15

Image Credit : Asianet News
ಮಹಾಂತೇಶ್ ಬೀಳಗಿ ಕನಸು
ಕಾರ್ ಅಪಘಾತದಲ್ಲಿ ಮೃತರಾದ ಕರ್ನಾಟಕದ ಜನಪ್ರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಬಡ ಮಕ್ಕಳಿಗಾಗಿಯೇ ಮಹತ್ವದ ಕನಸು ಕಂಡಿದ್ದರು. ಆ ಕನಸು ಈಡೇರುವ ಮುನ್ನವೇ ಮಹಾಂತೇಶ್ ಬೀಳಗಿ ಮೃತರಾಗಿದ್ದಾರೆ. ಮಹಾಂತೇಶ್ ಬೀಳಗಿ ಅವರ ಅಂತಿಮ ದರ್ಶನ ಪಡೆದ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
25
Image Credit : Asianet News
ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನ
ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮಾತನಾಡಿ, ಕೊನೆಯದಾಗಿ ಅವರ ತಾಯಿ ತೀರಿಕೊಂಡಾಗ ಬಂದು ಮಾತಾಡಿದ್ದೆ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು. ರೊಟ್ಟಿ ಮಾರಿ ತಾಯಿ ನನ್ನನ್ನು ಓದಿಸಿದ್ದರು ಅಂತ ಹೇಳುತ್ತಿದ್ದರು. ಅದೆಲ್ಲವನ್ನೂ ನೋಡಿ ಐಎಎಸ್ ಅಧಿಕಾರಿ ಆಗಬೇಕು ಅಂದುಕೊಂಡು ಬಂದವರು ಎಂದು ಭಾವುಕರಾದು.
35
Image Credit : Asianet News
ಕೋಚಿಂಗ್ ಸೆಂಟರ್ ಆರಂಭಿಸುವ ಕನಸು
ಬಡತನವನ್ನು ಮೆಟ್ಟಿ ನಿಲ್ಲಲು ಏಕೈಕ ಮಾರ್ಗವೆಂದರೆ ಓದುವುದು, ಆ ಮೂಲಕ ಉನ್ನತ ಹುದ್ದೆ ಪಡೆಯುವುದು ಎಂಬುದು ಅವರ ನಿಲುವಾಗಿತ್ತು. ಧಾರವಾಡದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗಲು ಕೋಚಿಂಗ್ ಸೆಂಟರ್ ತೆರೆಯಲು ನಿರ್ಧರಿಸಿದ್ದರು ಎಂದರು.
45
Image Credit : Asianet News
ಮಾರ್ಗದರ್ಶನ
ಮಹಾಂತೇಶ ಅವರ ಸ್ನೇಹಿತ ಹಿರಿಯ ಐಎಎಸ್ ಅಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಘಟನೆ ನಿಜಕ್ಕೂ ನಂಬಲು ಆಗುತ್ತಿಲ್ಲ. ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಲ್ಲಿದ್ದ ಜೀವನೋತ್ಸಾಹ ಯಾರಲ್ಲಿಯೂ ಕಾಣಲು ಸಾಧ್ಯವಿಲ್ಲ. ಅಪರೂಪದ ವ್ಯಕ್ತಿತ್ವ. ಅಪ್ಪಟ ಬಸವತತ್ವ ನಿಷ್ಠರು, ಉತ್ತಮ ವಾಗ್ಮಿಗಳು, ಯುವಕರಿಗೆ ಸ್ಫೂರ್ತಿದಾಯಕವಾಗಿದ್ದರು. ಕೆಎಎಸ್, ಐಎಎಸ್ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.
ಇದನ್ನೂ ಓದಿ: 25 ರೂಪಾಯಿ ಪಿಂಚಣಿಗೆ 100 ರೂ. ಲಂಚ ಕೊಟ್ಟಿದ್ರು ಮಹಾಂತೇಶ್ ಬೀಳಗಿಯವರ ತಾಯಿ
55
Image Credit : Asianet News
ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ