Headlines

ಸ್ಮಶಾನದಲ್ಲಿ ತ್ಯಾಜ್ಯ ಸುರಿದಿದ್ದಕ್ಕೆ ಪಂಚಾಯತ್​ ಮುಂದೆ ಕಸ ಸುರಿದು ಪ್ರತಿಭಟನೆ

ಸ್ಮಶಾನದಲ್ಲಿ ತ್ಯಾಜ್ಯ ಸುರಿದಿದ್ದಕ್ಕೆ ಪಂಚಾಯತ್​ ಮುಂದೆ ಕಸ ಸುರಿದು ಪ್ರತಿಭಟನೆ


ನೆಲಮಂಗಲ, ನವೆಂಬರ್ 20: ಎಲ್ಲೆಂದರಲ್ಲಿ ಕಸುವವರ ವಿರುದ್ಧ ಬೆಂಗಳೂರಿನಲ್ಲಿ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆ ಲೋಡ್ ಗಟ್ಟಲೆ ಕಸ ಸುರಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಜೊತೆಗೆ ದಂಡವನ್ನೂ ವಿಧಿಸುವ ಕೆಲಸ ಮಾಡುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಈ ಮಾದರಿ ಉಲ್ಟಾ ಆಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿದಿದ್ದಕ್ಕೆ ಪಂಚಾಯತ್ ಕಚೇರಿ ಮುಂದೆಯೇ ಕಸ ಸುರಿದು ಜನ ಪಾಠ ಕಲಿಸಿದ್ದಾರೆ. ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಸಂಗ್ರಹವಾಗುವ ಕಸವನ್ನು ಸ್ಮಶಾನದಲ್ಲಿ ಸುರಿದ ಪಂಚಾಯತ್ ನಡೆಗೆ ಸಿಡಿದೆದ್ದ ಸಾರ್ವಜನಿಕರು, ಮನೆಗಳಲ್ಲಿ ಸಂಗ್ರಹ ಮಾಡುವ ಕಸವನ್ನು ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಸ್ಮಶಾನದಲ್ಲಿ ಕಸ ಹಾಕಲು ಸೂಚನೆ ನೀಡಿದ್ದ ಪಿಡಿಓ ವಿರುದ್ಧ ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *