
ಬೆಂಗಳೂರು ಗ್ರಾಮಾಂತರ (ಡಿ.08): ಗುಜರಾತಿನಿಂದ ತಂದು ಪ್ರೀತಿಯಿಂದ ಸಾಕಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೂರು ಗಿರ್ ಹಸುಗಳನ್ನು ಖತರ್ನಾಕ್ ಕಳ್ಳರು ಕಳ್ಳತನ ಮಾಡಿರುವ ಹಾಗೂ ಒಂದು ದೊಡ್ಡ ಹಸುವಿನ ಕುತ್ತಿಗೆಯನ್ನು ಕತ್ತರಿಸಿ ಕ್ರೌರ್ಯವನ್ನು ಮೆರೆದ ವಿಕೃತಿಯ ಘಟನೆ ನೆಲಮಂಗಲ ಬಳಿಯ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌಡಹಳ್ಳಿ ಗ್ರಾಮದ ನಿವಾಸಿ ವಿಜಯಲಕ್ಷ್ಮಿ ಎಂಬುವವರು ಈ ಹಸುಗಳನ್ನು ಸಾಕಿದ್ದರು. ಇವರು ಗುಜರಾತ್ನಿಂದ ತಂದಿದ್ದ ಗಿರ್ ತಳಿಯ ಈ 3 ಹಸುಗಳು ಸುಮಾರು 4 ಲಕ್ಷ ರೂಪಾಯಿಗಳಷ್ಟು ಬೆಲೆ ಬಾಳುತ್ತಿದ್ದವು ಎನ್ನಲಾಗಿದೆ.