Headlines

ಕೂಡ್ಲಿಗಿ: ಕೈ ಕಚೇರಿಗೆ ಸೈಟ್‌ ಕೊಡದವರ ಬಗ್ಗೆ ಎಐಸಿಸಿಗೆ ವರದಿ: ಡಿಕೆಶಿ

ಕೂಡ್ಲಿಗಿ: ಕೈ ಕಚೇರಿಗೆ ಸೈಟ್‌ ಕೊಡದವರ ಬಗ್ಗೆ ಎಐಸಿಸಿಗೆ ವರದಿ: ಡಿಕೆಶಿ



ಕೂಡ್ಲಿಗಿ: ಕೈ ಕಚೇರಿಗೆ ಸೈಟ್‌ ಕೊಡದವರ ಬಗ್ಗೆ ಎಐಸಿಸಿಗೆ ವರದಿ: ಡಿಕೆಶಿ
<p><strong>ಕೂಡ್ಲಿಗಿ (ನ.10): </strong>ಗಾಂಧಿ ಭಾರತದ ನೆನಪಿನಲ್ಲಿ 100 ಕಾಂಗ್ರೆಸ್ ಕಚೇರಿಗಳಿಗೆ ಕೆಲವರು ಸೈಟ್ ನೀಡಿಲ್ಲ. ಯಾರು ಸೈಟ್ ನೀಡಲ್ಲವೋ ಅವರ ವರದಿಯನ್ನು ದೆಹಲಿಯ ಎಐಸಿಸಿ ನಾಯಕರು ಕೇಳಿದ್ದಾರೆ. ವರದಿಯನ್ನು ಸದ್ಯದಲ್ಲಿಯೇ ಕೊಡುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.</p><p>ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜಯನಗರ, ಬಳ್ಳಾರಿ ಜಿಲ್ಲೆಯ ಶಾಸಕರು ಕಾಂಗ್ರೆಸ್ ಕಚೇರಿಗೆ ಸೈಟ್ ನೀಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.</p><h2>ಕೆರೆಗಳ ಹರಾಜು ಹಾಕಿ:</h2><p>ಕೆರೆ ತುಂಬಿಸುವ ಯೋಜನೆಗೆ ₹800 ಕೋಟಿಗೂ ಹೆಚ್ಚು ಹಣ ಖರ್ಚಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಗೆ ನೀರು ತುಂಬಿಸಲು ಪ್ರತಿವರ್ಷ ₹80 ಲಕ್ಷ ವಿದ್ಯುತ್ ಬಿಲ್ ಬರುತ್ತದೆ. ಹೀಗಾಗಿ ಎಲ್ಲ ಕೆರೆಗಳನ್ನು ಹರಾಜಿಗೆ ಹಾಕಬೇಕು. ಆ ಮೂಲಕ ಮೀನು ಮರಿಗಳನ್ನು ಕೆರೆಯಲ್ಲಿ ಬಿಟ್ಟು ಅದರಿಂದ ಬಂದ ಆದಾಯದಿಂದ ವಿದ್ಯುತ್ ಬಿಲ್ ತುಂಬಬೇಕು ಎಂದರು.</p><p>ನಾನು ಹಾಗೂ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರ ತಂದೆ ಬೊಮ್ಮಣ್ಣ ಅವರು ಬಂಗಾರಪ್ಪ ಅವರ ಶಿಷ್ಯರಾಗಿದ್ದೆವು. ನಾನು ಕೂಡ್ಲಿಗಿಗೆ ಬಂದಾಗ ಬೊಮ್ಮಣ್ಣ ಅವರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದಿದ್ದರು. ಈಗ ಅವರ ಸುಪುತ್ರನ ಕಾಲದಲ್ಲಿ ಅದು ಈಡೇರಿದೆ ಎಂದು ಹೇಳಿದರು.</p>



Source link

Leave a Reply

Your email address will not be published. Required fields are marked *