ನಟ ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ಅವರು ‘ಮಾರ್ನಮಿ’ ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ಭಾಗವಹಿಸಿದ್ದರು. ‘ಮಾರ್ನಮಿ’ ಸಿನಿಮಾ ತಂಡಕ್ಕೆ ಶುಭಾಶಯ ಕೋರಿದ ಸುದೀಪ್, ಟ್ರೈಲರ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು. ಜೊತೆಗೆ ಸಿನಿಮಾದ ಕಲಾವಿದರಿಗೆ, ತಂತ್ರಜ್ಞರಿಗೆ ಶುಭ ಹಾರೈಸಿದರು. ಕೆಲವರೊಟ್ಟಿಗಿನ ತಮ್ಮ ಆಪ್ತತೆಯನ್ನು ಸಹ ಹಂಚಿಕೊಂಡರು. ‘ಮಾರ್ನಮಿ’ ಸಿನಿಮಾಕ್ಕೆ ಚೈತ್ರಾ ಆಚಾರ್ ನಾಯಕಿ ಆಗಿದ್ದು, ವೇದಿಕೆ ಮೇಲೆ ಚೈತ್ರಾ ಆಚಾರ್ ಬಗ್ಗೆ ಒಳ್ಳೆಯ ಮಾತುಗಳನ್ನಾಡುವ ಜೊತೆಗೆ ಅವರ ಕಾಲೆಳೆದು ತಮಾಷೆ ಮಾಡಿದರು. ಇಲ್ಲಿದೆ ನೋಡಿ ವಿಡಿಯೋ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ