ಹಿಂದೂ ಕುಟುಂಬಕ್ಕೆ ಟಿಎಂಸಿ ನಾಯಕನ ಬಹಿಷ್ಕಾರ: ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು! | Malda Hindu Family Boycott Tmc Muslims Carry Dead Body Funeral San

ಹಿಂದೂ ಕುಟುಂಬಕ್ಕೆ ಟಿಎಂಸಿ ನಾಯಕನ ಬಹಿಷ್ಕಾರ: ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು! | Malda Hindu Family Boycott Tmc Muslims Carry Dead Body Funeral San



ಹಿಂದೂ ಕುಟುಂಬಕ್ಕೆ ಟಿಎಂಸಿ ನಾಯಕನ ಬಹಿಷ್ಕಾರ: ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು! | Malda Hindu Family Boycott Tmc Muslims Carry Dead Body Funeral San

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ, ಟಿಎಂಸಿ ನಾಯಕರ ಆದೇಶದ ಮೇರೆಗೆ ಬಹಿಷ್ಕರಿಸಲ್ಪಟ್ಟ ಹಿಂದೂ ಕುಟುಂಬದ ಸದಸ್ಯರೊಬ್ಬರು ನಿಧನರಾದರು. ನೆರೆಹೊರೆಯವರು ಅಂತ್ಯಕ್ರಿಯೆಗೆ ಸಹಾಯ ಮಾಡಲು ನಿರಾಕರಿಸಿದಾಗ, ಮುಸ್ಲಿಂ ಸಮುದಾಯದ ಯುವಕರು ಮುಂದೆ ಬಂದು ಮೃತದೇಹವನ್ನು ಹೊತ್ತು ಅಂತ್ಯಸಂಸ್ಕಾರ ನೆರವೇರಿಸಿದರು.

An example of goodwill: ಭಾರತದಾದ್ಯಂತ ದ್ವೇಷದ ಚಿತ್ರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಿಂದೂ-ಮುಸ್ಲಿಂ ಐಕ್ಯತೆ ಅಥವಾ ಕೋಮು ಸಾಮರಸ್ಯ ಈಗ ದೂರದ ಕನಸು ಎಂದು ಹಲವರು ಭಾವಿಸುತ್ತಾರೆ. ಆದರೆ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಬೇರೆಯದೇ ಚಿತ್ರಣ ಕಂಡುಬಂದಿತು. ಟಿಎಂಸಿ ನಾಯಕರಿಂದ ಬಹಿಷ್ಕೃತರಾದ ಕುಟುಂಬದ ಸದಸ್ಯರೊಬ್ಬ ಸಾವು ಕಂಡಿದ್ದರಿಂದ, ಯಾವುದೇ ನೆರೆಹೊರೆಯವರು ಆ ವ್ಯಕ್ತಿಯ ಶವವನ್ನು ಹೂಳಲು ಮುಂದೆ ಬಂದಿರಲಿಲ್ಲ. ಓಈ ಹಂತದಲ್ಲಿ ನೆರೆಹೊರೆಯ ಮುಸ್ಲಿಂ ಸಮುದಾಯದ ಯುವಕರು ಮೃತದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಸಾಗಿಸಿದರು. ಮಾಲ್ಡಾದಲ್ಲಿ ನಡೆದ ಈ ಘಟನೆ ಹಿಂದೂ-ಮುಸ್ಲಿಂ ಐಕ್ಯತೆಗೆ ಒಂದು ಉತ್ತಮ ಉದಾಹರಣೆಯಾಗಿದೆ.

ಟಿಎಂಸಿ ನಾಯಕನಿಂದ ಬಹಿಷ್ಕೃತವಾದ ಕುಟುಂಬ

ಪ್ರದೇಶದಲ್ಲಿ ಅಕ್ರಮ ಭೂಕಬಳಿಕೆ ವಿವಾದ ನಡೆಯುತ್ತಿದ್ದು, ಸ್ಥಳೀಯ ಟಿಎಂಸಿ ನಾಯಕರು ಬಹಳ ಹಿಂದಿನಿಂದಲೂ ಅತಿಕ್ರಮಣದಾರರಿಗೆ ಬೆಂಬಲ ನೀಡುತ್ತಿದ್ದರು. ಟಿಎಂಸಿ ನಾಯಕನ ಆದೇಶದ ಮೇರೆಗೆ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗಿತ್ತು. ಮಂಗಳವಾರ ಇದೇ ಕುಟುಂಬದ ಸದಸ್ಯನೊಬ್ಬ ಸಾವು ಕಂಡಿದ್ದ ಆದರೆ, ನೆರೆಹೊರೆಯವರು ಬಹಿಷ್ಕಾರದ ಕಾರಣದಿಂದಾಗಿ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಮುಂದೆ ಬರಲಿಲ್ಲ. ಅಂತಿಮವಾಗಿ, ವೃದ್ಧನ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಹತ್ತಿರದ ಮುಸ್ಲಿಂ ಸಮುದಾಯದ ಯುವಕರು ಮಾಡಿದರು. ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನಕ್ಕೆ ಸಾಗಿಸಲಾಯಿತು. ಇದು ಮಾನವೀಯತೆ ಮತ್ತು ಸಾಮರಸ್ಯಕ್ಕೆ ಉದಾಹರಣೆ. ಘಟನೆ ಬೆಳಕಿಗೆ ಬಂದ ತಕ್ಷಣ, ಬಿಜೆಪಿ ಟಿಎಂಸಿ ವಿರುದ್ಧ ಮತ್ತಷ್ಟು ದಾಳಿ ಮಾಡಿದೆ.

ಟಿಎಂಸಿ ನಾಯಕರೊಬ್ಬರ ಬೆಂಬಲದೊಂದಿಗೆ ಮನೆಯ ಮುಂದೆ ಇರುವ ಸರ್ಕಾರಿ ಜಮೀನಿನ ಬಗ್ಗೆ ಕೆಲವು ಸ್ಥಳೀಯರೊಂದಿಗೆ ಬಹಳ ದಿನಗಳಿಂದ ವಿವಾದ ನಡೆಯುತ್ತಿತ್ತು. ಪೊಲೀಸರನ್ನು ಪದೇ ಪದೇ ಭೇಟಿ ಮಾಡಿದರೂ ಯಾವುದೇ ಪರಿಹಾರ ಸಿಗಲಿಲ್ಲ. ಈ ವಿವಾದದಿಂದಾಗಿ, ಟಿಎಂಸಿ ನಾಯಕನ ಆದೇಶದ ಮೇರೆಗೆ ನೆರೆಹೊರೆಯವರು ಕುಟುಂಬವನ್ನು ಬಹಿಷ್ಕರಿಸಿದ್ದರು. ಆದರೆ, ಈ ಕುಟುಂಬದ ಸದಸ್ಯನೊಬ್ಬ ಸಾವು ಕಂಡರೂ ಆತನ ಅಂತ್ಯಕ್ರಿಯೆಗೆ ಅವರು ಯಾರೂ ಮುಂದೆ ಬಂದಿರಲಿಲ್ಲ. ಶವವನ್ನು ಸ್ಮಶಾನಕ್ಕೆ ಸಾಗಿಸಲು ಕೂಡ ಯಾರೂ ಇದ್ದಿರಲಿಲ್ಲ. ಕೊನೆಗೆ ಹತ್ತಿರದ ಮುಸ್ಲಿಂ ಯುವಕರು ಚಟ್ಟವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.ಮಾನವೀಯತೆ ಮತ್ತು ಸಹೋದರತ್ವದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಟಿಎಂಸಿ-ಬಿಜೆಪಿ ನಾಯಕರ ನಡುವೆ ವಾಕ್ಸಮರ

ಈ ನಡುವೆ, ಘಟನೆ ಬೆಳಕಿಗೆ ಬಂದ ತಕ್ಷಣ, ಬಿಜೆಪಿ ಟಿಎಂಸಿಯನ್ನು ಗುರಿಯಾಗಿಸಿಕೊಂಡಿತು. ಟಿಎಂಸಿ ಸ್ಪಷ್ಟೀಕರಣವನ್ನು ನೀಡಿದ್ದು, ಮಾತಿನ ಸಮರ ಆರಂಭವಾಗಿದೆ. ಮಾಲ್ಡಾದ ಹರಿಶ್ಚಂದ್ರಪುರದ ಕುಶಿದಾ ಗ್ರಾಮ ಪಂಚಾಯತ್‌ನ ಮುಕುಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ಗ್ರಾಮದ ನಿವಾಸಿ ತೂಪನ್ ದಾಸ್ ಮತ್ತು ಅವರ ಕುಟುಂಬವು ಕೆಲವು ಸ್ಥಳೀಯ ನಿವಾಸಿಗಳೊಂದಿಗೆ ದೀರ್ಘಕಾಲದ ಭೂ ವಿವಾದವನ್ನು ಹೊಂದಿತ್ತು. ಕೆಲವರು ಅವರ ಮನೆಯ ಮುಂದೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಭೂಮಿಯ ಮೇಲೆ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು, ಅಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಇರಿಸಿದ್ದಾರೆ ಎಂದು ಆರೋಪಿಸಿದ್ದರು. ಇದು ಹಲವಾರು ವಾಗ್ವಾದಗಳಿಗೆ ಕಾರಣವಾಯಿತು. ಅತಿಕ್ರಮಣದಾರರಿಗೆ ಟಿಎಂಸಿ ಪಂಚಾಯತ್ ಸಮಿತಿ ಸದಸ್ಯ ಪ್ರಕಾಶ್ ದಾಸ್ ಮತ್ತು ಮಾಜಿ ಪ್ರಧಾನ್ ರೆಝೌಲ್ ಹಕ್ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ಸಮುದಾಯ

ಕುಟುಂಬವು ಹರಿಶ್ಚಂದ್ರಪುರ ಪೊಲೀಸ್ ಠಾಣೆ, ಉಪವಿಭಾಗೀಯ ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಪದೇ ಪದೇ ದೂರು ನೀಡಿತು, ಆದರೆ ಯಾವುದೇ ಪರಿಹಾರ ಸಿಗಲಿಲ್ಲ. ಮೃತರ ಮಗ, ವೃತ್ತಿಯಲ್ಲಿ ನಾಗರಿಕ ಸ್ವಯಂಸೇವಕರಾಗಿರುವ ಕಿಶೋರ್ ದಾಸ್ ಕೂಡ ಈ ಘಟನೆಯಲ್ಲಿ ಪೊಲೀಸರ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ರಾಜಕಾರಣಿಗಳ ನಿರ್ದೇಶನದಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಟಿಎಂಸಿ ನಾಯಕ ಪ್ರಕಾಶ್ ದಾಸ್ ಅವರ ಆದೇಶದ ಮೇರೆಗೆ ಈ ವಿವಾದದಿಂದಾಗಿ ನೆರೆಹೊರೆಯವರು ಅವರನ್ನು ಬಹಿಷ್ಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪರಿಸ್ಥಿತಿಯಲ್ಲಿ, ವಿವಾದದ ಸುತ್ತಲಿನ ಉದ್ವಿಗ್ನತೆಯಿಂದಾಗಿ ತೂಪನ್ ದಾಸ್ ಅನಾರೋಗ್ಯಕ್ಕೆ ಒಳಗಾದರು ಮತ್ತು ಮಂಗಳವಾರ ನಿಧನರಾದರು. ಆದರೆ, ಯಾವುದೇ ನೆರೆಹೊರೆಯವರು ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಮುಂದೆ ಬರಲಿಲ್ಲ. ಕುಟುಂಬವು ಅಸಹಾಯಕವಾಗಿತ್ತು. ಇದನ್ನು ತಿಳಿದು ಹತ್ತಿರದ ಮುಸ್ಲಿಂ ಸಮುದಾಯದ ಸದಸ್ಯರು ಮುಂದೆ ಬಂದರು. ತೂಪನ್ ದಾಸ್ ಅವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಅವರೇ ನಡೆಸಿದ್ದಾರೆ. ಎಲ್ಲಾ ಅಂತ್ಯಕ್ರಿಯೆ ವಿಧಿಗಳನ್ನು ಮುಸ್ಲಿಂ ಸಮುದಾಯದ ವ್ಯಕ್ತಿಗಳು ಮಾಡಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ, ಟಿಎಂಸಿ ಈ ತಾಲಿಬಾನ್ ತರಹದ ಬಹಿಷ್ಕಾರ ಸಂಸ್ಕೃತಿಯನ್ನು ಮುಂದುವರಿಸುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದ್ದರಿಂದ, ಟಿಎಂಸಿಯನ್ನು ಉರುಳಿಸಲು ಎಲ್ಲಾ ಹಿಂದೂಗಳು ಮತ್ತು ಮುಸ್ಲಿಮರು ಒಂದಾಗಬೇಕು. ಆದರೆ, ಟಿಎಂಸಿ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.



Source link

Leave a Reply

Your email address will not be published. Required fields are marked *