Video: ದೈಹಿಕ ನ್ಯೂನತೆ ಬದಿಗಿರಿಸಿ ಮೈದಾನದಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕ

Video: ದೈಹಿಕ ನ್ಯೂನತೆ ಬದಿಗಿರಿಸಿ ಮೈದಾನದಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕ


ಬದುಕನ್ನು (ಜೀವನ) ಬಂದ್ದಂತೆ ಸ್ವೀಕರಿಸಬೇಕು. ನ್ಯೂನತೆಗಳಿದ್ದರೂ ಎಲ್ಲವನ್ನು ಜಯಿಸುವೆ ಎಂಬ ಮನೋಭಾವವಿದ್ದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ದೈಹಿಕ ಅಂಗ ವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡುವ ವ್ಯಕ್ತಿಗಳ ಬಗ್ಗೆ ನೀವು ಕೇಳುತ್ತೀರಿ. ಆದರೆ ದೈಹಿಕ ನ್ಯೂನತೆಯನ್ನು ಬದಿಗಿರಿಸಿ ದೈಹಿಕ ಶಿಕ್ಷಕ (ದೈಹಿಕ ಶಿಕ್ಷಣ ಶಿಕ್ಷಕ) ವೀಲ್‌ಚೇರ್‌ನಲ್ಲೇ ಕುಳಿತು ಆಟದ ಮೈದಾನದಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಕೆಲಸ ಮಾಡುವ ಮನಸ್ಸು ಹಾಗೂ ಛಲವಿದ್ದರೆ ಸಾಕು, ನಿಮ್ಮಲ್ಲಿರುವ ನ್ಯೂನತೆಗಳು ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ದೈಹಿಕ ಶಿಕ್ಷಕರ ವಿಡಿಯೋ ನೆಟ್ಟಿಗರು ಗಮನ ಸೆಳೆದಿದ್ದು ಮೆಚ್ಚುಗೆ ಸೂಚಿಸಿದೆ.

jpbadakere ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದ ಶೀರ್ಷಿಕೆಯಲ್ಲಿ ಮೊನ್ನೆ ಅವರ ಪರಿಚಯವಾಗಿದೆ. ಕ್ರೀಡಾ ಅಂಕಣದಲ್ಲಿ ಮಾರ್ಗದರ್ಶನ ಒಂದು ಝಲಕ್.ವೀರರಾಜೇಂದ್ರ ಹೆಗ್ಡೆ ದೈಹಿಕ ಶಿಕ್ಷಕರು. ಜಿ ಹೆಚ್ ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಂಗಡಿ ಪ್ರಶಸ್ತಿಗಳು ಮತ್ತು ಸನ್ಮಾನಗಳು ಅವರಿಗೆ ನೆನಪಿಗೆ ಬರಲಿಲ್ಲ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ದೈಹಿಕ ಶಿಕ್ಷಕ ವೀಲ್‌ಚೇನಲ್ಲೇ ಕುಳಿತು ಮೈದಾನದಲ್ಲಿ ಮಾರ್ಗದರ್ಶನ ನೀಡುತ್ತಿರುವುದು ಕಂಡುಬರುತ್ತದೆ. ಏನೇ ನ್ಯೂನತೆಯಿದ್ದರೂ ತಮ್ಮ ಕಾಯಕವನ್ನು ಯಾವುದಕ್ಕೂ ಅಂಜದೆ ಮಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ:ಮೂರು ಹೊತ್ತಿನ ಊಟಕ್ಕಾಗಿ ದೊಂಬರಾಟ, ಹಗ್ಗದ ಮೇಲೆ ಬಾಲಕಿಯ ಸರ್ಕಸ್ ನೋಡಿ

ಈ ವಿಡಿಯೋ ನಲವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರರು, ಮನಸ್ಸಿದ್ದರೆ ಎಲ್ಲರೂ ಸಾಧ್ಯ. ದೈಹಿಕ ನ್ಯೂನತೆ ಮನಸ್ಸಿಗೆ ದೇಹಕ್ಕಲ್ಲ. ಇತರರು, ಮಾದರಿ ಎಲ್ಲರಿಗೂ ಇರುವ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *