ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಪರಸ್ಪರ ಹಾಗೂ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಶ್ರೀದೇವಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀದೇವಿ ಅವರಿಗೆ ಯುವತಿಯ ಬಗ್ಗೆ ಪ್ರಶ್ನೆ ಬಂದಿದೆ. ಇದಕ್ಕೆ ಅವರು ರಾಜ್ ಕುಮಾರ್ ಹಾಡಿನ ಮೂಲಕ ಉತ್ತರ ನೀಡಿದ್ದಾರೆ. ನಟಿಯ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿದ್ದಾರೆ.
ಯುವ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆ ಆದವರು. ಕೆಲವೇ ವರ್ಷ ಸಂಸಾರ ನಡೆಸಿ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮಧ್ಯೆ ಸಾಕಷ್ಟು ವೈಮನಸ್ಸು ಮೂಡಿದೆ ಇವರು ಬೇರೆ ಆಗುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ. ಹೀಗಿರುವಾಗಲೇ ಯುವ ಅವರ ಬಗ್ಗೆ ಶ್ರೀದೇವಿ ಬಳಿ ಕೇಳಲಾಗಿದೆ. ಇದಕ್ಕೆ ಶ್ರೀದೇವಿ ಮುಚ್ಚುಮರೆ ಇಲ್ಲದೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಯುವ ರಾಜ್ ಕುಮಾರ್ ವಿಚ್ಛೇದನ: ಕೋರ್ಟ್ ಮೆಟ್ಟಿಲೇರಿದ ರಾಜ್ ಕುಮಾರ್ ಕುಟುಂಬದ ಕುಡಿ; ಕಾರಣವೇನು?
ಶ್ರೀದೇವಿ ಅವರು ಇನ್ಸ್ಟಾಗ್ರಾಮ್ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ಅನ್ನು ಹೊಂದಿದ್ದಾರೆ. ಈ ವೇಳೆ ‘ಯುವರಾಜ್ ಕುಮಾರ್ ಬಗ್ಗೆ ಏನು ಹೇಳ್ತೀರಾ’ ಎಂದು ಕೇಳಿದರು. ಈ ಪ್ರಶ್ನೆಯನ್ನು ಪೋಸ್ಟ್ ಮಾಡಿ, ‘ಬಾನಿಗೊಂದು ಎಲ್ಲಿದೆ’ ಹಾಡನ್ನು ಹಾಕಿದ್ದಾರೆ ಶ್ರೀದೇವಿ. ಈ ಪೋಸ್ಟ್ ಗಮನ ಸೆಳೆದಿದೆ. ಯುವ ಹಾಗೂ ಆ ನಟಿಯ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದ್ದಕ್ಕೆ, ‘ಮೋಸ ಮಾಡೋದು ಆಯ್ಕೆ, ತಪ್ಪಾಗಿ ಪಡೆಯೋದಿಲ್ಲ’ ಎಂಬರ್ಥದಲ್ಲಿ ಉತ್ತರಿಸಿದ್ದಾರೆ. ಈ ಪೋಸ್ಟ್ನಲ್ಲಿ ನಟಿಯ ಹೆಸರನ್ನು ಬ್ಲರ್ ಮಾಡಿದ್ದಾರೆ.
#ಯುವರಾಜಕುಮಾರ್ ಮಾಜಿ ಪತ್ನಿ ಶ್ರೀದೇವಿಬೈರಪ್ಪ ಅವರ ಬಗ್ಗೆ ಇನ್ಸ್ಟಾ ಸ್ಟೋರಿ 😹😹😹😹😹😹 pic.twitter.com/M9iBLSJ1JM
— ರಾಘವ್ ಡಿ (@Raghav_Dacchu) ಡಿಸೆಂಬರ್ 17, 2025
ಕಥೆಯಲ್ಲಿ ಶ್ರೀದೇವಿ ಸಪ್ತಮಿ ಹೆಸರನ್ನು ಹೇಗೆ ಮರೆಮಾಚುತ್ತಾರೋ ಹಾಗೆ ನಿಮ್ಮ ಸಮಸ್ಯೆಯನ್ನು ಮರೆಮಾಡಿ #ಯುವ pic.twitter.com/FE7HPYFusZ
— 𝐁𝐎𝐗 𝐎𝐅𝐅𝐈𝐂𝐄 𝐒𝐔𝐋𝐓𝐇𝐀𝐍 (@dbossdarshana) ಡಿಸೆಂಬರ್ 17, 2025
7 ವರ್ಷಗಳ ಕಾಲ ಯುವ ಹಾಗೂ ಶ್ರೀದೇವಿ ಪ್ರೀತಿಸಿದರು. 2019ರಲ್ಲಿ ಇವರು ವಿವಾಹ ಆದರು. ಇವರು ನಾಲ್ಕೇ ವರ್ಷ ಸಂಸಾರ ನಡೆಸಿ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಇವರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನೇಕ ಬಾರಿ ಯುವ ಹಾಗೂ ಅವರ ಕುಟುಂಬದವರ ಮೇಲೆ ಶ್ರೀದೇವಿ ಸಿಟ್ಟು ಹೊರಹಾಕಿದ್ದಾರೆ. ಈಗ ಯುವ ಬಗ್ಗೆ ಕೇಳಿದ್ದಕ್ಕೆ ರಾಜ್ ಕುಮಾರ್ ಹಾಡು ಹಾಕಿ ಉತ್ತರಿಸಿದ್ದು ವಿಶೇಷವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.