Headlines

ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ, ಮೃತಪಟ್ಟರೆ 5 ಲಕ್ಷ ಹಣ | Govt Compensation Stray Dog Attack Bengaluru Up To 5 Lakh San

ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ, ಮೃತಪಟ್ಟರೆ 5 ಲಕ್ಷ ಹಣ | Govt Compensation Stray Dog Attack Bengaluru Up To 5 Lakh San


ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ನಾಯಿ ಕಡಿತದಿಂದ ಗಾಯಗೊಂಡವರಿಗೆ ₹5,000 ಹಾಗೂ ದಾಳಿಯಿಂದ ಮೃತಪಟ್ಟರೆ ಅಥವಾ ರೇಬಿಸ್‌ಗೆ ತುತ್ತಾದರೆ ₹5 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿದೆ. 

ಬೆಂಗಳೂರು (ನ.19): ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿರುವಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಬೀದಿ ನಾಯಿ ದಾಳಿಯಿಂದ ಹಾನಿಗೆ ಒಳಗಾದವರಿಗೆ ಪರಿಹಾರ ನೀಡಲು ಮುಂದಾಗಿದೆ. ನಗರದಲ್ಲಿ ನಾಯಿ ದಾಳಿ ಪ್ರಕರಣ ಹೆಚ್ಚಳ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇನ್ಮುಂದೆ ನಾಯಿ ಕಡಿದರೆ ಪರಿಹಾರ ಕೂಡ ಸಿಗಲಿದ್ದು, ಈ ಕುರಿತು ಅಧಿಕೃತವಾಗಿ ಆದೇಶ ಹೊರಡಿಸಿದೆ.

ಬೀದಿ ನಾಯಿ ಕಚ್ಚಿ ಗಾಯಗೊಂಡರೆ ಅಂತವರಿಗೆ ಸರ್ಕಾರದಿಂದ 5 ಸಾವಿರ ಪರಿಹಾರ ಸಿಗಲಿದೆ. ಅದರಲ್ಲಿ 3500 ರೂಪಾಯಿಯನ್ನು ಗಾಯಾಳುವಿಗೆ ನೀಡಲಾಗುತ್ತದೆ. ಉಳಿದ 1500 ರೂಪಾಯಿಯನ್ನು ಚಿಕಿತ್ಸಾ ವೆಚ್ಚವಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ನೀಡಲು ಸೂಚಿಸಲಾಗಿದೆ.

ಮೃತಪಟ್ಟರೆ, ಕಾಯಿಲೆಗೆ ತುತ್ತಾದರೆ 5 ಲಕ್ಷ ಪರಿಹಾರ

ಹಾಗೇನಾದರೂ ನಾಯಿ ದಾಳಿಯಿಂದ ವ್ಯಕ್ತಿ ಮೃತಪಟ್ಟಲ್ಲಿ ಅಥವಾ ರೇಬಿಸ್‌ ಕಾಯಿಲೆಗೆ ತುತ್ತಾದಲ್ಲಿ ಅಂಥವರಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಆದರೆ, ಇದು ಇಡೀ ಕರ್ನಾಟಕಕ್ಕೆ ಅನ್ವಯವಾಗೋದಿಲ್ಲ. ಗ್ರೇಟರ್ ಬೆಂಗಳೂರಿನ ಎಲ್ಲ ಪಾಲಿಕೆಗಳಿಗೆ ಅನ್ವಯವಾಗುವಂತೆ ಮಾತ್ರವೇ ಈ ಆದೇಶ ಹೊರಡಿಸಲಾಗಿದೆ. ಜೊತೆಗೆ ನಾಯಿ ಕಡಿತಕ್ಕೆ ಒಳಗಾಗುವ ನಾಗರಿಕರಿಗೆ ಸಂಬಂಧಿಸಿದಂತೆ ಪರಿಶೀಲನಾ ಮತ್ತು ಪರಿಹಾರಧನ ವಿತರಿಸುವ ಸಮಿತಿ‌ ರಚನೆಗೆ ಸೂಚನೆ ನೀಡಲಾಗಿದೆ.



Source link

Leave a Reply

Your email address will not be published. Required fields are marked *