ಬೆಂಗಳೂರು, ಡಿ.6: ಬೆಂಗಳೂರಿನ ನೆಲಮಂಗಲದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾದ ಐದೇ ತಿಂಗಳಿಗೆ ನವವಿವಾಹಿತೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ. ಕಾರಣ ಕೇಳಿದ್ರೆ ನೀವು ಅಚ್ಚರಿಪಡುವುದು ಖಂಡಿತ. ಕನ್ಯಾತ್ವ ಹಾಗೂ ಪುರುಷತ್ವ ಪರೀಕ್ಷೆ ವಿಚಾರವಾಗಿ ಗಂಡ-ಹೆಂಡತಿ ನಡುವೆ ಗಲಾಟೆ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಕನ್ಯಾತ್ವ ಪರೀಕ್ಷೆ ಮಾಡಿಸಿ, ಗಂಡನ ಪುರುಷತ್ವ ಪರೀಕ್ಷೆ ನಡೆಸಲು ಯಾಕೆ ಹಿಂದೇಟು ಹಾಕುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದಕ್ಕೆ ರೊಚ್ಚಿಗೆದ್ದು ಗಂಡ ಹಾಗೂ ಅತ್ತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾಳೆ.
ಜೂನ್ 9 ರಂದು ಇಬ್ಬರು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಹೆಸರಘಟ್ಟ ಹೋಬಳಿ ಗುಡ್ಡದಹಳ್ಳಿ 26 ವರ್ಷದ ಯುವತಿಯನ್ನು ನೆಲಮಂಗಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್ ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ. ವರದಕ್ಷಿಣೆ ಹಾಗೂ ಚಿನ್ನಾಭರಣ ನೀಡಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ, ಆದರೆ ಫಸ್ಟ್ ನೈಟ್ ದಿನ ಇಬ್ಬರ ನಡುವೆ ಜಗಳ ಶುರುವಾಗಿದೆ.
ಫಸ್ಟ್ ನೈಟ್ ನಲ್ಲಿ ಜಗಳ:
ಎರಡು ಜೋಡಿ ಚೆನ್ನಾಗಿ ಓದಿದೆ. ಎರಡು ಮನೆಯವರು ಒಪ್ಪಿಕೊಂಡು ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಹುಡುಗನಿಗೆ ಬೇಕಾದಷ್ಟು ಚಿನ್ನ, ಹಣ ಎಲ್ಲವನ್ನು ತಿಳಿದಿದೆ. ಫಸ್ಟ್ ನೈಟ್ ದಿನ ಹುಡುಗ ಯಾವುದಕ್ಕೂ ಆಸಕ್ತಿ ತೋರಬೇಕು. ಹೆಂಡತಿ ಹತ್ತಿರ ಹೋದ್ರು, ದೂರು ಹೋಗುತ್ತಿದ್ದ, ಈ ಮನೆಯಲ್ಲೂ ದಿನ ಜಗಳ ನಡೆಯುತ್ತಿತ್ತು. ಕೊನೆಗೆ ಎರಡು ಕಡೆಯ ಕುಟುಂಬದವರು ಈ ಬಗ್ಗೆ ಚರ್ಚೆ ನಡೆಸಿ, ವೈದ್ಯಕೀಯ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆಯಲ್ಲಿ ತಪಾಸಣೆ. ಹುಡುಗಿಯ ವೈದ್ಯಕೀಯ ಪರೀಕ್ಷೆಯಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಪತಿಯು ಪುರುಷತ್ವ ಪರೀಕ್ಷೆ ಮಾಡಿಸದೇ, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಕಳ್ಳತನ, ದರೋಡೆಯಲ್ಲಿ ಖಾಕಿ ಶಾಮೀಲು: ವಿಚಾರಣೆಗೆ ಬಂದಿದ್ದ ಆರೋಪಿಯಿಂದಲೇ ಹಣ ಎಗರಿಸಿದ ಹೆಡ್ ಕಾನ್ ಟೇಬಲ್
ಆಸ್ಪತ್ರೆಯಿಂದ ಪರಾರಿಯಾದ ಪತಿ ಮನೆಗೆ ಬಂದು, ಪತಿ ಮತ್ತು ಅತ್ತೆಯು ಹುಡುಗಿ ಮೇಲೆ ಹಲ್ಲೆ ಮಾಡಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ಜೊತೆಗೆ ವರದಕ್ಷಿಣೆ ಕಿರುಕುಳ ಹೇಳಿಕೆ. ಇದರಿಂದ ಮನನೊಂದು ಹುಡುಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಪೊಲೀಸ್ ಪತಿ, ಅತ್ತೆ ಹಾಗೂವನ ವಿರುದ್ಧ ಸೆಕ್ಷನ್ 85 (BNS) ಮತ್ತು ಡೌರಿ ಪ್ರೊಹಿಬಿಷನ್ ಆಕ್ಟ್ನ ಸೆಕ್ಷನ್ 3, 4 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿದ ಪತ್ನಿ ಹಾಗೂ ಅತ್ತೆ ಪರಾರಿಯಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 4:50 pm, ಶನಿ, 6 ಡಿಸೆಂಬರ್ 25