
<p>Bigg Boss Kannada Season 12: ಸೂರಜ್ ಸಿಂಗ್ ಅವರು ನಿರ್ಧಾರಗಳನ್ನು ತಗೊಳ್ಳುವಾಗ, ತುಂಬ ಯೋಚನೆ ಮಾಡಿ ತಗೊಳ್ತಾರೆ. ಹಾಗೆಯೇ ರಿಷಾ ಗೌಡ ಮುಂದೆ ಮಾತಾಡಿ, ನನಗೂ ಕೂಡ ಮಾತನಾಡೋಕೆ ಬರತ್ತೆ ಎಂದು ತೋರಿಸಿಕೊಟ್ಟಿದ್ದರು. ಈಗ ಅವರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ನಿಜಕ್ಕೂ ಏನಾಯ್ತು? </p><img><p>ಈ ವಾರ ಪೂರ್ತಿ ಫಿಸಿಕಲ್ ಟಾಸ್ಕ್ ಇರುತ್ತದೆ. ಇಲ್ಲಿ ವ್ಯಕ್ತಿತ್ವದ ಆಟಗಳು ಇರುತ್ತವೆ, ಭಾವನಾತ್ಮಕವಾಗಿ ನೋವಾಗುವ ಸಂದರ್ಭ ಕೂಡ ಬರುವುದು. ಈಗ ಮನೆಯವರು ಸ್ಪರ್ಧಿಗಳಿಗೋಸ್ಕರ ಪತ್ರ ಬರೆದಿದ್ದರು.</p><img><p>ಏಳು ಸದಸ್ಯರ ಮನೆಯ ಪತ್ರಗಳ ಪೈಕಿ ಇಬ್ಬರ ಪತ್ರವನ್ನು ಹರಿದು ಹಾಕಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ರಿಷಾ ಗೌಡ ಅವರು ತಮಗೆ ಕೊಟ್ಟ ಸೂಚನೆಯನ್ನು ಪಾಲಿಸಿದ್ದಾರೆ.</p><img><p>ಆಗ ರಿಷಾ ಗೌಡ ಅವರು ಸ್ಪಂದನಾ ಸೋಮಣ್ಣ, ಸೂರಜ್ ಸಿಂಗ್ ಅವರ ಮನೆಯ ಪತ್ರವನ್ನು ಹರಿದು ಹಾಕಿದ್ದಾರೆ. ಇದನ್ನು ನೋಡಿ ಸ್ಪಂದನಾ ಸೋಮಣ್ಣ, ಸೂರಜ್ ಅಂತೂ ತುಂಬ ಬೇಸರ ಮಾಡಿಕೊಂಡಿದ್ದಾರೆ.</p><img><p>ಪತ್ರ ಹರಿದು ಹೋಯ್ತು ಎಂದು ಸ್ಪಂದನಾ ಸೋಮಣ್ಣ ಅವರು ಬೇಸರ ಮಾಡಿಕೊಂಡಿದ್ದಾರೆ, ಆಮೇಲೆ ಧನುಷ್ ಗೌಡ ಅವರು ಬಂದು ಸಮಾಧಾನ ಮಾಡಿದ್ದಾರೆ.</p><img><p>ಇನ್ನೊಂದು ಕಡೆ ಸೂರಜ್ ಅವರು, “ನಾನು ಏನು ಮಾಡಿದೆ? ಕೊಡೋರಿಗೆ ತಗೊಳೋ ತಾಕತ್ತು ಇರಬೇಕಿತ್ತು?” ಎಂದು ಹೇಳಿದ್ದಾರೆ. ಮಸಿ ಬಳಿಯುವ ಟಾಸ್ಕ್ನಲ್ಲಿ ರಿಷಾ ಗೌಡಗೆ ಮಸಿ ಬಳಿದಿದ್ದ ಸೂರಜ್, ಅವರು ಸಖತ್ ಕೌಂಟರ್ ಕೊಟ್ಟಿದ್ದರು. ಇದು ರಿಷಾ ಪಿತ್ತ ನೆತ್ತಿಗೇರಿಸಿದೆ.</p><img><p>“ತಗೋ, ನಿನ್ನೆ ನೀನು ಆಡಿದ ಆಟವನ್ನು ನೋಡಿದೆ. ಈ ಕಳ್ಳನನ್ನು ನಂಬಿದರೂ ಈ ಮಳ್ಳ ನನ್ ಮಗನನ್ನು ನಂಬಲ್ಲ. ಆ ಮುಗ್ಧ ಮುಖಗಳನ್ನು ನೋಡೋಕೆ ಆಗೋದಿಲ್ಲ” ಎಂದು ರಿಷಾ ಗೌಡ ಹೇಳಿದ್ದಾರೆ.</p>
Source link
BBK 12: ಗಳಗಳನೆ ಅತ್ತ ಸೂರಜ್ ಸಿಂಗ್; ವೀಕ್ನೆಸ್ ಕಂಡುಹಿಡಿದ್ರು, ದ್ವೇಷ ತೀರಿಸಿಕೊಂಡ್ರು! ನಟಿಯ ರಿವೆಂಜ್!