ಕೃಷ್ಣ ಅಜಯ್ ರಾವ್ ಅವರ ಹೊಸ ಸಿನಿಮಾ ‘ರಾಧೆಯ’ ಈ ವಾರ (ನವೆಂಬರ್ 21) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ವೇದಗುರು ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ.
ಹಲವಾರು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ವೇದಗುರು ಅವರಿಗೆ ಇದೆ. ‘ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ’ ಬ್ಯಾನರ್ ಮೂಲಕ ವೇದಗುರು ಅವರೇ ‘ರಾಧೆಯಾ’ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಸಿನಿಮಾದಲ್ಲಿ ಕೃಷ್ಣ ಅಜಯ್ ರಾವ್ ಮತ್ತು ಸೋನಲ್ ಮಂತೆ ಅವರು ಜೋಡಿಯಾಗಿ ನಟಿಸಿದ್ದಾರೆ. ಮಹಾಭಾರತದ ಕರ್ಣನ ಇನ್ನೊಂದು ಹೆಸರು ‘ರಾಧೇಯ’. ಚಿತ್ರದ ಶೀರ್ಷಿಕೆ ಕೌತುಕ ಮೂಡಿಸಿದೆ.
ಲವ್ ಸ್ಟೋರಿ ಸಿನಿಮಾ ಆದರೂ ಬೇರೆಯದೇ ರೀತಿಯಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಜೈಲಿನಲ್ಲಿರುವ ವ್ಯಕ್ತಿ ಚಿತ್ರದ ಪಾತ್ರದ ಸುತ್ತ ಈ ಸಾಗಲಿದೆ ಎಂದು ‘ರಾಧೇಯ’ ಚಿತ್ರತಂಡ ಹೇಳಿದೆ.
ಕಥಾನಾಯಕ ರಾಧೇಯ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ? ಅದಕ್ಕಾಗಿ ಅವರು ಏನೆಲ್ಲಾ ಅಡ್ಡಿ, ಆತಂಕಗಳನ್ನು ಎದುರಿಸುತ್ತಿದ್ದಾರೆ ಈ ಸಿನಿಮಾ ಮೂಲಕ ನಿರ್ದೇಶಕ ವೇದಗುರು ಅವರು ತೋರಿಸಲಿದ್ದಾರೆ.




