ಬೆಳಗಾವಿ, ಡಿಸೆಂಬರ್ 18: ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬೆಳಗಾವಿಯಲ್ಲಿ ಮಹತ್ವದ ಹೇಳಿಕೆ. 2023ರ ಮೇ 18ರಂದು ಎಸಿಸಿ ಕಡೆಯಿಂದ ಬರೆದಿರುವ ಪತ್ರದಲ್ಲಿ ಅವರು, ಆ ಪತ್ರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಸಭೆ ಕುರಿತು ಮಾತನಾಡಿದ ರಾಜಣ್ಣ, ಕೇವಲ ಎಸ್ಸಿ–ಎಸ್ಟಿ ಶಾಸಕರ ಸಭೆಯಾಗಿರಲಿಲ್ಲ. ಸಮಾನ ಮನಸ್ಕ ಶಾಸಕರನ್ನು ಊಟಕ್ಕೆ ಆಹ್ವಾನಿಸಲಾಯಿತು, ಅದಕ್ಕಾಗಿ ತಾನೂ ಆ ಸಭೆಗೆ ಹಾಜರಾಗಿದ್ದೆನೆಂದು ಹೇಳಿದರು. ಡಿನ್ನರ್ ಸಭೆಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆದಿದ್ದು, ಅದನ್ನು ಸತೀಶ್ ಜಾರಕಿಹೊಳಿಯವರೇ ವಿವರಿಸಬಹುದು ಎಂದು ರಾಜಣ್ಣ ಪ್ರಕಟಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ