ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ಕಾವ್ಯಾ ಶೈವ ಹಾಗೂ ಗಿಲ್ಲಿ ನಟ ಮಧ್ಯೆ ಯಾವಾಗಲೂ ಸರಿಯಾಗಿಯೇ ಕಿರಿಕ್ ಆಗುತ್ತಾ ಇರುತ್ತವೆ. ಕಾವ್ಯ ಆಗಾಗ ಗಿಲ್ಲಿ ಮೇಲೆ ರೇಗಾಡುತ್ತಾರೆ. ಆದರೆ, ಗಿಲ್ಲಿ ಮಾತ್ರ ಯಾವಾಗಲೂ ಕಾವ್ಯಾ ಮೇಲೆ ಕೋಪ ತೋರಿಸಿಲ್ಲ. ಈಗ ಡಿಸೆಂಬರ್ 19 ರ ಎಪಿಸೋಡ್ ನಲ್ಲಿ ಗಿಲ್ಲಿಗೆ ಕಾವ್ಯ ಅವರು ಗಂಭೀರವಾಗಿಯೇ ವಾರ್ನ್ ಮಾಡಿದ್ದಾರೆ. ಆದರೆ, ಗಿಲ್ಲಿ ಇದನ್ನು ಹಗುರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ಗೆ ಬಂದಾಗ ಕಾವ್ಯಾ ಜೊತೆ ಜಂಟಿ ಆದರು. ಕೆಲ ವಾರ ಒಟ್ಟಿಗೆ ಇರುತ್ತಿದ್ದರು. ಬಿಗ್ ಬಾಸ್ ಹೊರಗೂ ಇವರ ಪರಿಚಯ ಇದ್ದಾಗ ಕೆಮಿಸ್ಟ್ರಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿತು. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಸಾಗುತ್ತಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಚಿತ್ರಣ ಬದಲಾಗಿದೆ.
ಕಾವ್ಯ ಅವರು ಅನೇಕ ಬಾರಿ ಗಿಲ್ಲಿ ಮೇಲೆ ರೇಗಾಡಿದ್ದಾರೆ. ಗಿಲ್ಲಿ ಅವರು ನಡೆದುಕೊಳ್ಳುವ ರೀತಿ ಕಾವ್ಯಕ್ಕೆ ಇಷ್ಟ ಆಗೋದಿಲ್ಲ. ಇದನ್ನು ನೇರವಾಗಿ ಹೇಳಿದಾಗ ಅವರು ತಿದ್ದಿಕೊಳ್ಳೋದಿಲ್ಲ. ಡಿಸೆಂಬರ್ 19 ರ ಎಪಿಸೋಡ್ ನಲ್ಲಿ ಏರು ಧ್ವನಿಯಲ್ಲಿ ಮಾತನಾಡಿದ್ದು ಸರಿ ಎಂದು ಚಾಕೋಲೆಟ್ ನೀಡಿ ಇತರ ಸ್ಪರ್ಧಿಗಳಿಗೆ ಹೇಳಬೇಕಿತ್ತು. ಗಿಲ್ಲಿ ಅವರು ಕಾವ್ಯಕ್ಕೆ ಈ ಮಾತನ್ನು ಹೇಳಿದರು. ಹೋಗುವಾಗ ಗಿಲ್ಲಿ ಅವರು ಕಾವ್ಯಕ್ಕೆ ಕೈ ಕೊಡೋ ಪ್ರಯತ್ನ ಮಾಡಿದರು. ಆದರೆ, ಅವರು ಕೆರೆ ಮಾಡದೇ ಹೋದರು. ಇದು ಕೂಡ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಒಂದಲ್ಲಾ ಒಂದು ದಿನ ನಾನು ದೊಡ್ಡ ಸೆಲೆಬ್ರಿಟಿ ಆಗ್ತೀನಿ ಎಂದಿದ್ದ ಗಿಲ್ಲಿ ನಟ
ನಂತರ ಕಾವ್ಯ ಮೊಟ್ಟೆಯನ್ನು ತೆಗೆದುಕೊಳ್ಳಲು ಗಿಲ್ಲಿ ಹೋದರು. ಇದು ಕಾವ್ಯಕ್ಕೆ ಕೋಪ ತರಿಸಿದೆ. ‘ನಿನಗೆ ಮಾನ, ಮರ್ಯಾದೆ, ಸ್ವಾಭಿಮಾನ ಏನು ಇಲ್ಲ’ ಎಂದು ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ಗಿಲ್ಲಿ ವಿರೋಧ ವ್ಯಕ್ತಪಡಿಸಿಲ್ಲ. ‘ನಾನು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ನನಗೆ ಮಾನ-ಮರ್ಯಾದೆ ಇದೆ ಎಂದು ಒಪ್ಪಿದ್ದೀನಿ’
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.