
ಕೆಂಪು ತಂಡದ ಸದಸ್ಯರೆಲ್ಲರೂ ಜೊತೆಯಾಗಿ ಒಮ್ಮತದಿಂದ ನಿರ್ಧಾರ ಪ್ರಕಟಿಸಬೇಕು ಎಂದು ಹೇಳಿದರೂ ಗಿಲ್ಲಿ ನಟ ಮಾತ್ರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ. ಮತ್ತೆ ಮತ್ತೆ ತಮ್ಮ ಮೊಂಡುವಾದವನ್ನು ಗಿಲ್ಲಿ ನಟ ಎಲ್ಲರ ಮುಂದೆ ಮಂಡಿಸುತ್ತಾರೆ. ಇದರಿಂದ ಬೇಸತ್ತ ಕ್ಯಾಪ್ಟನ್ ರಘು ಎಚ್ಚರಿಕೆ ನೀಡಿದ್ರೂ ಗಿಲ್ಲಿ ನಟ ಎಚ್ಚೆತ್ತುಕೊಳ್ಳಲ್ಲ.
ನಾನು ಮಾತ್ರ ಗಿಲ್ಲಿಯನ್ನು ಕರೆಯಲ್ಲ. ಆಟ ಮುಗಿದ ಬಳಿಕ ಫಲಿತಾಂಶ ಪ್ರಕಟಿಸೋದು ಉಸ್ತುವಾರಿಯ ಜವಾಬ್ದಾರಿ. ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿರುವೆ ಎಂದು ಅಶ್ವಿನಿ ಗೌಡ ತಮ್ಮ ನಿರ್ಧಾರಕ್ಕೆ ಬದ್ಧವಾಗುತ್ತಾರೆ.