
<p>ಐಬೊಮ್ಮ ನಿರ್ವಾಹಕ ಇಮ್ಮಡಿ ರವಿಯನ್ನು ಬಂಧಿಸಿದ ನಂತರ ವಿಸಿ ಸಜ್ಜನರ್ ಅವರು ಚಿತ್ರರಂಗದ ಗಣ್ಯರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಚಿರಂಜೀವಿ, ರಾಜಮೌಳಿ, ನಾಗಾರ್ಜುನ, ದಿಲ್ ರಾಜು ಅವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿದರು.</p><img><p>ಟಾಲಿವುಡ್ಗೆ ಕಾಡುತ್ತಿರುವ ಪೈರಸಿ ಭೂತವನ್ನು ತೊಡೆದು ಹಾಕಲು ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ. ಐಬೊಮ್ಮ ನಿರ್ವಾಹಕ ರವಿಯನ್ನು ಬಂಧಿಸಿದ ನಂತರ, ಸಜ್ಜನರ್ ಅವರು ಟಾಲಿವುಡ್ ಗಣ್ಯರೊಂದಿಗೆ ಸಭೆ ನಡೆಸಿದರು.</p><img><p>ಪೈರಸಿಯಿಂದ ಚಿತ್ರರಂಗಕ್ಕೆ ಭಾರಿ ನಷ್ಟವಾಗಿದೆ ಎಂದು ಸಜ್ಜನರ್ ಹೇಳಿದರು. ಇಮ್ಮಡಿ ರವಿ ವಿರುದ್ಧ ಐಟಿ ಮತ್ತು ಕಾಪಿರೈಟ್ ಕಾಯ್ದೆಯಡಿ 4 ಕೇಸ್ ದಾಖಲಾಗಿದೆ. ಆತನ ಹಾರ್ಡ್ಡಿಸ್ಕ್ನಲ್ಲಿ 21 ಸಾವಿರಕ್ಕೂ ಹೆಚ್ಚು ಸಿನಿಮಾಗಳಿವೆ.</p><img><p>ಐಬೊಮ್ಮ ನಿರ್ವಾಹಕರ ಬಂಧನ ಹೈದರಾಬಾದ್ ಪೊಲೀಸರ ದೊಡ್ಡ ಯಶಸ್ಸು ಎಂದ ದಿಲ್ ರಾಜು ಹೇಳಿದರು. ಪೈರಸಿಯಿಂದ ಗೇಮ್ ಚೇಂಜರ್, ಓಜಿ, ತಂಡೇಲ್ ಚಿತ್ರಗಳಿಗೆ ನಷ್ಟವಾಗಿದೆ ಎಂದು ಚಿರಂಜೀವಿ ಬೇಸರ ವ್ಯಕ್ತಪಡಿಸಿದರು.</p><img><p>ಐಬೊಮ್ಮ ನಿರ್ವಾಹಕ ಪೊಲೀಸರಿಗೆ ಸವಾಲು ಹಾಕಿದ್ದು ಸಿನಿಮಾ ದೃಶ್ಯದಂತಿದೆ. ಪೈರಸಿ ಮಾಡುವವರು ನಿಮ್ಮ ಡೇಟಾ ಕದ್ದು ಕ್ರಿಮಿನಲ್ಗಳಿಗೆ ಮಾರುತ್ತಾರೆ. ಉಚಿತ ಸಿನಿಮಾ ನೋಡುವುದರಿಂದ ನಿಮಗೇ ಹೆಚ್ಚು ನಷ್ಟ ಎಂದು ರಾಜಮೌಳಿ ಹೇಳಿದರು.</p><img><p>ಪೈರಸಿ ಒಂದು ದೊಡ್ಡ ಬಲೆ. ನಮ್ಮ ಕುಟುಂಬದವರೇ ಡಿಜಿಟಲ್ ಲಿಂಕ್ ಕ್ಲಿಕ್ ಮಾಡಿ ‘ಡಿಜಿಟಲ್ ಅರೆಸ್ಟ್’ಗೆ ಒಳಗಾಗಿದ್ದರು ಎಂದು ನಾಗಾರ್ಜುನ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದರಿಂದ ನಿಮ್ಮ ಡೇಟಾ ಕಳ್ಳತನವಾಗುತ್ತದೆ ಎಂದರು.</p>
Source link
ಐಬೊಮ್ಮ ಪ್ರೆಸ್ ಮೀಟ್: ಗೇಮ್ ಚೇಂಜರ್, OG ನಷ್ಟದ ಬಗ್ಗೆ ಚಿರಂಜೀವಿ, ರಾಜಮೌಳಿ ಹೇಳಿದ್ದೇನು?