ನವೆಂಬರ್ 8: ಸಮೀಪದಲ್ಲಿರುವ ಗುರುಗ್ರಾಮಣ ಓಷನ್ ಸೆವೆನ್ ಬ್ಯುಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ದೆಹಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದೆ. ಪಿಎಂ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಬಡವರಿಗೆಂದು ನಿರ್ಮಿಸಿದ ಮನೆಯನ್ನು ಹೆಚ್ಚಿನ ಹಣಕ್ಕೆ ಬೇರೆಯವರಿಗೆ ಮಾರಿದ ಆರೋಪ ಈ ಒಎಸ್ ಬಿಪಿಎಲ್ ಕಂಪನಿ ಮೇಲಿದೆ. ತನಿಖೆಯ ವೇಳೆ, ಈ ಕಂಪನಿಯು ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಕಳೆದ ತಿಂಗಳು (ನ. 13) ಒಎಸ್ಬಿಪಿಎಲ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸ್ವರಾಜ್ ಸಿಂಗ್ ಯಾದವ್ ಅವರನ್ನು ಐಡಿ ಅಧಿಕಾರಿಗಳು ಬಂಧಿಸಿದ್ದರು. ಈ ಕಂಪನಿಯು ಪಿಎಂಎವೈ ಯೋಜನೆ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುವಂತಹ ವ್ಯವಸ್ಥೆ ರೂಪಿಸಿತ್ತು.
ಇದನ್ನೂ ಓದಿ: ಇಂಡಿಗೋ ಏರ್ಲೈನ್ಸ್ ದಿಢೀರ್ ಬಿಕ್ಕಟ್ಟಿಗೆ ಸಿಲುಕಲು ಹೊಸ ಎಫ್ಡಿಟಿಎಲ್ ನಿಯಮಗಳೇ ಕಾರಣ; ಏನಿದೆ ರೂಲ್ಸ್?
ಆವಾಸ್ ಯೋಜನೆ ಓಎಸ್ ಬಿಪಿಎಲ್ ದುರ್ಬಳಕೆ ಮಾಡಿಕೊಂಡಿದ್ದು ಹೀಗೆ…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಫ್ಲ್ಯಾಟ್ಗಳನ್ನು ಓಎಸ್ ಬಿಪಿಎಲ್ ಕಂಪನಿಯ ಸುಳ್ಳು ಕಾರಣಗಳನ್ನು ನೀಡಿ ರದ್ದುಗೊಳಿಸುವ ಒಂದು ವ್ಯವಸ್ಥೆಯನ್ನು ಮಾಡಿತ್ತು. ರದ್ದಾದ ಫ್ಲಾಟ್ಗಳನ್ನು ಹೆಚ್ಚಿನ ಮೊತ್ತಕ್ಕೆ ಹೊಸ ಖರೀದಿದಾರರಿಗೆ ಮಾರಟ.
ಮೂಲಬೆಲೆ 26.5 ಲಕ್ಷ ರೂ ಇದ್ದ ಒಂದು ಫ್ಲಾಟ್ ಅಂದರೆ 40 ರಿಂದ 50 ಲಕ್ಷ ರೂ.ಗಳ ಮರು ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ಇದಷ್ಟೇ ಅಲ್ಲ, ಮೊದಲಿನ ಅರ್ಜಿದಾರರು ಮಾಡಿದ್ದ ಹಣವನ್ನೂ ಈ ಕಂಪನಿ ಗುಳುಂ ಮಾಡುತ್ತಿತ್ತು. ಇಬ್ಬರಿಗೆ ಮಾರಿ ಭಾರೀ ಲಾಭವಾಗುತ್ತಿದೆ ಈ ಕಂಪನಿಯು ಒಂದೇ ಕಂಪನಿ.
ಇದನ್ನೂ ಓದಿ: ನಕಲಿ ವಜ್ರ ಗುರುತಿಸುವುದು ಹೇಗೆ? ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಪರೀಕ್ಷೆಗಳು
ಒಎಸ್ಬಿಪಿಎಲ್ನ ಎಂಡಿ ಸ್ವರಾಜ್ ಸಿಂಗ್ ಯಾದವ್ ಅವರು ಅಕ್ರಮವಾಗಿ ಖರೀದಿಸಿದ 222 ಕೋಟಿ ರೂಪಾಯಿ ಹಣವನ್ನು ಶೆಲ್ ಕಂಪನಿಗಳ ಮೂಲಕ ಹೊರಗೆ ಸಾಗಿಸುತ್ತಿದ್ದರು. ಗುರುಗ್ರಾಮ, ಮಹಾರಾಷ್ಟ್ರ, ಹಾಗೂ ರಾಜಸ್ಥಾನದಲ್ಲಿ ಇವರು ಹಾಗೂ ಇವರ ಕಂಪನಿಯ ಆಸ್ತಿಗಳನ್ನು ಮಾರಿ ಹವಾಲ ಮೂಲಕ ವಿದೇಶಕ್ಕೆ ಕಳುಹಿಸಿದ್ದಾರೆ. ಅಮೆರಿಕಕ್ಕೆ ಹೋಗಿದ್ದ ಈತನ ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ಮೂಲಕ ವಿದೇಶಕ್ಕೆ ಹೋಗಿದ್ದೆ ಆ ಹಣ. ಇದೀಗ, ಒಎಸ್ಬಿಪಿಎಲ್ನ ಆಸ್ತಿಗಳನ್ನು ಜಫ್ತಿ ಮಾಡಿಕೊಳ್ಳಲು ಇಡಿ ಯತ್ನಿಸುತ್ತಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ