Headlines

‘ನಂಬಿಕೆಗಿಂತ ದೊಡ್ಡ ಗುಣವಿಲ್ಲ’, ಸಿಎಂ ಮುಂದೆಯೇ ನಂಬಿಕೆ ಮಾತಾಡಿದ ಡಿಕೆಶಿ

‘ನಂಬಿಕೆಗಿಂತ ದೊಡ್ಡ ಗುಣವಿಲ್ಲ’, ಸಿಎಂ ಮುಂದೆಯೇ ನಂಬಿಕೆ ಮಾತಾಡಿದ ಡಿಕೆಶಿ


ಬೆಂಗಳೂರು, (ನವೆಂಬರ್ 28): ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ. ಇದುವರೆಗೆ ಇಬ್ಬರ ಬೆಂಬಲಿಗರ ನಡುವೆ ಅಧಿಕಾರ ಹಂಚಿಕೆ ಮಾತಿನ ಸಮರ ನಡೆಯುತ್ತಿತ್ತು. ಆದರೆ, ಇದೀಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಬಹಿರಂಗವಾಗಿ ಟ್ವೀಟ್ ವಾರ್ ಗಿಳಿದಿದ್ದಾರೆ. ಕೊಟ್ಟ ಮಾತಿನ ಶಕ್ತಿಯೇ ಶಕ್ತಿ ಎಂಬ ಡಿಕೆಶಿ ಪೋಸ್ಟ್ ಗೆ ಸಿದ್ದರಾಮಯ್ಯ ನೇರಾ ನೇರ ಕೌಂಟರ್ ಕೊಟ್ಟಿದ್ದು, ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ನಾವು ಜನತೆಗೆ ಕೊಟ್ಟ ಮಾತೇ ನಮಗೆ ಜಗತ್ತು ಟ್ವೀಟ್ ಮಾಡಿದೆ.

ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಉಪಸ್ಥಿತರಿದ್ದ ವೇದಿಕೆಯಲ್ಲಿ ಸರ್ವಜ್ಞನ ವಚನ ಹೇಳಿ ನಂಬಿಕೆ ಬಗ್ಗೆ ವಿವರಿಸಿದ್ದಾರೆ. ನಿಂಬೆಗಿನ್ ಹುಳಿಯಿಲ್ಲ, ತುಂಬಿಗಿಂಬ ಕರಿಯಿಲ್ಲ. ಶಂಭುಗಿಂಬ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲವೆಂದ, ನಿಂಬೆಗಿಂತ ಹುಳಿಯಾದ ವಸ್ತು ಮತ್ತೊಂದಿಲ್ಲ. ದುಂಬಿಗಿಂತ ಕರಿಯಿಲ್ಲ, ಶಂಭು ಅಂದರೆ ಪರಮೇಶ್ವರನ ನಂಬಿಕೆಯ ಬಗ್ಗೆ ದೊಡ್ಡಗುಣವಿಲ್ಲವೆಂದು ಭಾಷಣ ಆರಂಭಿಸಿದರು.



Source link

Leave a Reply

Your email address will not be published. Required fields are marked *