
ಬೆಂಗಳೂರು, ಡಿಸೆಂಬರ್ 12: ನೀರಿಲ್ಲದೆ ಜೀವನ ಅಸಾಧ್ಯ. ಈ ಭೂಮಂಡಲದಲ್ಲಿ ಪ್ರತಿಯೊಂದು ಜೀವಿಯೂ ನೀರಿನ ಅವಶ್ಯಕತೆ ಇದೆ. ಭಾರತೀಯ ಸಂಸ್ಕೃತಿಯಲ್ಲಿ ನೀರಿಗೆ ಅಗಾಧ ಮಹತ್ವವಿದೆ. ನೀರನ್ನು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ದೈವ ಸ್ವರೂಪ ಮತ್ತು ಅಮೃತ ಎಂದು ನೀಡಲಾಗಿದೆ. ಪಂಚಭೂತಗಳಲ್ಲಿ ನೀರು ಕೂಡ ಒಂದು.
ಪುರಾಣಗಳು ಮತ್ತು ಗ್ರಂಥಗಳಲ್ಲಿ ನೀರಿಗೆ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಗೃಹ ಪ್ರವೇಶ, ಶುಭಕಾರ್ಯಗಳು ಮತ್ತು ನದಿಗಳಿಗೆ ಪೂಜೆ ಸಲ್ಲಿಸುವ ಸಮಯದಲ್ಲಿ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ. ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿ ಸೇರಿದಂತೆ ಸಪ್ತ ನದಿಗಳನ್ನು ಪವಿತ್ರವಾಗಿ ಪೂಜಿಸಲಾಗುತ್ತದೆ. ಹುಟ್ಟು-ಸಾವುಗಳ ಆಚರಣೆಯಲ್ಲಿ ನೀರಿಗೆ ಪ್ರಮುಖ ಪಾತ್ರಗಳಿವೆ. ಶಿವಪುರಾಣದಲ್ಲಿ ಶಿವನನ್ನು ನೀರಿಗೆ ಹೋಲಿಸಲಾಗಿದೆ.
ಇಷ್ಟೆಲ್ಲಾ ಮಹತ್ವವಿದ್ದರೂ, ನೀರನ್ನು ಅತಿಯಾಗಿ ಬಳಸುವುದರಿಂದ ಅಥವಾ ವ್ಯರ್ಥ ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಸ್ನಾನಕ್ಕೆ ಹೆಚ್ಚಿನ ನೀರನ್ನು ಬಳಸುವುದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುವ ಸಾಧ್ಯತೆಯಿದೆ ಎಂದು ಹಿರಿಯರು ಹೇಳುತ್ತಾರೆ. ನೀರನ್ನು ಮಿತವಾಗಿ ಮತ್ತು ಹಿತವಾಗಿ ಬಳಸಬೇಕು. ನೀರನ್ನು ಕುಡಿಯುವಾಗಲೂ ನಿಧಾನವಾಗಿ, ಅಮೃತ ಎಂದು ಭಾವಿಸಿ ಕುಡಿಯುವುದು ದೇಹಕ್ಕೆ ಶಾಂತಿಯನ್ನು ನೀಡುತ್ತದೆ. ನೀರು ದೈವ ಸಮಾನ ಎಂದು ತಿಳಿಯಬೇಕು. ಅತಿಯಾದ ನೀರಿನ ಬಳಕೆಯ ದಾರಿದ್ರ್ಯ, ಮಂಗು, ಕಂಟಕ ಮತ್ತು ದೋಷಗಳಿಗೆ ಕಾರಣವಾಗುತ್ತದೆ. ಸರ್ವೇಜನಾ ಸುಖಿನೋಭವಂತು ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.