‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ಇತ್ತೀಚೆಗೆ ಒಂದು ಘಟನೆ ನಡೆಯಿತು. ರಿಷಾ ಅವರು ಗಿಲ್ಲಿ ನಟನ ಮೇಲೆ ಕೈ ಮಾಡಿದರು. ಅವರು ಗಂಭೀರವಾಗಿಯೇ ಹೊಡೆದರು. ಆ ಬಳಿಕ ಗಿಲ್ಲಿ ನಟನ ತಳ್ಳಿದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ರಿಷಾ ಅವರನ್ನು ಹೊರಕ್ಕೆ ಹಾಕಬೇಕು ಎಂಬ ಕೂಗು ಬಂದಿದೆ. ಹೀಗಿರುವಾಗಲೇ ಅವರಿಗೆ ವಿಶೇಷ ಅಧಿಕಾರ ಸಿಕ್ಕಿದ್ದು, ಎಲ್ಲರ ಅಸಮಾಧಾನಕ್ಕೆ ಕಾರಣ.
ಬಿಗ್ ಬಾಸ್ನಲ್ಲಿ ಯಾರಾದರೂ ಸ್ಪರ್ಧಿ ಮೇಲೆ ಕೈ ಮಾಡಿದರೆ ಆ ಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕದಿದ್ದರೆ. ಕಳೆದ ಸೀಸನ್ಗಳಲ್ಲಿ ಈ ರೀತಿ ಮಾಡಲಾಗಿದೆ. ಆದರೆ, ರಿಷಾ ಅವರನ್ನು ಮಾತ್ರ ಇಟ್ಟುಕೊಳ್ಳಲಾಗಿದೆ. ಇದು ಚರ್ಚೆಗೆ ಕಾರಣವಾಗಿದೆ. ಹೀಗಿರುವಾಗಲೇ ರಿಷಾಗೆ ವಿಶೇಷ ಅಧಿಕಾರವೂ ಸಿಕ್ಕಿದೆ.
ಸದ್ಯ ಈ ವಾರ ಯಾವುದೇ ಟಾಸ್ಕ್ ನಲ್ಲಿ ಬಿಗ್ ಬಾಸ್ ನೀಡುತ್ತಿಲ್ಲ. ಬದಲಿಗೆ ಮನೆಯವರಿಂದ ಪತ್ರ ತರಿಸಲಾಗುತ್ತಿದೆ. ಇಬ್ಬರ ಪತ್ರ ಬಂದರೆ ಒಬ್ಬರ ಪತ್ರವನ್ನು ಮಾತ್ರ ಓದಲು ಅಕವಾಶ ಇರುತ್ತದೆ. ಮೊದಲ ಸುತ್ತಿನಲ್ಲಿ ಇದನ್ನು ನಿರ್ಧರಿಸಿದ್ದು ಮನೆಯ ಕ್ಯಾಪ್ಟನ್ ಧನುಷ್. ಆ ಬಳಿಕ ಏಳು ಸದಸ್ಯರು ಇಬ್ಬರ ಪತ್ರವನ್ನು ಹರಿದು ಹಾಕಬೇಕು ಎಂದು ಬಿಗ್ ರಿಷಾಗೆ ಅಧಿಕಾರ ನೀಡಲಾಗಿದೆ.
ಈ ವೇಳೆ ರಿಷಾ ಅವರು, ಸ್ಪಂದನಾ ಹಾಗೂ ಸೂರಜ್ ಪತ್ರಗಳನ್ನು ಹರಿದು ಹಾಕಿದರು. ಸದ್ಯ ಸೋಮವಾರದ ಎಪಿಸೋಡ್ನಲ್ಲಿ ಆದ ಘಟನೆಗೆ ಸುದೀಪ್ ಅವರು ನ್ಯಾಯ ಒದಗಿಸಿದ್ದಾರೆ. ಅಲ್ಲಿಯವರೆಗೂ ರಿಷಾ ಅವರನ್ನು ಇಟ್ಟುಕೊಳ್ಳುವುದೂ ಅಲ್ಲದೆ, ಅವರಿಗೆ ವಿಶೇಷ ಅಧಿಕಾರ ಕೊಡುವ ಅವಶ್ಯಕತೆ ಏನಿತ್ತು ಎಂಬುದು ಅನೇಕರ ಪ್ರಶ್ನೆ. ಇದಕ್ಕೆ ಬಿಗ್ ಬಾಸ್ ಕಡೆಯಿಂದ ಅಂತೂ ಸ್ಪಷ್ಟನೆ ಸಿಗೋದು ಅನುಮಾನವೇ.
ಇದನ್ನೂ ಓದಿ: ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ತಮಾಷೆಯಲ್ಲಿ ಶುರುವಾದ ಗಿಲ್ಲಿ ಹಾಗೂ ರಿಷಾ ಜಗಳ ಗಂಭೀರ ಸ್ವರೂಪ ಪಡೆಯಿತು. ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿದರು. ಆದರೆ, ಗಿಲ್ಲಿಗೆ ಮಾತ್ರ ಉತ್ತರಿಸಲು ಹೋಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.