BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು? | Bigg Boss Kannada Season 12 Episode Dhruvanth And Rajath Fight For Kavya Shaiva

BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು? | Bigg Boss Kannada Season 12 Episode Dhruvanth And Rajath Fight For Kavya Shaiva


15

ನಾಮಿನೇಶನ್‌ ಬಿಸಿ

Image Credit : colors kannada

ನಾಮಿನೇಶನ್‌ ಬಿಸಿ

ಕಾವ್ಯ ಶೈವ ಅವರು ಗಿಲ್ಲಿ ನಟ ಹಾಗೂ ರಜತ್‌ ಅವರನ್ನು ನಾಮಿನೇಟ್‌ ಮಾಡಿದ್ದಾರೆ. ಹೀಗಾಗಿ ರಜತ್‌, ಗಿಲ್ಲಿಯನ್ನು ಸ್ವಿಮ್ಮಿಂಗ್‌ ಪೂಲ್‌ಗೆ ತಳ್ಳಿದ್ದಾರೆ. ಇದರಿಂದಲೇ ಮನೆಯಲ್ಲಿ ಹೊಡೆದಾಡುಕೊಳ್ಳುವಷ್ಟರ ಮಟ್ಟಿಗೆ ಜಗಳ ಹೋಗಿದೆ.

25

ಒಂದು ಕಡೆಗೆ ಸೀಮಿತ ಆಗಿರೋ ಕಾವ್ಯ

Image Credit : colors kannada

ಒಂದು ಕಡೆಗೆ ಸೀಮಿತ ಆಗಿರೋ ಕಾವ್ಯ

ಕಾವ್ಯ ಶೈವ, ಗಿಲ್ಲಿ ನಟ ಅವರು ಒಂದು ಕಡೆಗೆ ಸೀಮಿತ ಆಗಿದ್ದಾರೆ, ಕಾಮಿಡಿ ಮಾಡುತ್ತಾರೆ ಎಂದು ಕಾರಣ ನೀಡಿದ್ದರು. ಇದು ರಜತ್‌ ಪಿತ್ತವನ್ನು ನೆತ್ತಿಗೇರಿಸಿದೆ. ಈ ಕಾರಣ ನೋಡಿ ರಜತ್‌ ಅವರು ಕೆಂಡಾಮಂಡಲರಾಗಿದ್ದಾರೆ. ಆಮೇಲೆ ಜಗಳ ನಡೆದಿದೆ.

35

ಸ್ಪರ್ಧಿಗಳಿಗೆ ತಲೆ ಕೆಟ್ಟೋಗಿದೆಯಾ?

Image Credit : colors kannada

ಸ್ಪರ್ಧಿಗಳಿಗೆ ತಲೆ ಕೆಟ್ಟೋಗಿದೆಯಾ?

ಈ ಮನೆಯಲ್ಲಿ ತಮಾಷೆ ಮಾಡಬಾರದಾ? ಸ್ಪರ್ಧಿಗಳಿಗೆ ತಲೆ ಕೆಟ್ಟೋಗಿದೆಯಾ? ಎಂದು ರಜತ್‌ ಅವರು ಹೇಳಿದ್ದಾರೆ. ಆಗ ಧ್ರುವಂತ್‌ ಅವರು, “ಏನು ಏಕವಚನದಲ್ಲಿ ಮಾತನಾಡುತ್ತಾರೆ” ಎಂದಿದ್ದಾರೆ. ಆಗ ರಜತ್‌ ಅವರು ಧ್ರುವಂತ್‌ ಮೇಲೆ ಕೂಗಾಡಿದ್ದಾರೆ.

45

ನಿನ್ನ ಸೀಸನ್‌ ಅಲ್ಲಿ ಇದೆಲ್ಲ ಇಟ್ಟುಕೋ

Image Credit : colors kannada

ನಿನ್ನ ಸೀಸನ್‌ ಅಲ್ಲಿ ಇದೆಲ್ಲ ಇಟ್ಟುಕೋ

ಧ್ರುವಂತ್‌ ಅವರು, “ನಮ್ಮನ್ನು ಗಿಲ್ಲಿ ಅಂದುಕೊಂಡಿದ್ದೀಯಾ? ಬಾರೋ. ಇದೆಲ್ಲ ನಿನ್ನ ಸೀಸನ್‌ ಅಲ್ಲಿ ಇಟ್ಟುಕೋ” ಎಂದಿದ್ದಾರೆ. ಆಗ ರಜತ್‌ ಅವರು, “ಕೊಟ್ಟರೆ ಎರಡು, ಹಾಗೆ ತಿಂದುಕೊಳ್ತೀಯಾ?” ಎಂದು ಹೇಳಿದ್ದಾರೆ. ಆಮೇಲೆ ಇವರಿಬ್ಬರು ಹೊಡೆದಾಡಿಕೊಳ್ಳಲು ಮುಂದಾಗಿದ್ದಾರೆ.

55

ಮಾತಿನಲ್ಲಿ ಬಗೆಹರಿಸಿಕೊಂಡ್ರಾ?

Image Credit : colors kannada

ಮಾತಿನಲ್ಲಿ ಬಗೆಹರಿಸಿಕೊಂಡ್ರಾ?

ಮನೆಯವರೆಲ್ಲ ಸೇರಿಕೊಂಡು ಧ್ರುವಂತ್‌, ರಜತ್‌ ಅವರು ಹೊಡೆದಾಡಿಕೊಳ್ಳದೆ, ಮಾತಿನಲ್ಲಿ ಬಗೆಹರಿಸಿಕೊಳ್ಳುವಂತೆ ಮಾಡಿದ್ದಾರೆ. ಆಮೇಲೆ ಏನಾಗಿದೆ ಎಂದು ಕಾದು ನೋಡಬೇಕಿದೆ. ಸದ್ಯ ಈ ವಿಲನ್‌ ಟಾಸ್ಕ್‌ನಲ್ಲಿ ಯಾರು ಯಾರು ಏನೇನು ಜಗಳ ಆಡುತ್ತಾರೋ? ಗಿಲ್ಲಿ ನಟ ಎಷ್ಟು ಫನ್‌ ಮಾಡ್ತಾರೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *