Headlines

ಸೂಪರ್ ಹಿಟ್ ಸಿನಿಮಾದಲ್ಲಿ ಗಿಲ್ಲಿ ನಟ: ಟೀಸರ್ ತುಂಬಾ ಸಿಕ್ಕಾಪಟ್ಟೆ ನಗು

ಸೂಪರ್ ಹಿಟ್ ಸಿನಿಮಾದಲ್ಲಿ ಗಿಲ್ಲಿ ನಟ: ಟೀಸರ್ ತುಂಬಾ ಸಿಕ್ಕಾಪಟ್ಟೆ ನಗು


‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ವೀಕ್ಷಕರಿಗೆಲ್ಲ ಗಿಲ್ಲಿ ನಟ (ಗಿಲ್ಲಿ ನಟ) ಅವರು ಫೇವರಿಟ್ ಆಗಿದ್ದಾರೆ. ಹಲವು ರಿಯಾಲಿಟಿ ಶೋಗಳ ಮೂಲಕ ಅವರು ಮಿಂಚಿದ್ದಾರೆ. ಈಗ ಅವರು ‘ಸೂಪರ್ ಹಿಟ್’ (ಸೂಪರ್ ಹಿಟ್) ಸಿನಿಮಾಗೆ ಹೀರೋ ಆಗಿದ್ದಾರೆ. ಅವರ ಜೊತೆ ಗೌರವ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾಗೆ ಶ್ವೇತಾ ನಾಯಕಿಯಾಗಿದ್ದಾರೆ. ‘ಸೂಪರ್ ಹಿಟ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಪ್ರದರ್ಶನಕ್ಕೆ ನಗುವಿನ ಭರಪೂರ ಮನರಂಜನೆ ಸಿಕ್ಕಿದೆ. ವಿಜಯಾನಂದ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

‘ಸೂಪರ್ ಹಿಟ್’ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು. ‘ಸು ಫ್ರಮ್ ಸೋ’ ರೀತಿಯಲ್ಲೇ ‘ಸೂಪರ್ ಹಿಟ್’ ಸಿನಿಮಾ ಕೂಡ ಮನ ಗೆಲ್ಲಲಿದೆ ಎಂಬ ಭರವಸೆ ಚಿತ್ರತಂಡಕ್ಕೆ ಇದೆ. ಸಿನಿಮಾ ಬಿಡುಗಡೆ ಆದ ಬಳಿಕ ಸೂಪರ್ ಹಿಟ್ ಆಗಿದೆ ಸಹಜ. ಆದರೆ ಈ ಸಿನಿಮಾಗೆ ಶೀರ್ಷಿಕೆಯೇ ಸೂಪರ್ ಹಿಟ್. ಅದಕ್ಕೂ ಒಂದು ಕಾರಣ ಇದೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ವಿಜಯಾನಂದ ವಿವರಿಸಿದರು.

ನಿರ್ಮಾಪಕರಾದ ಜಿ. ಉಮೇಶ್ ಅವರು ಒಂದಷ್ಟು ಏಳುಬೀಳು ಕಂಡಿದ್ದಾರೆ. ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡಬೇಕು ಎಂಬ ಕನಸನ್ನು ಅವರು ಹೊಂದಿದ್ದರು. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡಿದ್ದ ನಿರ್ದೇಶಕರು, ಕಥೆಗೂ ಹೊಂದಿಕೆ ಆಗುತ್ತೆ ಎಂಬ ಕಾರಣದಿಂದ ‘ಸೂಪರ್ ಹಿಟ್’ ಎಂಬ ಶೀರ್ಷಿಕೆ ನೀಡಿದ್ದಾರೆ. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಕೂಡ ಈ ಶೀರ್ಷಿಕೆ ಇದೆ.

‘ಸೂಪರ್ ಹಿಟ್’ ಸಿನಿಮಾ ಟೀಸರ್:

ಖ್ಯಾತ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರನಾದ ವಿಜಯಾನಂದ ಅವರು ಕಮರ್ಷಿಯಲ್ ಧಾಟಿಯಲ್ಲಿ ಹಾಸ್ಯ ಪ್ರಧಾನವಾಗಿ ‘ಸೂಪರ್ ಹಿಟ್’ ಸಿನಿಮಾ ಮಾಡುತ್ತಿದ್ದರು. ಈ ಚಿತ್ರದ ಎಲ್ಲ ಕೆಲಸಗಳು ಮುಗಿದಿವೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಅಣ್ಣ ಎಂದು ಕೂಗಾಡಿದ ಕಾವ್ಯ: ಐ ಲವ್ ಯೂ ಅಂತ ಚೀರಾಡಿದ ಗಿಲ್ಲಿ ನಟ

ಕಾಮಿಡಿ ಥ್ರಿಲ್ಲರ್ ಶೈಲಿಯಲ್ಲಿ ‘ಸೂಪರ್ ಹಿಟ್’ ಸಿನಿಮಾ ಮೂಡಿಬಂದಿದೆ. ಇದು ಕನ್ನಡ ಚಿತ್ರರಂಗದಲ್ಲಿ ಮೊದಲ ಪ್ರಯತ್ನ ಎಂದು ನಿರ್ದೇಶಕರು ಹೇಳಿದ್ದಾರೆ. ‘ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್’ ಮೂಲಕ ಜಿ. ಉಮೇಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನಾಗೇಂದ್ರ ಪ್ರಸಾದ್ ಕೂಡ ಒಂದು ಪಾತ್ರ ಮಾಡಿದ್ದಾರೆ.

ಸೂಪರ್ ಹಿಟ್ ಕನ್ನಡ ಚಿತ್ರತಂಡ

ಸೂಪರ್ ಹಿಟ್ ಕನ್ನಡ ಚಿತ್ರತಂಡ

ಸಾಧು ಕೋಕಿಲ, ನಾಗವರ್ಧನ್, ಪ್ರಮೋದ್ ಶೆಟ್ಟಿ, ಡ್ರ್ಯಾಗನ್ ಮಂಜು, ಸೀನು ಭಾಯ್, ಜೀಜಿ, ಟೆನ್ನಿಸ್ ಕೃಷ್ಣ, ಗಿರಿ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಅಶ್ವಿನಿ ರಾವ್, ಬಿ.ಎನ್. ಮಂಗಳ, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಆರ್.ಡಿ. ನಾಗಾರ್ಜುನ ಅವರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *