Amruthadhaare: ಜೈದೇವ್​ಗೆ ಕೊನೆಗೂ ಮುಹೂರ್ತ ಫಿಕ್ಸ್​ ಮಾಡಿದ ಗೌತಮ್​! ಮುಂದಿದೆ ಮಾರಿಹಬ್ಬ

Amruthadhaare: ಜೈದೇವ್​ಗೆ ಕೊನೆಗೂ ಮುಹೂರ್ತ ಫಿಕ್ಸ್​  ಮಾಡಿದ ಗೌತಮ್​! ಮುಂದಿದೆ ಮಾರಿಹಬ್ಬ



Amruthadhaare: ಜೈದೇವ್​ಗೆ ಕೊನೆಗೂ ಮುಹೂರ್ತ ಫಿಕ್ಸ್​  ಮಾಡಿದ ಗೌತಮ್​! ಮುಂದಿದೆ ಮಾರಿಹಬ್ಬ
ಗೌತಮ್‌ನ ಆಸ್ತಿಯನ್ನು ಪಡೆದರೂ ತೃಪ್ತರಾಗದ ಜೈದೇವ್ ಮತ್ತು ಶಕುಂತಲಾ, ಇದೀಗ ಮಲ್ಲಿಯ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ. ಜೈದೇವ್, ಮಲ್ಲಿಯನ್ನು ಪತ್ತೆಹಚ್ಚಿ ಆಸ್ತಿಗೆ ಸಹಿ ಹಾಕುವಂತೆ ಬೆದರಿಸಿದಾಗ, ಗೌತಮ್ ಆಕೆಗೆ ಮುಕ್ತಿ ನೀಡಲು ಒಂದು ಯೋಜನೆ ರೂಪಿಸುತ್ತಾನೆ.<img><p>ಜೈದೇವ್​ ಮತ್ತು ಶಕುಂತಲಾಗೆ ಗೌತಮ್​ ತನ್ನ ಎಲ್ಲಾ ಆಸ್ತಿ ಬರೆದುಕೊಟ್ಟು ಬಂದರೂ ಅವರಿಗೆ ನೆಮ್ಮದಿ ಇಲ್ಲ. ಇದೀಗ ಮಲ್ಲಿಯ ಆಸ್ತಿಯ ಮೇಲೂ ಕಣ್ಣುಬಿದ್ದಿದೆ. ಮಲ್ಲಿಗೆ ಅಪ್ಪ ಮಾಡಿಟ್ಟಿರೋ ಆಸ್ತಿಯನ್ನು ಲಪಟಾಯಿಸಲು ಅವರು ಸಂಚು ಹೂಡಿದ್ದಾರೆ.</p><img><p>ಆದರೆ ಮಲ್ಲಿ ಎಲ್ಲಿ ಇದ್ದಾಳೆ ಎನ್ನುವುದು ತಿಳಿದಿರಲಿಲ್ಲ. ಆದರೆ, ರೌಡಿಗಳನ್ನು ಬಿಟ್ಟು ಅದನ್ನು ಕಂಡು ಹಿಡಿದಿದ್ದಾನೆ ಜೈದೇವ. ಸಾಲದು ಎನ್ನುವುದಕ್ಕೆ ಅವಳ ಹೊಸ ಫೋನ್​ ನಂಬರ್​ ಕೂಡ ಕಲೆಕ್ಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಕೊನೆಗೆ ಫೋನ್​ ಮಾಡಿದ್ದಾನೆ.</p><img><p>ಜೈದೇವ್​ ಎಂದು ಅರಿಯದ ಮಲ್ಲಿ, ಫೋನ್​ ರಿಸೀವ್​ ಮಾಡಿ ಇವನ ಆವಾಜ್​ ಕೇಳಿ ಕಟ್​ ಮಾಡಿದ್ದಾಳೆ. ಕೊನೆಗೆ ಗೌತಮ್​ನಲ್ಲಿ ಬಂದು ವಿಷಯವನ್ನು ತಿಳಿಸಿದ್ದಾಳೆ.</p><img><p>ಜೈದೇವ್​ಗೆ ಬೇಕಾಗಿರುವುದು ಏನು ಎಂದು ತಿಳಿದುಕೊಳ್ಳುವ ಸಲುವಾಗಿ ಮಲ್ಲಿಗೆ ವಾಪಸ್​ ಫೋನ್​ ಮಾಡಿ ಸ್ಪೀಕರ್​ನಲ್ಲಿ ಇಡುವಂತೆ ಗೌತಮ್​ ಹೇಳಿದ್ದಾನೆ. ಮಲ್ಲಿ ಕಾಲ್​ಮಾಡಿದಾಗ ಜೈದೇವ್​ ನಿನ್ನ ಆಸ್ತಿಗೆ ಸಹಿ ಹಾಕಿ ಹೋಗು. ನಿನಗೆ ನಾನು ಏನೂ ಮಾಡುವುದಿಲ್ಲ ಎಂದಿದ್ದಾನೆ.</p><img><p>ಗೌತಮ್​, ಓಕೆ ನಾಳೆ ಬರುತ್ತೇನೆ ಎಂದು ಹೇಳು ಎಂದು ಸನ್ನೆ ಮಾಡಿ ಹೇಳಿದಾಗ, ಮಲ್ಲಿ ಹಾಗೆಯೇ ಮಾಡಿದ್ದಾಳೆ. ಬಳಿಕ ಗೌತಮ್​ ನಿನಗೆ ಅವನಿಂದ ಮುಕ್ತಿ ಬೇಕು, ಅವನಿಗೆ ನಿನ್ನ ಆಸ್ತಿ ಬೇಕು ಎನ್ನುತ್ತಲೇ ಏನು ಮಾಡಬೇಕು ಎನ್ನುವ ಪ್ಲ್ಯಾನ್​ ಹೇಳಿದ್ದಾನೆ.</p><img><p>ಅಲ್ಲಿಗೆ ಜೈದೇವ್​ ಮತ್ತು ಮಲ್ಲಿ ಅಧಿಕೃತವಾಗಿ ಬೇರೆಬೇರೆಯಾಗಿ ಮಲ್ಲಿಗೆ ಮುಕ್ತಿ ಸಿಗಲಿದೆ. ಜೈದೇವ್​ಗೆ ಗೌತಮ್ ಮುಹೂರ್ತ ಫಿಕ್ಸ್​ ಮಾಡಿರುವ ಕಾರಣ, ಮುಂದೆ ಏನಾಗುತ್ತದೆ ಎನ್ನುವ ಕುತೂಲಹವಿದೆ.</p><p>ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್​ &nbsp;ಮಾಡಿ</p>



Source link

Leave a Reply

Your email address will not be published. Required fields are marked *