ಬೆಂಗಳೂರು-ಮಂಗಳೂರು-ಕಾರವಾರ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು 6 ತಿಂಗಳ ನಂತರ ಮತ್ತೆ ತನ್ನ ಸೇವೆಯನ್ನು ಆರಂಭಿಸಿದೆ. ರೈಲು ಮಾರ್ಗದ ಸಿಬ್ಬಂದಿ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿದ್ದ ಕಾರಣ ಈ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದೀಗ ಮತ್ತೆ ತನ್ನ ಸಂಚಾರವನ್ನು ಪ್ರಾರಂಭಿಸಿದೆ. ಈ ಮೂಲಕ ದಕ್ಷಿಣ ಕನ್ನಡದಲ್ಲಿರುವ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಮತ್ತೆ ಸಂತಸ ತಂದಿದೆ. ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು (16575/16576) (ಗೊಮ್ಮಟೇಶ್ವರ ಎಕ್ಸ್ಪ್ರೆಸ್) ತನ್ನ ಸೇವೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ. ಅದೇ ಸಮಯಕ್ಕೆ ಈ ರೈಲು ಸಂಚಾರ ಮಾಡುತ್ತದೆ. ಆದರೆ ನಿಲ್ದಾಣದಲ್ಲಿ ನಿಲ್ಲುವ ಸಮಯದಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡಿದೆ. ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಇದರ ಸಂಚಾರ ಆರಂಭವಾಗಲಿದೆ. ಇನ್ನು ರೈಲು ಹೊಸ ಬದಲಾವಣೆ ಪ್ರಯಾಣಿಕರಿಗೆ ಸೇವೆಯನ್ನು ನೀಡಲಿದೆ. ಇನ್ಮುಂದೆ ಪ್ರಯಾಣಿಕರು ಪ್ರಕೃತಿಯ ಸೌಂದರ್ಯವನ್ನು ನೋಡಿಕೊಂಡು ಮಾಡಬಹುದು.
ಹೌದು ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿಗೆ ಆಧುನಿಕ ಸ್ವರ್ಶ ಕೊಡುಗೆ. ರೈಲಿನ ಒಳಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಸ್ಟಾಡೋಮ್ ಕೋಚ್, ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಛಾವಣಿ, ವ್ಯವಸ್ಥಿತ ಆಸನಗಳನ್ನು ಮಾಡಲಾಗಿದೆ. ಭಕ್ತರಿಗೆ ಅಥವಾ ಪ್ರಯಾಣಿಕರಿಗೆ ಇದೊಂದು ಹೊಸ ಅನುಭವವನ್ನು ನೀಡಿದೆ.
ಗೊಮ್ಮಟೇಶ್ವರ ಎಕ್ಸ್ಪ್ರೆಸ್ ವಿಸ್ಟಾಡೋಮ್ ಕೋಚ್ ಸ್ವರ್ಶ:
ಗೊಮ್ಮಟೇಶ್ವರ ಎಕ್ಸ್ಪ್ರೆಸ್ಗೆ ವಿಸ್ಟಾಡೋಮ್ ಸ್ವರ್ಶ ನೀಡಿರುವ ಕಾರಣ, ಇದು ಪ್ರಯಾಣಿಕರಿಗೆ ಹೆಚ್ಚು ಪ್ರಕೃತಿಯ ಜೊತೆಗೆ ಕಾಲ ಕಳೆಯುವಂತೆ ಮಾಡುತ್ತದೆ. ಈ ಅಂದರೆ 2021ರಲ್ಲಿ ಯಶವಂತಪುರ- ಮಂಗಳೂರು ಜಂಕ್ಷನ್ ನಡುವೆ ವಿಶೇಷ ಸ್ಟಾಡೋಮ್ ಬೋಗಿಗಳಿಗೆ ಚಾಲನೆ ನೀಡಲಾಯಿತು. ಇದೀಗ ಮತ್ತೆ ಗೊಮ್ಮಟೇಶ್ವರ ಎಕ್ಸ್ಪ್ರೆಸ್ಗೆ ಈ ಸ್ವರ್ಶವಿದೆ. ಇದೀಗ ಈ ರೈಲು ವಿದೇಶಿ ರೈಲಿನಂತೆ ಸಿಂಗಾರಗೊಂಡಿದೆ. ಶೌಚಾಲಯ ವ್ಯವಸ್ಥೆ ಕೂಡ ಅತ್ಯುತ್ತಮವಾಗಿದೆ. ವ್ಯವಸ್ಥಿತ ಆಸನಗಳನ್ನು ಕೂಡ ಒದಗಿಸುತ್ತದೆ. ಬೃಹತ್ ಗಾಜಿನ ಮೇಲ್ಛಾವಣಿಯನ್ನು ಕೂಡ ಮಾಡಲಾಗಿದೆ. ಈ ಪ್ರಯಾಣಿಕರಿಗೆ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಹಾದುಹೋಗುವ ಕಾರಣ, ಅಲ್ಲಿರುವ ಪ್ರಕೃತಿಯ ಅದ್ಭುತಗಳನ್ನು ನೋಡಬಹುದು, ಹಾಗೆಯೇ ಇದು ಘಟಿ ಮತ್ತು ಕಾಡಿನ ಮಧ್ಯೆ ಹೋಗುವ ಕಾರಣ ವಿಶೇಷ ಅನುಭವವನ್ನು ನೀಡಬಹುದು.

ಪುಣ್ಯ ಕ್ಷೇತ್ರ ಭೇಟಿ ಈ ರೈಲು ಉತ್ತಮ:
ಇನ್ನು ದಕ್ಷಿಣ ಕನ್ನಡ, ಉಡುಪಿ, ಸಕಲೇಶಪುರ ಸಿಗುವ ಪುಣ್ಯಕ್ಷೇತ್ರಗಳಿಗೆ ಹೋಗಲು ತುಂಬಾ ಉಪಯುಕ್ತವಾಗಿದೆ. ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಅತಿ ಹೆಚ್ಚು ಭಕ್ತರು ಹೋಗುವ ಕಾರಣ ಕಡಿಮೆ ಖರ್ಚಿನಲ್ಲಿ ಹೋಗಿ ದರ್ಶನಕ್ಕೆ ಬರಬಹುದು, ಇನ್ನು ಈ ಬೆಳಗ್ಗಿನ ಹೊತ್ತು ಸಂಚಾರಿಸು ಕಾರಣ ಮಕ್ಕಳು, ವೃದ್ಧರಿಗೂ ಉತ್ತಮ. ಇದರ ಟಿಕೆಟ್ 155 ರಿಂದ 250 ವರೆಗೆ ಇರಬಹುದು.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳಕ್ಕೆ ಹೋಗುವವರಿಗೆ ಸಿಹಿಸುದ್ದಿ: ಮತ್ತೆ ಶುರುವಾಯ್ತು ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು
ರೈಲಿನ ಸಮಯ:
ಇನ್ನು ಈ ರೈಲಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಇದು ಬೆಳಿಗ್ಗೆ 7.00 ಗಂಟೆಗೆ ಸಂಚಾರ ಮಾಡುತ್ತಿತ್ತು. ಇದೀಗ ಮತ್ತೆ ಅದೇ ಸಮಯದಲ್ಲಿ ಹೊಸತನೊಂದಿಗೆ ಸಂಚಾರ ಮಾಡುತ್ತಿದೆ. ಯಶವಂತಪುರದಿಂದ ಹೊರಟು, ಶ್ರವಣಬೆಳಗೊಳ ರೈಲು ನಿಲ್ದಾಣಕ್ಕೆ ತಲುಪುತ್ತದೆ. ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ನಿಲ್ದಾಣದಲ್ಲಿ 5 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ಲುವುದಿಲ್ಲ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ