಧಿಸಲು ಆಗದೇ ಇರಲು ಕಾರಣ ಬಂಧಗಳು. ಹೇಗಾದರೂ ಮಾಡಿ ಹತ್ತಿಕ್ಕು ಪ್ರಯತ್ನವನ್ನು ಪ್ರಬಲವಾಗಿ ಮಾಡುವರು. ವೃತ್ತಿಯ ವಿಚಾರದಲ್ಲಿ ಹಿರಿಯರಿಂದ ತಾತ್ಕಾಲಿಕ ಸಮಾಧಾನ ಸಿಗಲಿದೆ. ಬಹಳ ಒತ್ತಡವಿರುವ ಕಾರಣ ಬರುವ ಕಾರ್ಯವನ್ನು ಬಹಳ ಚಾಕಚಕ್ಯತೆಯಿಂದ ಮಾಡಬೇಕಾಗುವುದು. ಅಪಮಾನದಿಂದ ಆದದನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಲು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ವಿರೋಧಿಗಳ ಪಿತೂರಿಯಿಂದ ಅರ್ಧಕ್ಕೆ ನಿಲ್ಲಬಹುದು. ಜನರನ್ನು ದೂರುವುದರಿಂದ ನಿಮಗೆ ಸಮಾಧಾನ ಸಿಗಲಿದೆ. ಖರೀದಿಗೆ ಹೋದರೆ ಒಂದಿಲ್ಲೊಂದು ಬೇಕೆನಿಸುವುದು. ಯೋಚಿಸದ ಸಂಬಂಧಗಳು ಯಾವಾಗಲೂ ನಿಮ್ಮ ಹತ್ತಿರ ಬರಬಹುದು. ಜೀವನ ಸಂಗಾತಿಯ ಜೊತೆ ಯಾವುದಾದರೂ ವಿಚಾರಕ್ಕೆ ಕಲಹವಾಗಬಹುದು. ನೂತನ ಕಾರ್ಯದ ಆರಂಭಕ್ಕೆ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ಪಡೆಯಿರಿ. ಸಣ್ಣ ವಿವಾದಗಳು ಆಗಬಹುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.

ಧನು ರಾಶಿ: ದಿನವಿಡೀ ಸಂಗಾತಿಯನ್ನು ಅನ್ಯಾನ್ಯ ಕಾರಣಕ್ಕೆ ಪೀಡಿಸುವಿರಿ. ಇದು ಗಂಭೀರವಾದರೆ ತಲೆದಂಡ ತೆರಬೇಕಾಗುವುದು. ನಿಮ್ಮ ಔದಾಸೀನ್ಯವು ಮಕ್ಕಳ ಮೇಲೆ ಪರಿಣಾಮ ಬೀರುವುದು. ಮಾನಸಿಕವಾಗಿ ಇಂದು ಏರಿಳಿತಗಳು ನಿಮಗೆ ಹೆಚ್ಚಾಗುವುದು. ಎಲ್ಲವನ್ನೂ ನಕಾರಾತ್ಮಕವಾಗಿ ಭಾವಿಸುವಿರಿ. ಇಂದು ಸರ್ಕಾರಿ ನೌಕರರಿಗೆ ಹೆಚ್ಚಿನ ಲಾಭವಿದೆ. ಹಣಕಾಸಿನ ವ್ಯವಹಾರದಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿಡುವುದು ಉತ್ತಮ. ಆರ್ಥಿಕ ವಿಚಾರದಲ್ಲಿ ಸ್ನೇಹಿತರ ನಡುವೆ ಶತ್ರುತ್ವ ಉಂಟಾಗಬಹುದು. ಅಧಿಕಾರಿಗಳಿಂದ ಪರಿಶೀಲನೆ ಆಗಬಹುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವೂ ಬೇಡ. ಧೈರ್ಯದಿಂದ ಹೊಸ ಯೋಜನೆಗಳನ್ನು ಆರಂಭಿಸುವಿರಿ. ನಿಮ್ಮ ತಿಳುವಳಿಕೆಗಳಿಂದ ಬರುವ ತೊಂದರೆಯನ್ನು ಪರಿಹರಿಸಿಕೊಳ್ಳಿ. ಯಾವುದೇ ರೀತಿಯ ಅಪಘಾತವು ಆಗಬಹುದು. ಅತಿಯಾದ ಒತ್ತಾಯದಿಂದ ನಿಮಗೇ ತೊಂದರೆ. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು.

ಮಕರ ರಾಶಿ: ನಿಮಗಿಂತ ಮೇಲಿನ ಸ್ಥಾನದವರು ನೀವೇ ಅವರಂತೆ ವರ್ತಿಸುತ್ತಾರೆ. ಗೃಹೋಪಯೋಗಿ ಬಳಕೆಯ ವ್ಯಾಪಾರದಲ್ಲಿ ಆದಾಯ ಕಂಡರೂ ಕೆಲವರಿಂದ ವಂಚನೆಯೂ ಆಗುವುದು.’ ಆಸ್ತಿ ಹಂಚಿಕೆಯ ಬಗ್ಗೆ ನಿಮಗೆ ಸಮಾಧಾನ ಸಿಗದು. ಯಾವ ಸೋಲಿಗೂ ಹತಾಶರಾಗುವುದು ಬೇಡ. ನಿಮ್ಮಲ್ಲಿ ತುಂಬಾ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲ ಉಂಟಾಗುತ್ತದೆ. ಯಾವುದನ್ನೂ ಅತಿಯಾಗಿ ಮೈಮೇಲೆ ಎಳೆದುಕೊಳ್ಳುವುದು ಬೇಡ. ಮನೆ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಇದು ನಿಮ್ಮ ಅಸಹಾಯಕತೆಯನ್ನು ತೋರಿಸುವುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ನೆಮ್ಮದಿ ದೊರೆಯುವುದು. ಪ್ರಯಾಣದ ಸಮಯದಲ್ಲಿ ಆದಷ್ಟು ಎಚ್ಚರಿಕೆ ಇರಲಿ. ಈ ದಿನ ಸಣ್ಣ ಓಡಾಟಗಳನ್ನು ಮಾಡುವಿರಿ. ವಿದೇಶಕ್ಕೆ ಹೋಗುವ ಕನಸು ಕೂಡ ನಿಜವಾಗಬಹುದು. ಪ್ರಯಾಣದಲ್ಲಿ ಎಚ್ಚರ ತಪ್ಪುವ ಸಾಧ್ಯತೆ ಇದೆ. ಮಾತಿನಿಂದ ಹತ್ತಿರದವರನ್ನು ದೂರಮಾಡಿಕೊಳ್ಳಿ. ಕಾರ್ಯವನ್ನು ಹಾಳುಮಾಡಲು ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು.

ಕುಂಭ ರಾಶಿ: ನೀವು ಹಾಕುವ ಷರತ್ತುಗಳಿಗೆ ಪಾಲುದಾರಿಕೆಯಲ್ಲಿ ಒಪ್ಪಿಗೆ ಸಿಗದು. ಸಾಮಾಜಿಕ ವ್ಯವಸ್ಥೆಯಲ್ಲಿ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ಕಷ್ಟ. ನಿಮ್ಮ ಹಿಡಿತದಿಂದ ಜವಾಬ್ದಾರಿ ತಪ್ಪಿಹೋಗಬಹುದು. ಸುಮ್ಮನೆ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡೆತಡೆಗಳು ಬರುತ್ತವೆ. ಬಾಯಿ ತಪ್ಪಿ ಆಡಿದ ಮಾತಿಗೂ ಬೆಲೆ ಕೊಡುವಿರಿ. ಸ್ವಲ್ಪ ಯೋಚಿಸಿದರೆ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಜಯ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಅನವಶ್ಯಕ ಗೊಂದಲಕ್ಕೆ ಒಳಗಾಗಬಹುದು. ಯಾರದೋ ಮಾತನ್ನು ಕೇಳಿ ಹೂಡಿಕೆ ಮಾಡುವುದು ಬೇಡ. ಬೇಕಿದ್ದರೆ ಭೂಮಿಯ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಇದೆ. ಆಸೆ ಆಮಿಷಗಳಿಗೆ ಬಲಿಯಾಗದೆ ನಿಮ್ಮ ಗುರಿಯತ್ತ ಗಮನ ನೀಡಿರಿ. ಸ್ನೇಹಿತರ ಕಾರಣಕ್ಕೆ ತೊಂದರೆಯಲ್ಲಿ ಸಿಕ್ಕಿಬೀಳುವಿರಿ.

ಮೀನ ರಾಶಿ: ನಿಮ್ಮದೇ ದೊಡ್ಡ ಕಷ್ಟವೆಂದು ಭಾವಿಸಿದರೆ ನಿಮ್ಮ ನೋವೇ ಅಧಿಕವಾಗಿರುವುದು. ಹೂಡಿಕೆಯನ್ನು ನೀವು ಸಮಯದವರೆಗೆ ಹಿಂಬಾಲಿಸುವಿರಿ. ದೊಡ್ಡ ಉದ್ಯೋಗವನ್ನು ಪಡೆಯುವ ಆಸೆ ಇರುವುದು. ಇಂದು ಹೆಚ್ಚುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಸಮಸ್ಯೆ ಸರಿಯಾಗುವುದು. ನಿಮಗೇ ಗೊತ್ತಿಲ್ಲದಂತೆ ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗುವುದು. ಜವಾಬ್ದಾರಿಯಲ್ಲಿ ಆಗು ಹೋಗುಗಳು ನಿಮ್ಮ ಮೇಲೆ ಬರುವುದು. ನಿಮ್ಮ ಮಾನಸಿಕ ಬಲವು ಅಧಿಕವಾಗುವುದು. ಅನುಭವಯುಕ್ತವಾದ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರಲಿವೆ. ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಲಿ ಸಂದರ್ಭವು ಬರಲಿದೆ ನೀವು ಮಾತನಾಡುವಾಗ ಉದ್ವೇಗಕ್ಕೆ ಒಳಗಾಗದೇ ಇರಿ. ಸಂಗಾತಿಯ ಕೋಪಕ್ಕೆ ಕಾರಣವನ್ನು ಸಮಾಧಾನ ಮಾಡಲು ಪ್ರಯತ್ನಿಸಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸದ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.

ಲೋಹಿತ ಹೆಬ್ಬಾರ್-8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *