Headlines

Salman Khan ಗೋಲ್ಡನ್ ಹಾರ್ಟ್ ಬಾಯ್, ನಿಜವಾಗಿಯೂ ದೇವರು ಕಳುಹಿಸಿದ ವ್ಯಕ್ತಿ: ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ | Salman Khan A True Golden Heart Boy Says Choreographer Chinni Prakash Gvd

Salman Khan ಗೋಲ್ಡನ್ ಹಾರ್ಟ್ ಬಾಯ್, ನಿಜವಾಗಿಯೂ ದೇವರು ಕಳುಹಿಸಿದ ವ್ಯಕ್ತಿ: ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ | Salman Khan A True Golden Heart Boy Says Choreographer Chinni Prakash Gvd



Salman Khan ಗೋಲ್ಡನ್ ಹಾರ್ಟ್ ಬಾಯ್, ನಿಜವಾಗಿಯೂ ದೇವರು ಕಳುಹಿಸಿದ ವ್ಯಕ್ತಿ: ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ | Salman Khan A True Golden Heart Boy Says Choreographer Chinni Prakash Gvd

ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಸಲ್ಮಾನ್ ಖಾನ್ ಅವರನ್ನು ಗೋಲ್ಡನ್ ಹಾರ್ಟ್ ಬಾಯ್ ಎಂದು ಕರೆದಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್‌ನ ಅತಿದೊಡ್ಡ ಮತ್ತು ಉದಾರ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ.

ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಸಹಾಯ ಮಾಡುವ ವ್ಯಕ್ತಿ ಮತ್ತು ಗೋಲ್ಡನ್ ಹಾರ್ಟ್ ಬಾಯ್ ಎಂದು ಬಣ್ಣಿಸಿದ್ದಾರೆ. ಸಲ್ಮಾನ್ ಅವರಿಗೆ ಹಲವು ಬಾರಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಸದ್ಯ ಸಲ್ಮಾನ್ ‘ಬ್ಯಾಟಲ್ ಆಫ್ ಗಾಲ್ವಾನ್’ ಚಿತ್ರದಿಂದಾಗಿ ಚರ್ಚೆಯಲ್ಲಿದ್ದಾರೆ.

ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಸಲ್ಮಾನ್ ಖಾನ್ ಅವರನ್ನು ಗೋಲ್ಡನ್ ಹಾರ್ಟ್ ಬಾಯ್ ಎಂದು ಕರೆದಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್‌ನ ಅತಿದೊಡ್ಡ ಮತ್ತು ಉದಾರ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರ ಜನಪ್ರಿಯತೆ ಕೇವಲ ಸಿನಿಮಾಗಳಿಗೆ ಸೀಮಿತವಾಗಿಲ್ಲ, ಅವರು ತಮ್ಮ ಬೀಯಿಂಗ್ ಹ್ಯೂಮನ್ ಸಂಸ್ಥೆಗೂ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಸಂದರ್ಶನವೊಂದರಲ್ಲಿ ದಬಂಗ್ ಖಾನ್ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾಯ್‌ಜಾನ್ ಯಾವಾಗಲೂ ನಿರ್ಗತಿಕರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ.

ಚಿನ್ನಿ ಪ್ರಕಾಶ್ ಅವರು ಸಲ್ಮಾನ್ ಜೊತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಗೋವಿಂದ ನಂತರ ಅತಿ ಹೆಚ್ಚು ಸಿನಿಮಾಗಳನ್ನು ಸಲ್ಮಾನ್ ಜೊತೆ ಮಾಡಿದ್ದಾರೆ. ನಿರ್ದೇಶಕರು “ಸಲ್ಮಾನ್ ಅವರನ್ನು ಗೋಲ್ಡನ್ ಹಾರ್ಟೆಡ್ ಬಾಯ್ ಎಂದು ಬಣ್ಣಿಸಿದ್ದಾರೆ. ದಬಂಗ್ ಖಾನ್ ಅವರದ್ದು ತಮ್ಮದೇ ಆದ ಶೈಲಿ, ಅವರ ಮನಸ್ಸು ತುಂಬಾ ಶುದ್ಧ” ಎಂದು ಹೇಳಿದ್ದಾರೆ. ತಮ್ಮ ಬಳಿ ಕೆಲಸವಿಲ್ಲದಿದ್ದಾಗ, ಭಾಯ್‌ಗೆ ಒಂದು ಮೆಸೇಜ್ ಕಳುಹಿಸುತ್ತಿದ್ದೆ ಎಂದು ಚಿನ್ನಿ ಹೇಳಿದ್ದಾರೆ. ‘ಸಲ್ಮಾನ್, ನಾನು ಕೆಲಸ ಹುಡುಕುತ್ತಿದ್ದೇನೆ’ ಅಂತ. ಅದಾದ ನಂತರ ಅವರು ತಕ್ಷಣ ಆಕ್ಷನ್‌ಗೆ ಇಳಿಯುತ್ತಿದ್ದರು.

ಒಮ್ಮೆ ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡುವಾಗ ಸಲ್ಮಾನ್‌ಗೆ ಮೆಸೇಜ್ ಕಳುಹಿಸಿದ್ದೆ, ಆ ವಿಷಯವನ್ನು ನಾನು ಮರೆತಿದ್ದೆ. ಆದರೆ ಸಲ್ಮಾನ್ ಅಂದ್ರೆ ಸಲ್ಮಾನ್ ಅಲ್ವಾ, ಅವರಿಂದ ಫೋನ್ ಬಂತು, ‘ತಕ್ಷಣ ಬಾ, ನೀನು ಬಿಗ್ ಬಾಸ್ ನಿರ್ದೇಶನ ಮಾಡುತ್ತಿದ್ದೀಯಾ’ ಅಂದರು ಎಂದು ಒಂದು ಘಟನೆಯನ್ನು ನೆನಪಿಸಿಕೊಂಡರು. ಚಿನ್ನಿ ಹೇಳಿದಂತೆ, “ಅವರು ಹೆಚ್ಚು ಯೋಚಿಸುವುದಿಲ್ಲ, ತೆಗೆದುಕೊಳ್ಳುವ ನಿರ್ಧಾರಗಳನ್ನು ಮನಸ್ಸಿನಿಂದ ತೆಗೆದುಕೊಳ್ಳುತ್ತಾರೆ. ಬಾಲಿವುಡ್‌ನಲ್ಲಿ ಸಲ್ಮಾನ್‌ನಂತಹ ಇನ್ನೊಬ್ಬರಿಲ್ಲ,” ಸಲ್ಮಾನ್ ಪ್ರತಿಯೊಬ್ಬ ನಿರ್ಗತಿಕರನ್ನು ತಲುಪುತ್ತಾರೆ, ಅದು ಕೆಲಸ ನೀಡುವುದಾಗಿರಲಿ ಅಥವಾ ಆರ್ಥಿಕ ಸಹಾಯವಾಗಿರಲಿ – ಅವರ ಬೆಂಬಲ ಯಾವಾಗಲೂ ಇರುತ್ತದೆ.

ಅವರ ಸಹಾಯ ಬಹಳ ಮುಖ್ಯ

ಸಲ್ಮಾನ್ ತಮಗೆ ನಿರ್ದೇಶನದ ಅವಕಾಶಗಳನ್ನು ನೀಡಿದ್ದರು, ಕಾರಣಾಂತರಗಳಿಂದ ಆ ಸಿನಿಮಾಗಳನ್ನು ಮಾಡಲು ಸಾಧ್ಯವಾಗದಿದ್ದರೂ, ಅವರ ಸಹಾಯ ಬಹಳ ಮುಖ್ಯ ಎಂದು ಚಿನ್ನಿ ಪ್ರಕಾಶ್ ಹೇಳಿದ್ದಾರೆ. ಅವರು ನಿಜವಾಗಿಯೂ ದೇವರು ಕಳುಹಿಸಿದ ವ್ಯಕ್ತಿ. ಎಲ್ಲರಿಗೂ ಸಲ್ಮಾನ್ ಅವರಂತಹ ದೊಡ್ಡ ಮನಸ್ಸಿರಲು ಸಾಧ್ಯವಿಲ್ಲ. ಸಲ್ಮಾನ್ ಅವರ ಮುಂಬರುವ ಚಿತ್ರಗಳಲ್ಲಿ ‘ಬ್ಯಾಟಲ್ ಆಫ್ ಗಾಲ್ವಾನ್’ ಸದ್ಯಕ್ಕೆ ಹೆಚ್ಚು ಚರ್ಚೆಯಲ್ಲಿದೆ. ಈ ವಾರ್ ಡ್ರಾಮಾದ ಫಸ್ಟ್ ಲುಕ್ ಈಗಾಗಲೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಇದಲ್ಲದೆ, ಕಬೀರ್ ಖಾನ್ ಅವರೊಂದಿಗಿನ ಅವರ ಮುಂಬರುವ ಪ್ರಾಜೆಕ್ಟ್ ‘ಬಜರಂಗಿ ಭಾಯಿಜಾನ್ 2’ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *