ಕುಂದಾಪುರ, ನ.21: ಮಂದಾರ್ತಿ ಯಕ್ಷಗಾನ ಮೇಳದ ಕಲಾವಿದರಿಂದ (ಯಕ್ಷಗಾನ ಕಲಾವಿದ ಸಾವು) ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸಿ, ಚೌಕಿಗೆ ಬಂದು ಬಣ್ಣ ಕಳಚುತ್ತಿದ್ದ ವೇಳೆ ಹೃದಯಘಾತವಾಗಿ ಸಾವಿನ್ನಪ್ಪಿದ್ದಾರೆ. ಈ ಕುಂದಾಪುರದ ಸೌಡದಲ್ಲಿ ಘಟನೆ ನಡೆದಿದೆ. ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ಈಶ್ವರ ಗೌಡ ಎಂಬ ಯಕ್ಷಗಾನ ಕಲಾವಿದ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 2ನೇ ಮೇಳದಲ್ಲಿ ಮಹಿಷಾಸುರ ಪಾತ್ರವನ್ನು ನಿರ್ವಹಿಸಿದರು. ಬುದ್ಧವಾರ ರಾತ್ರಿ ಸೌಧದಲ್ಲಿ ನಡೆಯುತ್ತಿರುವ ದೇವಿ ಮಹ್ಮಾತೆ ಯಕ್ಷಗಾನದಲ್ಲಿ ಅದ್ಭುತವಾದ ಮಹಿಷಾಸುರ ನೀಡಿದ್ದ ಈ ಚೌಕಕ್ಕೆ ಈ ಬಣ್ಣ ತೆಗೆಯುವ ವೇಳೆ ತೀವ್ರ ಎದೆನೋವು ಬಂದು ಸಾವನ್ನಪ್ಪಿದ್ದಾರೆ.
ದೇವಿ ಪಾತ್ರಧಾರಿ ಹೇಳಿದ್ದೇನು?
ಮಹಿಷಾಸುರ ಪಾತ್ರ ಮಾಡುತ್ತಿರುವ ಈಶ್ವರಗೌಡ, ತುಂಬಾ ಸುಸ್ತಾಗಿರುವ ಬಗ್ಗೆ ರಂಗಸ್ಥಳದಲ್ಲೇ ದೇವಿ ಪಾತ್ರಧಾರಿಗಳಿಗೆ ಸೂಚನೆ ನೀಡಿದ್ದರು ಈಶ್ವರ ಗೌಡ ಸುಸ್ತಾಗಿರುವುದನ್ನು ಕಂಡು ದೇವಿ ಪಾತ್ರಧಾರಿ ಮಹಿಷ ವಧೆ ಸನ್ನಿವೇಶವನ್ನು ಬೇಗನೇ ಮುಗಿಸಿದ್ದಾರೆ ಎಂದು ಹೇಳಿದ್ದಾರೆ. ನಂತರ ಈಶ್ವರ ಗೌಡ ಅವರು ಚೌಕಿ ಬಣ್ಣ ಕಳಚುವ ವೇಳೆ ಅವರು ಮೈ ತಣ್ಣಗಾಗುತ್ತಿದ್ದಾರೆ, ಸುಸ್ತು, ಎದೆ ನೋವು, ಹೊಟ್ಟೆ ನೋವು ಕಡಿಮೆ ಆಗುತ್ತಿದೆ ಎಂದು ಸಹೋದ್ಯೋಗಿಗಳಲ್ಲಿ ಹೇಳಿದರು. ಆದರೆ ಆದಾಗಲೇ ಅವರ ಜೀವ ಹೋಗಿದೆ.
ಇದನ್ನೂ ಓದಿ: ಯಕ್ಷಗಾನ ಕಲಾವಿದರಲ್ಲಿ ಸಾಮಾನ್ಯವಾಗಿರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ
ರಂಗಸ್ಥಳದಲ್ಲಿ ಕಲಾವಿದರ ಮರಣ
- 2017 ಮಾ.24ರಂದು ಪ್ರಸಿದ್ಧ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಕಟೀಲು ಸಮೀಪದ ಯಕ್ಷಗಾನ ಎಕ್ಕಾರಿನಲ್ಲಿ ನಡೆದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿ ಅರುಣಾಸುರನಾಗಿ ಪಾತ್ರ ನಿರ್ವಹಿಸುವ ವೇಳೆ ರಂಗಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.
- 2021 ಜ.5 ಮಂದಾರ್ತಿ ಯಕ್ಷಗಾನ ಮೇಳದ ಪ್ರಧಾನ ಪಾತ್ರಧಾರಿ ಸಾಧು ಕೊಠಾರಿ ಶಿರಿಯಾರದ ಕಾಜ್ರಲ್ಲಿ ಸಮೀಪದ ಕಲ್ಬೆಟ್ಟು ಎಂಬಲ್ಲಿ ರಂಗಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.
- 2022 ಡಿ.22 ಪ್ರಸಂಗಕರ್ತ ಗುರುವಪ್ಪ ಬಾಯಾರು ಕಟೀಲು ಸರಸ್ವತಿ ಸದನದಲ್ಲಿ ನಡೆದ ತ್ರಿಜನ್ಮ ಮೋಕ್ಷದ ಶಿಶುಪಾಲನ ಪಾತ್ರ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು
- 2024 ಮೇ 1 ರಂದು ಕೋಟ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಮೇಳದ ಕಲಾವಿದ ಪುತ್ತೂರು ಗಂಗಾಧರ ಜೋಗಿ ಅವರು ಮುಗಿಸಿ ಚೌಕಿಯಲ್ಲಿ ವೇಷ ಕಳಚಿದ್ದ ವೇಳೆ ಹೃದಯಘಾತದಿಂದ ನಿಧನ ಹೊಂದಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ