Bus Accident ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು | School Vehicle Collides With Truck In Raichur 8 Injured Children Hospitalized

Bus Accident ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು | School Vehicle Collides With Truck In Raichur 8 Injured Children Hospitalized



Bus Accident ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು | School Vehicle Collides With Truck In Raichur 8 Injured Children Hospitalized

ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು ಮಾಡಲಾಗಿದೆ. ಓರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಯಚೂರು (ನ.25) ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮರಳುತ್ತಿರುವ ವೇಳೆ ಶಾಲಾ ಬಸ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಮಕ್ಕಳು ಶಾಲಾ ಬಸ್ ಮೂಲಕ ಶಾಲೆಯಿಂದ ಮನೆಗೆ ಹೊರಟ ವೇಳೆ ಅಪಘಾತ ಸಂಭವಿಸಿದೆ. ಸರಕು ಸಾಗಣೆಯ ಟ್ರಕ್ ಹಾಗೂ ಶಾಲಾ ವಾಹನ ಡಿಕ್ಕಿಯಾಗಿ 8 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಸನ್ನಿಧಿ ಎಂಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಆಗಮಿಸಿದ ಮಾನ್ವಿ ತಹಸೀಲ್ದಾರ್

ಮಾನ್ವಿಯಿಂದ ಕೋಟ್ನೆಕಲ್ ಗ್ರಾಮಕ್ಕೆ ಹೊರಟ್ಟ ಖಾಸಗಿ ಶಾಲೆಯ ಸ್ಕೂಲ್ ಬಸ್ ಅಪಘಾತಕ್ಕೀಡಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಮಾನ್ವಿ ತಹಸೀಲ್ದಾರ್ ಭೀಮರಾಯ ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ಬೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಮಾಹಿತಿ ತಿಳಿಯುತ್ತಿದ್ದಂತೆ ಗಾಬರಿಗೊಂಡ ಪೋಷಕರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾಗಡಿ ಅಪಘಾತದಲ್ಲಿ ಬೈಕ್ ಸವಾರ ಸಾವು

ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿ ಬಳಿಯ ಆನೆಹಳ್ಳ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹೊರಟಿದ್ದ 27 ವರ್ಷದ ಸುನೀಲ್ , ಮಾಗಡಿ ಕಡೆಯಂದ ಬಂದ್ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತ ಸ್ರಾವದಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಮಾಗಡಿ ಪೊಲೀಸರ ಭೇಟಿ ಪರಿಶೀಲನೆ ಪ್ರಕರಣ ದಾಖಲಿಸಿದ್ದಾರೆ.

ಓರ್ವ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು ಇಬ್ಬರಿಗೆ ಗಾಯ

ಚಿಕ್ಕೋಡಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೆ ಓರ್ವ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು ಇಬ್ಬರಿಗೆ ಗಾಯಗೊಂಡ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೊರವಲಯದ ವಿಶ್ವೇಶ್ವರಯ್ಯ ನಗರದಲ್ಲಿ ಈ ಅಪಘಾತ ಸಂಭವಿಸಿದೆ. ಕಾಲೇಜಿನಿಂದ ಬೈಕ್‌ಮೇಲೆ ಚಿಕ್ಕೋಡಿ ಕಡೆಗೆ ಬರುತ್ತಿದ್ದ ವಿದ್ಯಾರ್ಥಿಗಳು, ವಿದ್ಯುತ್ ಕಂಬಕ್ಕೆ ಹೊಡೆದಿದ್ದಾರೆ. ಒಂದೇ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 20 ವರ್ಷದ ಸಮರ್ಥ ಅಪ್ಪಾಜಿಗೋಳ ಮೃತ ವಿದ್ಯಾರ್ಥಿ. ಸಚಿನ ಬಾಡಕೆ ಹಾಗೂ ಅರವಿಂದ ಮೈಗೆರಿ ಗಂಭೀರ ಗಾಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕೋಡಿಯ KLE ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.



Source link

Leave a Reply

Your email address will not be published. Required fields are marked *