Headlines

ಅವಕಾಶದ ಹೆಸರಲ್ಲಿ ಮಂಚಕ್ಕೆ ಕರೆಯುತ್ತಾರೆ: ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟ ಸಂಯುಕ್ತಾ ಹೆಗಡೆ

ಅವಕಾಶದ ಹೆಸರಲ್ಲಿ ಮಂಚಕ್ಕೆ ಕರೆಯುತ್ತಾರೆ: ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟ ಸಂಯುಕ್ತಾ ಹೆಗಡೆ



ಅವಕಾಶದ ಹೆಸರಲ್ಲಿ ಮಂಚಕ್ಕೆ ಕರೆಯುತ್ತಾರೆ: ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟ ಸಂಯುಕ್ತಾ ಹೆಗಡೆ
<p>ನಾಯಕಿಯಾಗಿ ನಿಮ್ಮ ಹೆಸರು ಘೋಷಣೆಯಾಗಿರುತ್ತದೆ. ನಿಮ್ಮ ಮನೆಮಂದಿ, ಸ್ನೇಹಿತರು, ಇಂಡಸ್ಟ್ರಿಯವರೆಲ್ಲ ನಿಮ್ಮನ್ನು ಅಭಿನಂದಿಸಿರುತ್ತಾರೆ. ಇನ್ನೇನು ಪ್ರಾಜೆಕ್ಟ್‌ ಶುರುವಾಗಬೇಕು ಅನ್ನುವಷ್ಟರಲ್ಲಿ ನಿಮ್ಮನ್ನು ಪಲ್ಲಂಗಕ್ಕೆ ಕರೆಯುತ್ತಾರೆ ಎಂದರು ಸಂಯುಕ್ತಾ ಹೆಗಡೆ.</p><img><p>‘ಕಿರಿಕ್‌ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ನಟಿ ಸಂಯುಕ್ತಾ ಹೆಗಡೆ ಕಾಸ್ಟಿಂಗ್‌ ಕೌಚ್‌ ಬಗ್ಗೆ ದನಿ ಎತ್ತಿದ್ದಾರೆ. ಪಾಡ್‌ಕಾಸ್ಟ್‌ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ನೀವು ಸಿನಿಮಾ ಪ್ರಾಜೆಕ್ಟ್‌ ಒಂದರಲ್ಲಿ ಅವಕಾಶ ಪಡೆಯುತ್ತೀರಿ ಅಂತಿಟ್ಟುಕೊಳ್ಳಿ.</p><img><p>ನಾಯಕಿಯಾಗಿ ನಿಮ್ಮ ಹೆಸರು ಘೋಷಣೆಯಾಗಿರುತ್ತದೆ. ನಿಮ್ಮ ಮನೆಮಂದಿ, ಸ್ನೇಹಿತರು, ಇಂಡಸ್ಟ್ರಿಯವರೆಲ್ಲ ನಿಮ್ಮನ್ನು ಅಭಿನಂದಿಸಿರುತ್ತಾರೆ. ನೀವು ಖುಷಿಯಲ್ಲಿ ತೇಲುತ್ತಿರುತ್ತೀರಿ. ಇನ್ನೇನು ಪ್ರಾಜೆಕ್ಟ್‌ ಶುರುವಾಗಬೇಕು ಅನ್ನುವಷ್ಟರಲ್ಲಿ ನಿಮ್ಮನ್ನು ಪಲ್ಲಂಗಕ್ಕೆ ಕರೆಯುತ್ತಾರೆ.</p><img><p>ಒಪ್ಪಿದರೆ ಪ್ರಾಜೆಕ್ಟ್‌ನಲ್ಲಿ ಮುಂದುವರಿಕೆ, ಇಲ್ಲವಾದರೆ ನಿಮ್ಮ ಜಾಗಕ್ಕೆ ಇನ್ನೊಬ್ಬ ನಾಯಕಿ ಬರುತ್ತಾಳೆ ಎಂದು ಚಿತ್ರರಂಗದಲ್ಲಿನ ಕರಾಳತೆಯನ್ನು ವಿವರಿಸಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳಿಂದ ಬಾಲಿವುಡ್‌ ಸಿನಿಮಾಗಳವರೆಗೆ ಎಲ್ಲಾ ಕಡೆಯೂ ಇದೇ ಸ್ಥಿತಿ ಇದೆ.</p><img><p>ನಿರ್ಮಾಪಕ, ನಾಯಕ ಅಂತಲ್ಲ, ಅನೇಕರು ಈ ರೀತಿ ಹೆಣ್ಣುಮಕ್ಕಳಿಗೆ ಅವಕಾಶ ನೀಡುವ ಹೆಸರಲ್ಲಿ ದೌರ್ಜನ್ಯ ಮಾಡುತ್ತಾರೆ. ನಾನು ಇಂಥದ್ದಕ್ಕೆ ನೋ ಅಂದಿದ್ದಕ್ಕೆ ನನಗೆ ವೃತ್ತಿಪರತೆ ಇಲ್ಲದ ನಟಿ ಎಂಬ ಹಣೆಪಟ್ಟಿ ಬಂತು.</p><img><p>ಆದರೆ ನಾನು ಈವರೆಗೆ ನಟಿಸಿದ ಹತ್ತು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ನನ್ನ ಘನತೆಯನ್ನು ಎಲ್ಲರೂ ಗೌರವಿಸಿದ್ದಾರೆ. ನನ್ನ ಗೌರವಕ್ಕೆ ಕುಂದುಬರುವ ಕಡೆ ನಾನು ಕೆಲಸ ಮಾಡಿಲ್ಲ.</p><img><p>ಆತ್ಮಗೌರವ ಎಲ್ಲಕ್ಕಿಂತ ಮುಖ್ಯ ಎಂದೂ ಸಂಯುಕ್ತಾ ಹೇಳಿದ್ದಾರೆ. ಜೊತೆಗೆ ಆರಂಭ ಕಾಲದಲ್ಲಿ ತನ್ನನ್ನು ಪೊರೆದ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಬಗೆಗೆ ಅಭಿಮಾನದಿಂದ ಮಾತನಾಡಿದ್ದಾರೆ.</p>



Source link

Leave a Reply

Your email address will not be published. Required fields are marked *