17

Image Credit : Instagram
ಭಾರಿ ಟ್ವಿಸ್ಟ್
ಕರ್ಣ ಸೀರಿಯಲ್ (Karna Serial) ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. ನಿಧಿಗೆ ಕರ್ಣ ಮತ್ತು ನಿತ್ಯಾಳ ಸತ್ಯ ಗೊತ್ತಾಯ್ತು. ಇನ್ನೇನು ಎಲ್ಲಾ ಸರಿ ಹೋಗತ್ತೆ ಎಂದುಕೊಂಡಾಗಲೇ ಇದೀಗ ನಿಧಿ ಇನ್ನೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಳೆ. ಕುರುಡಿಯೊಬ್ಬಳಿಗೆ ಡ್ರಾಪ್ ಕೊಡಲು ಹೋಗಿ ಮಹಾ ವಂಚನೆಯಲ್ಲಿ ಬಿದ್ದಿದ್ದಾಳೆ.
27
Image Credit : Instagram
ಕುರುಡಿ ವೇಷದಲ್ಲಿ ಮೋಸ
ಕುರುಡಿಯ ವೇಷದಲ್ಲಿ ಬಂದ ಹುಡುಗಿಯೊಬ್ಬಳು ನಿಧಿಯನ್ನು ಮೋಸದ ಸುಳಿಯಲ್ಲಿ ಸಿಲುಕಿಸಿದ್ದಾಳೆ. ತನಗೆ ಡ್ರಾಪ್ಕೊಡುವಂತೆ ಹೇಳಿದಾಗ ನಿಧಿ ಡ್ರಾಪ್ ಕೊಟ್ಟಿದ್ದಾಳೆ.
37
Image Credit : Instagram
ಬ್ಯಾಗ್ನಲ್ಲಿ ಹಾಕಿದ್ದೇನು?
ಆಗ ಗುಟ್ಟಾಗಿ ಆಕೆ ನಿಧಿಯ ಬ್ಯಾಗ್ನಲ್ಲಿ ಏನೋ ಹಾಕಿದ್ದಳು. ಆದರೆ ಅದೇ ಇದೀಗ ನಿಧಿಯನ್ನು ಜೈಲಿಗೆ ತಳ್ಳಿದೆ. ಅಷ್ಟಕ್ಕೂ, ಆ ಕುರುಡಿಯನ್ನು ಡ್ರಾಪ್ಮಾಡಿದ ಜಾಗ ನೋಡಿದ ನಿಧಿಗೆ ಈ ಜಾಗ ಸರಿಯಿಲ್ಲ ಎನ್ನಿಸಿದೆ. ಈ ಬಗ್ಗೆ ಕುರುಡಿಯನ್ನು ಕೇಳಿದ್ದಾಳೆ.
47
Image Credit : Instagram
ಪೊಲೀಸರ ಎಂಟ್ರಿ
ಆದರೆ ಹಾರಿಕೆ ಉತ್ತರ ಕೊಟ್ಟ ಆಕೆ, ನನಗೆ ಒಳಗಡೆವರೆಗೆ ಕರೆದುಕೊಂಡು ಹೋಗು ಎಂದಿದ್ದಾಳೆ. ಭಯ ಪಡುತ್ತಲೇ ನಿಧಿ ಕರೆದುಕೊಂಡು ಹೋಗಿದ್ದಾಳೆ. ಅದು ರೆಡ್ಲೈಟ್ ಏರಿಯಾ. ಆಗಲೇ ಪೊಲೀಸರ ಎಂಟ್ರಿಯಾಗಿದೆ.
57
Image Credit : Instagram
ಸಪ್ಲೈ ಮಾಡುವಾಕೆ
ಪೊಲೀಸರು ಬ್ಯಾಗ್ ಚೆಕ್ ಮಾಡಿದಾಗ, ನಿಧಿಯ ಬ್ಯಾಗ್ನಲ್ಲಿ ಒಂದಿಷ್ಟು ಜಾಗಗಳ ಲಿಸ್ಟ್ ಸಿಕ್ಕಿದೆ. ಅದರ ಪ್ರಕಾರ, ಆಕೆ ಹುಡುಗಿಯರನ್ನು ಇಂಥ ಏರಿಯಾಗಳಿಗೆ ಸಪ್ಲೈ ಮಾಡುವಾಕೆ. ಕೊನೆಗೆ ಮೋಸದ ಜಾಲಕ್ಕೆ ಸಿಲುಕಿಸಿದ್ದ ಯುವತಿ ಕೂಡ ನಿಧಿ ತನಗೆ ಮೋಸ ಮಾಡಿ ಇಲ್ಲಿ ಕರೆದುಕೊಂಡು ಬಂದಿರುವುದಾಗಿ ಹೇಳಿದ್ದಾಳೆ.
67
Image Credit : Instagram
ಜೈಲಿನಲ್ಲಿ ನಿಧಿ
ಪೊಲೀಸರು ಜೈಲಿಗೆ ಹಾಕಿದ್ದಾರೆ. ಅಲ್ಲಿ, ಸಂಜಯ್ ಎಂಟ್ರಿ ಕೊಟ್ಟಿದ್ದಾನೆ. ತನ್ನನ್ನು ಅವನು ಬಿಡಿಸಬಹುದು ಎಂದು ನಿಧಿ ಅಂದುಕೊಂಡಿದ್ದಾಳೆ.
77
Image Credit : Instagram
ಮುಂದೇನು?
ಆದರೆ ಈ ಪ್ಲ್ಯಾನ್ ಮಾಡಿದ್ದೇ ಅವನು. ಅವನು ಕೂಡ ನಿಧಿಯ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡಿ ಆಕೆಯನ್ನು ಇನ್ಸಲ್ಟ್ ಮಾಡಿ ಹೋಗಿದ್ದಾನೆ. ಮುಂದೇನಾಗತ್ತೆ? ಕರ್ಣ ಬಂದು ಕಾಪಾಡ್ತಾನಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.