
<p><strong>ದಾವಣಗೆರೆ (ನ.15): </strong>ಸಿಎಂ ಬದಲಾವಣೆ ನಮ್ಮ ಮಟ್ಟದ ಚರ್ಚೆಯಲ್ಲ. ರಾಜ್ಯದಲ್ಲಿ ಯಾವುದೇ ಕ್ರಾಂತಿ ಇಲ್ಲ ಎಂದು ನಾನು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.</p><p>ಇಂದು ದಾವಣಗೆರೆಯ ಹರಿಹರ ತಾಲೂಕಿನ ವಾಲ್ಮೀಕಿ ಗುರುಪೀಠಕ್ಕೆ ತಮ್ಮ ಹೊಸ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಸವಂತಪ್ಪ ಹಾಗೂ ದೇವೇಂದ್ರಪ್ಪ ಅವರೊಂದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಿಎಂ ಬದಲಾವಣೆ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಉತ್ತರ ಕೊಡುವವರು ಯಾರು? ಅದಕ್ಕೆ ಪರಿಹಾರ ಇಲ್ಲ. ರಾಜಕೀಯ ಬೆರಸಿದ್ರೇ ಏನ್ ಮಾಡೋದು? ಎಂದು ಪ್ರಶ್ನಿಸಿದರು.</p><h2>ಬಿಹಾರಿಗಳ ಮನಸ್ಥಿತಿಯೇ ಬೇರೆ ಕನ್ನಡಿಗರದ್ದೇ ಬೇರೆ:</h2><p>ಬಿಹಾರ ಚುನಾವಣಾ ಫಲಿತಾಂಶದ ಹಿನ್ನೆಲೆ ಕಾಂಗ್ರೆಸ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠವಾಗಿದೆ. ಆದರೆ ಬಿಹಾರಿಗಳ ಮನಸ್ಥಿತಿಯೇ ಬೇರೆ, ಕರ್ನಾಟಕದ ಜನರ ಮನಸ್ಥಿತಿಯೇ ಬೇರೆ. ಅಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯವಿಲ್ಲ, ಇಲ್ಲಿ ಅಹಿಂದ ಒಗ್ಗೂಡಿಸಬಹುದು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಎಂದಲ್ಲ, ಎಲ್ಲ ಕಡೆಯೂ ಸಂಘಟನೆ ಮಾಡುತ್ತಿದ್ದೇವೆ ಎಂದರು. ಅಹಿಂದ ಇಡೀ ದೇಶದಲ್ಲಿ ರಾಜ್ಯದಲ್ಲಿ ಇದೆ ಎಲ್ಲಾ ಕಡೆ ಇದೆ. ಉತ್ತರ ಕರ್ನಾಟಕ ಮಧ್ಯ ಕರ್ನಾಟಕ ಎಂದಲ್ಲ, ಎಲ್ಲ ಕಡೆ ಅಹಿಂದ ಸಂಘಟನೆ ಮಾಡುತ್ತಿದ್ದೇವೆ ಎಂದರು.</p>
Source link
ದಾವಣಗೆರೆಯಲ್ಲಿ ಸಾಹುಕಾರ; ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದ ಜಾರಕಿಹೊಳಿ! ಹೇಳಿದ್ದೇನು?