ಮೈಸೂರಿನಲ್ಲಿ ಫ್ಲೈಓವರ್ ವಿರೋಧಿಸಿ ಸಿಎಂಗೆ ಪತ್ರ ಬರೆದ ಯದುವೀರ್
ಮೈಸೂರು, ನವೆಂಬರ್ 5: ಮೈಸೂರಿನಲ್ಲಿ ಫ್ಲೈ (ಮೈಸೂರು ಫ್ಲೈಓವರ್) ನಿರ್ಮಾಣವನ್ನು ವಿರೋಧಿಸಿ ಸಂಸದ ಯದುವೀರ್, ಸಿಎಂ ಸಿದ್ದರಾಮಯ್ಯನವರಿಗೆ (ಸಿದ್ದರಾಮಯ್ಯ) ಸುದೀರ್ಘ ಪತ್ರ ಬರೆದಿದ್ದಾರೆ. ಮೈಸೂರು ನಗರ ಬೆಳೆಯುತ್ತಲೇ ಇರುವ ಅಭಿವೃದ್ಧಿಯು ಪಾರದರ್ಶಕವಾಗಿ ಹೇಳಿರುವ ಅವರು, ಫ್ಲೋಓವರ್ಗಳ ಬದಲಾಗಿ ಯಾವ ಕ್ರಮ ಕೈಗೊಳ್ಳಬಹುದೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯದುವೀರ್ ಬರೆದ ಪತ್ರದಲ್ಲೇನಿದೆ.
ಯದುವೀರ್ ಸಿಎಂಗೆ ಮನವಿ ಮಾಡಿರುವ ಪತ್ರದಲ್ಲಿ, ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ಮೈಸೂರಿನ ಪರಂಪರೆಯನ್ನು ಸಂರಕ್ಷಿಸಬೇಕಾಗಿದೆ. ಮೈಸೂರು ನಗರ ಬೆಳೆಯುತ್ತಲೇ ಇದೆ, ನಮ್ಮ ಅಭಿವೃದ್ಧಿಯು ಪಾರದರ್ಶಕವಾಗಿ, ದತ್ತಾಂಶ ಆಧಾರಿತ ಮತ್ತು ಪರಂಪರೆಯಲ್ಲಿ ಬೇರೂರಿರಬೇಕು. ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯ ಪ್ರಸ್ತಾವಿತ ಮೇಲ್ಸೇತುವೆಗಳ ಬಗ್ಗೆ ನನ್ನ ಕಳವಳವನ್ನು ವ್ಯಕ್ತಪಡಿಸಿ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದೇನೆ. ಯೋಜಿತವಲ್ಲದ ನಗರ ವಿಸ್ತರಣೆಗಾಗಿ ಜೀವಂತ ಪರಂಪರೆಯ ನಗರವಾಗಿ ಮೈಸೂರಿನ ಗುರುತನ್ನು ಅಳಿಸಬಾರದು. ತನ್ನ ಸೊಬಗು, ಹಸಿರು ಅಥವಾ ನನ್ನ ಸಾಂಸ್ಕೃತಿಕತೆಯನ್ನು ಕಳೆದುಕೊಂಡರೆ ನಮಗೆ ಚಲಿಸುವ ಆಧುನಿಕ ಮೈಸೂರಿನ ನಿರ್ಮಾಣ ಗುರಿಯಾಗುವಂತೆ ಬರೆದಿದ್ದಾರೆ.
ಪತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಲಾಗಿದೆ
– ಪ್ರಸ್ತಾವನೆಗಳಲ್ಲಿ ಸಾರ್ವಜನಿಕವಾಗಿ ಸಂಚಾರ ಅಧ್ಯಯನ ಅಥವಾ ನಾಗರಿಕ ಸಮಾಲೋಚನೆ ಇಲ್ಲ. – ಇಂತಹ ದೊಡ್ಡ ಪ್ರಮಾಣದ ಯೋಜನೆಗಳು ಮೈಸೂರಿನ ಪರಂಪರೆಯ ಭೂದೃಶ್ಯಕ್ಕೆ ಬದಲಾಗಿ ಹಾನಿಯನ್ನುಂಟುಮಾಡುತ್ತವೆ. – ನೂರಾರು ಹೆಮ್ಮರಗಳನ್ನು ಕಡಿಯಬಹುದು, ಇದು ಪರಿಸರ ವಿಜ್ಞಾನ ಮತ್ತು ನಗರದ ಸೌಂದರ್ಯದ ಮೇಲೂ ಪರಿಣಾಮ. – ನಗರದ ಸೌಂದರ್ಯ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಶಾಶ್ವತವಾಗಿ ಬದಲಾಯಿಸಬಹುದು.
ಎಕ್ಸ್ ನಲ್ಲಿ ಯದುವೀರ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ
ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ಮೈಸೂರಿನ ಪರಂಪರೆಯನ್ನು ಸಂರಕ್ಷಿಸಬೇಕಾಗಿದೆ.
ಮೈಸೂರು ನಗರ ಬೆಳೆಯುತ್ತಲೇ ಇದೆ, ನಮ್ಮ ಅಭಿವೃದ್ಧಿಯು ಪಾರದರ್ಶಕವಾಗಿ, ದತ್ತಾಂಶ ಆಧಾರಿತ ಮತ್ತು ಪರಂಪರೆಯಲ್ಲಿ ಬೇರೂರಿರಬೇಕು. ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯ ಪ್ರಸ್ತಾವಿತ ಮೇಲ್ಸೇತುವೆಗಳ ಬಗ್ಗೆ ನನ್ನ… pic.twitter.com/r1Uj46QRX3
— ಯದುವೀರ್ ಒಡೆಯರ್ (@yaduveerwadiyar) ನವೆಂಬರ್ 4, 2025
ಫ್ಲೈಓವರ್ಗಳ ಬದಲಾಗಿ, ಅಭಿವೃದ್ಧಿಗಾಗಿ ಯಾವ ಅಂಶಗಳ ಮೇಲೆ ಕೇಂದ್ರೀಕರಿಸಬಹುದೆಂದು ಬರೆದಿರುವ ಯದುವೀರ್, ಸ್ಮಾರ್ಟ್ ಸಂಚಾರ ನಿರ್ವಹಣೆ ಮತ್ತು ಸಿಂಕ್ರೊನೈಸ್ ಮಾಡಿದ ಸಂಕೇತಗಳು, ಸಾರ್ವಜನಿಕ ಸಾರಿಗೆ ಮತ್ತು ಪ್ರವೇಶಸಾಧ್ಯತೆಯ ಸುಧಾರಣೆ ಮತ್ತು ಅಕ್ರಮ ಪಾರ್ಕಿಂಗ್ ಮತ್ತು ಅತಿಕ್ರಮಣಗಳ ವಿರುದ್ಧ ಕಠಿಣ ಕ್ರಮ ಈ ಎಲ್ಲಾ ಸಿಎಂ ಮುಂದಿಟ್ಟಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.