Headlines

ಅತ್ತ ಸಿಎಂ ಕುರ್ಚಿಗಾಗಿ ಕದನ: ಇತ್ತ ಚಾಮರಾಜನಗರದಲ್ಲೂ ಸಹ ಕುರ್ಚಿ ಕಿತ್ತಾಟ

ಅತ್ತ ಸಿಎಂ ಕುರ್ಚಿಗಾಗಿ ಕದನ: ಇತ್ತ ಚಾಮರಾಜನಗರದಲ್ಲೂ ಸಹ ಕುರ್ಚಿ ಕಿತ್ತಾಟ


ಚಾಮರಾಜನಗರ, ಡಿಸೆಂಬರ್ 18: ಕರ್ನಾಟಕದಾದ್ಯಂತ (ಕರ್ನಾಟಕ) ಸಿಎಂ ಮತ್ತು ಡಿಸಿಎಂ ಕುರ್ಚಿ ಕಾದಾಟ ಒಂದೆಡೆಯಾದರೆ, ಇತ್ತ ಗಡಿನಾಡು ಚಾಮರಾಜನಗರದಲ್ಲೂ (ಚಾಮರಾಜನಗರ) ಒಂದೇ ಕುರ್ಚಿಗಾಗಿ ಕಾದಾಟ ಜೋರಾಗಿದೆ. ಒಂದು ಕುರ್ಚಿಗಾಗಿ ಇಬ್ಬಿಬ್ಬರು ಅಧಿಕಾರಿಗಳು ಹಿಡಿದು ಕುಳಿತಿದ್ದಾರೆ. ನಾನು ರಿಲೀಸ್ ಆಗಿಲ್ಲ, ಕೋರ್ಟ್ ಸ್ಟೇ ಕೊಟ್ಟಿದೆ ಅಂತ ಒಬ್ಬರು, ಸರ್ಕಾರ ನನಗೆ ಆದೇಶ ನೀಡಿದೆ ಅಂತ ಮತ್ತೊಬ್ಬರು ಹೇಳುತ್ತಿದ್ದಾರೆ. ಸದ್ಯ ಇದು ಜನರ ನಗೆ ಪಾಟಲಿಗೆ ಕಾರಣವಾಗಿದೆ.

ರಾಜ್ಯಾದ್ಯಂತ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಸಿಎಂ ಸಿಎಂ ಕಾದಾಟ ಚರ್ಚೆ ನಡೆಯುತ್ತಿದೆ. ಸಿಎಂ ಅವರು ಆಗುತ್ತಾರೆ, ಇವರ ಚರ್ಚೆ ಮಧ್ಯೆ ಡಿನ್ನರ್ ಪಾಲಿಟಿಕ್ಸ್ ಸುದ್ದಿ ನೋಡಿ ರಾಜ್ಯದ ಜನ ಒಂದೆಡೆ ರೋಸಿ ಹೋಗಿದ್ದಾರೆ. ಆದರೆ ಅದೇ ರೀತಿ ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಕಿರಿಕ್ ಮಾಡಿಕೊಂಡಿದ್ದಾರೆ ಇದೀಗ ನಗೆ ಪಾಟಲಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್; ಪಚ್ಚೆದೊಡ್ಡಿ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿ

ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕುರ್ಚಿಗೆ ಇಬ್ಬರು ಅಧಿಕಾರಿಗಳು ಟವೆಲ್ ಹಾಕಿದ್ದಾರೆ. ಸುರೇಶ್ ಮತ್ತು ಚೆಲುವರಾಜ್ ಇವರೇ ಆ ಅಧಿಕಾರಿಗಳು. ಇವರಿಬ್ಬರ ಕಿತ್ತಾಟದಿಂದ ಅಸಲಿಗೆ ನಿಜವಾದ ಉಪ ನಿರ್ದೇಶಕ ಯಾರಪ್ಪ ಅಂತ ಸಾರ್ವಜನಿಕರು ತಲೆಕೆಡಿಸಿಕೊಂಡಿದ್ದಾರೆ.

ಐದು ತಿಂಗಳಿಗೆ ವರ್ಗಾವಣೆ

ಅಸಲಿಗೆ ಆಗಿದ್ದೇನು ಅಂದರೆ, ಕಳೆದ 5 ತಿಂಗಳ ಹಿಂದೆ ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾಗಿ ಸುರೇಶ್ ಉಸ್ತುವಾರಿ ವಹಿಸಿದ್ದರು. ಐದು ತಿಂಗಳು ಕಳೆಯುವುದರೊಳಗೆ ಏನಾಯ್ತೋ ಏನೋ ಕೆಲ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸುರೇಶ್ ರನ್ನ ರಾಜ್ಯ ಸರ್ಕಾರ ಚಾಮರಾಜನಗರದಿಂದ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿತ್ತು.

ಖಾಲಿ ಇರುವ ಉಪ ನಿರ್ದೇಶಕರ ಸ್ಥಾನ ಮಹಿಳಾ ರಕ್ಷಣಾಧಿಕಾರಿ ಚೆಲುವರಾಜ್ ರನ್ನ ಪ್ರಭಾರವಾಗಿ ಆಯ್ಕೆಆಡಿ ಆದೇಶ ಹೊರಡಿಸಲಾಗಿದೆ. ಆದರೆ ನಾನಿನ್ನು ಬಂದು 5 ತಿಂಗಳಾಗಿದೆ ಈ ವರ್ಗಾವಣೆ ನ್ಯಾಯ ಸಮ್ಮತವಲ್ಲ ಎಂದು ಕೆಇಟಿಗೆ ಹೋಗಿದ್ದರು. ಕೆಇಟಿಗೆ ಹೋಗಿ ಅದಕ್ಕೆ ಸ್ಟೇ ಕೂಡ ತಂದಿದ್ದಾರೆ. ಇಷ್ಟರ ಸ್ವೀಕರಿಸಿ ಚೆಲುವರಾಜ್ SIO ಗೆ ಆದೇಶ ಪ್ರತಿ ನೀಡಿ ಅವರಿಗೆ ಒಪ್ಪಿಗೆ ಪಡೆಯದೆ ಇತ್ತ ಸುರೇಶ್‌ರಿಂದ ಅಧಿಕಾರವನ್ನು ಪಡೆಯದೆ ಏಕಏಕಿ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇದು ನ್ಯಾಯ ಸಮ್ಮತವಲ್ಲ ಎಂದ ಅಧಿಕಾರಿ

ಕೋರ್ಟ್ ಸ್ಟೇಟ್ ನೀಡಿದೆ. ನಾನು ರಿಲೀವ್ ಕೂಡ ಆಗಿಲ್ಲ, ಸಿಇಓ ಹಾಗೂ ಡಿಸಿ ಕೆಲ ಕಾರ್ಯಗಳು ಮುಗಿದ ಬಳಿಕ ರಿಲೀವ್ ಆಗಿದ್ದಾರೆ ಅಂತ ಹೇಳಿದ ಬಳಿಕವು ಚೆಲುವರಾಜ್ ಅವರಿಗೆ ಅಧಿಕಾರ ವಹಿಸಿಕೊಂಡರು, ಇದು ನ್ಯಾಯಸಮ್ಮತವಲ್ಲ ಎಂದು ನಾನೇ ಮುಂದುವರಿಯುತ್ತೇನೆ ಎಂದು ಇಂದು ಕಚೇರಿಗೆ ಬಂದ ಸುರೇಶ್, ಕುರ್ಚಿ ಮೇಲೆ ಕುಳಿತು ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಈ ಮಕ್ಕಳು ಶಾಲೆಗೆ 14 ಕಿಮೀ ನಡೆದೇ ಹೋಗಬೇಕು! ಕಾಡು ಪ್ರಾಣಿಗಳಿಂದ ಸುರಕ್ಷತೆ ಕೋರಿ ಸಿಎಂಗೆ ಪತ್ರ ಬರೆದ ವಿದ್ಯಾರ್ಥಿಗಳು

ಸದ್ಯ ನ್ಯಾಯಾಲಯದ ವರ್ಗಾವಣೆ ಆದೇಶ ತಡೆ ಹಿಡಿದಿದ್ದು, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಲಾಗಿದೆ. ಇನ್ನು ಸಿಇಓ ಗಮನಕ್ಕೆ ತಾರದೆ ಚೆಲುವರಾಜ್ ಅಧಿಕಾರ ಸ್ವೀಕರಿಸಿದನ್ನ ಪ್ರಶ್ನಿಸಿ ಸಿಇಓ ನೋಟಿಸ್ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ನಂದು ಅಂತ ಕಿತ್ತಾಡಿದ್ದು, ಮಾತ್ರ ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *