
<p>Annayya serial : ಅಣ್ಣಯ್ಯ ಧಾರಾವಾಹಿಯಲ್ಲಿ ವೀಕ್ಷಕರು ಈ ವೀರಭದ್ರನ ಸೊಕ್ಕು ಅಡಗೋದು ಯಾವಾಗ ಎಂದು ಕಾಯುತ್ತಿದ್ದರೆ, ಅಲ್ಲಿ ಶಾರದಮ್ಮನ ಕೈಯಿಂದ ಕಪಾಳ ಮೋಕ್ಷ ಮಾಡಿಸಿಕೊಂಡು ಇಂಗು ತಿಂದ ಮಂಗನಂತಾಗಿದೆ ವೀರಭದ್ರನ ಸ್ಥಿತಿ. ಇನ್ನು ಮುಂದೈತೆ ಮಾರಿಹಬ್ಬ ಎನ್ನುತ್ತಿದ್ದಾರೆ ಜನ.</p><img><p>ಅಣ್ಣಯ್ಯ ಧಾರಾವಾಹಿಯಲ್ಲಿ ವೀಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ಇಲ್ಲಿವರೆಗೂ ವೀರಭದ್ರ ಶಾರದಮ್ಮನಿಗೆ ಎಷ್ಟೋ ಕೆಡುಕನ್ನು ಉಂಟು ಮಾಡಿದ್ದಾನೆ. ಅಷ್ಟೇ ಯಾಕೆ ಮಕ್ಕಳನ್ನೇ ಶಾರದಮ್ಮನಿಂದ ದೂರ ಮಾಡಿದ್ದಾನೆ. ಇದೀಗ ಅದಕ್ಕೆ ಸೇಡು ತೀರಿಸುವ ಸಮಯ ಬಂದೇ ಬಿಟ್ಟಿದೆ.</p><img><p>ಒಂದು ಕಡೆ ಪಾರು ಸತ್ಯ ತಿಳಿಯಲು ತನ್ನ ಗಂಡನ ಜೊತೆ ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ಶಿವು ಅತ್ತೆ ಬಳಿ ನಿಮ್ಮಲ್ಲಿ ಏನಾದ್ರೂ ಸಮಸ್ಯೆ ಇದೆಯೇ? ಎಂದು ಕೇಳಿದಾಗ ಅತ್ತೆ ನಿಮ್ಮ ಮಾವ ಮನುಷ್ಯನೇ ಅಲ್ಲ ಎನ್ನುವ ಸತ್ಯದ ಅರಿವು ಮಾಡಿಸುತ್ತಾರೆ.</p><img><p>ಇನ್ನೊಂದು ಕಡೆ ವೀರಭದ್ರ ಛತ್ರಿಯ ಜೊತೆಗೆ ಮಾದಪ್ಪನ ಮನೆಗೆ ಬಂದಿದ್ದಾನೆ. ರಶ್ಮಿ ಜೊತೆ ಮಾತನಾಡುತ್ತಾ ಮನೆಯಲ್ಲಿ ಯಾರೂ ಇಲ್ಲವ ಎನ್ನುತ್ತಾನೆ. ಆವಾಗ ರಶ್ಮಿ ಶಾಂತಮ್ಮ ಇದ್ದಾರೆ ಎನ್ನುತ್ತಾ ಶಾಂತಮ್ಮನಿಗೆ ಕಾಫಿ ತೆಗೆದುಕೊಂಡು ಬರಲು ಹೇಳುತ್ತಾಳೆ.</p><img><p>ಅಲ್ಲಿ ಶಾರದಮ್ಮನನ್ನು ನೋಡಿ ಶಾಕ್ ಆದ ವೀರಭದ್ರ ರಶ್ಮಿಯನ್ನು ಬೇರೆಡೆಗೆ ಕಳುಹಿಸಿ, ಶಾರದಮ್ಮನ ಬಳಿ ಬಂದು ನಿನ್ನ ಸಾವು ನನ್ನ ಕೈಯಿಂದಲೇ ಎನ್ನುತ್ತಾ ಕುತ್ತಿಗೆ ಹಿಸುಕೋಕೆ ಬರುತ್ತಾನೆ. ಆವಾಗ ಸಿಟ್ಟಿಗೇಳುವ ಶಾರದಮ್ಮ ವೀರಭದ್ರನ ಕೆನ್ನೆಗೆ ಬಾರಿಸಿ ಬೀಳುವಂತೆ ಮಾಡುತ್ತಾಳೆ.</p><img><p>ಇಷ್ಟು ದಿನ ತನ್ನ ಜೀವನವನ್ನೇ ಹಾಳು ಮಾಡಿದ ವೀರಭದ್ರನಿಗೆ ಮುಟ್ಟಿ ನೊಡುವಂತೆ ತಿರುಗೇಟು ಕೊಟ್ಟ ಶಾರದಮ್ಮ, ಆತನ ಮುಂದೆಯೇ ಕಾಲ ಮೇಲೆ ಕಾಲು ಹಾಕಿ ಮಂಚದ ಮೇಲೆ ಕುಳಿತುಕೊಂಡು, ತನಗೆ ಕೋಪ ಬಂದರೆ ತಾನು ಏನು ಬೇಕಾದರೂ ಮಾಡುವೆ ಅನ್ನೋದನ್ನು ತೋರಿಸುತ್ತಾರೆ.</p><img><p>ಪ್ರೊಮೊ ನೋಡಿ ಸಖತ್ ಖುಷಿ ಪಟ್ಟಿರುವ ವೀಕ್ಷಕರು. ವೀರಭದ್ರನಿಗೆ ಇನ್ನೆರಡು ಬಾರಿಸಿ ಎಂದು ಹೇಳಿದ್ದಾರೆ. ಇನ್ಮೇಲಿಂದ ಇದೇ ಈ ವೀರಭದ್ರು ಗೆ ಮಾರಿಹಬ್ಬ, ಸೂಪರ್ ಶಾರದಮ್ಮ. ಹಿಂಗೆ ಆಗಬೇಕು ವೀರಭದ್ರ ಬಾoಡ್ಲಿಗೆ, ಇನ್ನು ನಾಲ್ಕು ಬಾರಸು ಶಾರದಮ್ಮ ಎಂದು ಹೇಳಿದ್ದಾರೆ ವೀಕ್ಷಕರು.</p>
Source link
Annayya serial: ಕೊಲ್ಲಲು ಬಂದ ವೀರಭದ್ರನ ಸೊಕ್ಕು ಮುರಿದ ಶಾರದಮ್ಮ… ಇನ್ನು ನಾಲ್ಕು ಬಾರಿಸಿ ಅಂತಿದ್ದಾರೆ ವೀಕ್ಷಕರು