ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಈ ವಾರವೆಲ್ಲ ಅತಿಥಿಗಳ ಆರ್ಭಟ ಜೋರಾಗಿತ್ತು. ಇದೀಗ ಶನಿವಾರ ಬಂದಿದ್ದು ಅತಿಥಿಗಳು, ಅತಿಥೇಯರು ಎಲ್ಲರೂ ಕಿಚ್ಚನ ಮುಂದೆ ಸ್ಪರ್ಧಿಗಳಾಗಿ ಮಾತ್ರ ಕೂತಿದ್ದಾರೆ. ಸುದೀಪ್ ಅವರು ಈ ವಾರ ನಡೆದ ಘಟನೆಗಳನ್ನೆಲ್ಲ ಅಳೆದು ತೂಗಿ, ತಪ್ಪು-ಸರಿಗಳ ಲೆಕ್ಕಾಚಾರವನ್ನು ಎಲ್ಲರೂ ಮುಂದಿಡುತ್ತಿದ್ದಾರೆ. ಈ ವೇಳೆ ಸ್ಪರ್ಧಿಗಳು ಮತ್ತು ಅತಿಥಿಗಳು ಇಬ್ಬರೂ ಸಹ ಗಿಲ್ಲಿಯ ಮೇಲೆ ಮುಗಿಬಿದ್ದಿದ್ದಾರೆ. ಗಿಲ್ಲಿ, ನಮ್ಮನ್ನು ಅವಮಾನಿಸಿದ ಎಂದು ಅತಿಥಿಗಳು, ಗಿಲ್ಲಿಯಿಂದ ನಮ್ಮ ಶ್ರಮ ವ್ಯರ್ಥವಾಯ್ತೆಂದು ಸ್ಪರ್ಧಿಗಳು ಸುದೀಪ್ ಮುಂದೆ ಚಾಡಿ ಹೇಳಿದ್ದಾರೆ. ಸುದೀಪ್ ನೀಡುವ ತೀರ್ಪೇನು? ಇಂದಿನ ಎಪಿಸೋಡ್ ನಲ್ಲಿ ಸಿಗಲಿದೆ ಉತ್ತರ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ