Headlines

ಅಂಡರ್ 19 ಏಷ್ಯಾಕಪ್‌ ಭಾರತ-ಶ್ರೀಲಂಕಾ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೇರೋದು ಯಾರು? | Rain Threatens Ind Vs Sl U19 Asia Cup Semi Final India Likely To Reach Final Kvn

ಅಂಡರ್ 19 ಏಷ್ಯಾಕಪ್‌ ಭಾರತ-ಶ್ರೀಲಂಕಾ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೇರೋದು ಯಾರು? | Rain Threatens Ind Vs Sl U19 Asia Cup Semi Final India Likely To Reach Final Kvn



ಅಂಡರ್ 19 ಏಷ್ಯಾಕಪ್‌ ಭಾರತ-ಶ್ರೀಲಂಕಾ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೇರೋದು ಯಾರು? | Rain Threatens Ind Vs Sl U19 Asia Cup Semi Final India Likely To Reach Final Kvn

ಅಂಡರ್ 19 ಏಷ್ಯಾಕಪ್‌ನ ಭಾರತ-ಶ್ರೀಲಂಕಾ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂದ್ಯ ರದ್ದಾದರೆ, ಗುಂಪು ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಇದೇ ರೀತಿ, ಇನ್ನೊಂದು ಸೆಮಿಫೈನಲ್ ರದ್ದಾದರೆ ಬಾಂಗ್ಲಾದೇಶ ಫೈನಲ್‌ಗೆ ತಲುಪಲಿದೆ.

ಅಬುಧಾಬಿ: ಅಂಡರ್ 19 ಏಷ್ಯಾಕಪ್‌ನಲ್ಲಿ ಭಾರತ-ಶ್ರೀಲಂಕಾ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಔಟ್‌ಫೀಲ್ಡ್ ಒದ್ದೆಯಾಗಿದ್ದು, ಪಂದ್ಯದ ಟಾಸ್ ಕೂಡ ಇನ್ನೂ ಸಾಧ್ಯವಾಗಿಲ್ಲ. ಭಾರತೀಯ ಕಾಲಮಾನ ಬೆಳಗ್ಗೆ 10.30ಕ್ಕೆ ಪಂದ್ಯ ಆರಂಭವಾಗಬೇಕಿತ್ತು.

ಪಂದ್ಯ ರದ್ದಾದ್ರೆ ಭಾರತಕ್ಕೆ ಲಾಭ

ಭಾರತೀಯ ಕಾಲಮಾನ 3.30ರವರೆಗೆ ಪಂದ್ಯ ಆರಂಭಿಸುವ ಸಾಧ್ಯತೆಯನ್ನು ಅಂಪೈರ್‌ಗಳು ಪರಿಶೀಲಿಸಲಿದ್ದಾರೆ. 3.30ಕ್ಕೂ ಪಂದ್ಯ ಆರಂಭವಾಗದಿದ್ದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ಇಲ್ಲದಿರುವುದರಿಂದ, ಗುಂಪು ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಂಡ ಫೈನಲ್‌ಗೆ ಪ್ರವೇಶಿಸಲಿದೆ. ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಪಂದ್ಯ ರದ್ದಾದರೆ ಭಾರತ ಫೈನಲ್‌ಗೆ ತಲುಪಲಿದೆ. ಗುಂಪು ಹಂತದಲ್ಲಿ ಶ್ರೀಲಂಕಾ ಎರಡನೇ ಸ್ಥಾನದಲ್ಲಿತ್ತು.

ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ ಈ ಪಂದ್ಯವೂ ಇನ್ನೂ ಆರಂಭವಾಗಿಲ್ಲ. ಈ ಪಂದ್ಯಕ್ಕೂ ಮೀಸಲು ದಿನ ಇಲ್ಲದಿರುವುದರಿಂದ, ಪಂದ್ಯ ರದ್ದಾದರೆ ಬಾಂಗ್ಲಾದೇಶ ಫೈನಲ್‌ಗೆ ಪ್ರವೇಶಿಸಲಿದೆ. ಬಾಂಗ್ಲಾದೇಶ ‘ಬಿ’ ಗುಂಪಿನಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಭಾರತವಿದ್ದ ‘ಎ’ ಗುಂಪಿನಲ್ಲಿ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದ್ದ ಕಾರಣ, ಪಾಕಿಸ್ತಾನ ಫೈನಲ್‌ಗೆ ತಲುಪದೆ ಹೊರಬೀಳಲಿದೆ.

ಭಾರತದ ವಿಕೆಟ್ ಕೀಪರ್ ಬ್ಯಾಟರ್ ಅಭಿಜ್ಞಾನ್ ಕುಂಡು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಒಂದು ದ್ವಿಶತಕ ಸೇರಿದಂತೆ 263 ರನ್ ಗಳಿಸಿದ್ದಾರೆ. 226 ರನ್ ಗಳಿಸಿರುವ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ರನ್ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಬೇಟೆಯಲ್ಲಿ ಭಾರತದ ದೀಪೇಶ್ ದೇವೇಂದ್ರನ್ ಮೊದಲ ಸ್ಥಾನದಲ್ಲಿದ್ದಾರೆ. ದೀಪೇಶ್ 10 ವಿಕೆಟ್ ಪಡೆದಿದ್ದಾರೆ.

20 ಓವರ್‌ ಪಂದ್ಯಕ್ಕೆ ಕಟ್‌ ಆಫ್ ಟೈಮ್ ಘೋಷಣೆ:

ಈ ಬಾರಿಯ ಅಂಡರ್ 19 ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ಆಯೋಜನೆಗೊಂಡಿದೆ. ಫಲಿತಾಂಶ ನಿರ್ಧಾರವಾಗಬೇಕಿದ್ದರೇ ಕನಿಷ್ಠ 20 ಓವರ್‌ಗಳ ಪಂದ್ಯಾಟವಾದರೂ ನಡೆಯಬೇಕಿದೆ. ಹೀಗಾಗಿ 20 ಓವರ್‌ಗಳ ಪಂದ್ಯಾಟಕ್ಕೆ ಕಟ್‌ ಆಫ್ ಟೈಮ್ ನಿಗದಿ ಮಾಡಲಾಗಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 3.32ರವರೆಗೆ ಸಮಯಾವಕಾಶವಿದೆ. ಇದಾದ ನಂತರವೂ ಪಂದ್ಯ ಆಯೋಜನೆಗೊಳ್ಳದೇ ಹೋದರೇ ಭಾರತ ಫೈನಲ್ ಪ್ರವೇಶಿಸಲಿದೆ.



Source link

Leave a Reply

Your email address will not be published. Required fields are marked *