ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!

ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!



ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!
<p><strong>Karna serial latest update: </strong>ತೇಜಸ್‌-ನಿತ್ಯಾ ಭೇಟಿಯಾಗ್ತಾರೆ ಎನ್ನುವುದಷ್ಟೇ ತೋರಿಸಿರುವ ನಿರ್ದೇಶಕರು ಮುಂದೇನಾಗುತ್ತೆ ಎಂದು ತೋರಿಸಿಲ್ಲ. ಏತನ್ಮಧ್ಯೆ ನಿಧಿ ಕರ್ಣನನ್ನ ಸರ್‌ಪ್ರೈಸ್‌ ಆಗಿ ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದಾಳೆ.</p><img><p>’ಕರ್ಣ’ ಧಾರಾವಾಹಿಯಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡ್ತಾ ಇದ್ದಾರೆ ನಿರ್ದೇಶಕರು. ತೇಜಸ್‌- ನಿತ್ಯಾ ಒಂದಾದ ಮೇಲೆ ಮುಂದೇನು ಕಾದಿದೆಯೋ ಎನ್ನುವಷ್ಟರಲೇ ಕರ್ಣ-ನಿಧಿ ಜಾಲಿ ರೈಡ್ ಹೊರಟಿದ್ದಾರೆ. ಇದನ್ನು ನೋಡಿದ ಕರ್ಣ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ.</p><img><p>ಹೌದು. ತೇಜಸ್‌-ನಿತ್ಯಾ ಭೇಟಿಯಾಗ್ತಾರೆ ಎನ್ನುವುದಷ್ಟೇ ತೋರಿಸಿರುವ ನಿರ್ದೇಶಕರು ಮುಂದೇನಾಗುತ್ತೆ ಎಂದು ತೋರಿಸಿಲ್ಲ. ಏತನ್ಮಧ್ಯೆ ನಿಧಿ ಕರ್ಣನನ್ನ ಸರ್‌ಪ್ರೈಸ್‌ ಆಗಿ ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದಾಳೆ.</p><img><p>ನಿಧಿ-ಕರ್ಣ ಸುತ್ತಾಡಲು ಅವಕಾಶ ಮಾಡಿಕೊಟ್ಟಿರುವುದೇ ಕರ್ಣನ ಅಮ್ಮ. ಕರ್ಣನನ್ನು ಯಾರಿಗೂ ಗೊತ್ತಾಗದ ಹಾಗೆ ಕರೆದುಕೊಂಡು ಹೊರಟಿದ್ದಾಳೆ ನಿಧಿ. ಸ್ವತಃ ಕರ್ಣನಿಗೂ ಈ ವಿಷಯ ಗೊತ್ತಿಲ್ಲ. ನಿಧಿ ಹೆಲ್ಮೆಟ್ ತೆಗೆದ ನಂತರವೇ ಅದು ನಿಧಿ ಎಂದು ಗೊತ್ತಾಗುವುದು.</p><img><p>ಇತ್ತ ಕಡೆ ನಿಧಿ ಹೀಗೆ ಕರ್ಣನನ್ನು ಕೂರಿಸಿಕೊಂಡು ಹೊರಟರೆ, ಮನೆಯಲ್ಲಿ ನಿತ್ಯಾ ಕರ್ಣನನ್ನು ಹುಡುಕುತ್ತಾ ಇದ್ದಾಳೆ. ಬಹುಶಃ ಅಕ್ಕನಿಗೆ ಭಾವ ಸಿಕ್ಕ ಖುಷಿಗೆ, ಇನ್ಮೇಲೆ ಎಲ್ಲಾ ಸರಿ ಹೋಗುತ್ತೆ ಎನ್ನುವ ಭರವಸೆಯಲ್ಲಿ ಹೀಗೆ ನಿಧಿ-ಕರ್ಣ ಖುಷಿ ಖುಷಿಯಾಗಿ ಆಚೆ ಹೋಗುವುದನ್ನು ತೋರಿಸಲಾಗಿದೆಯೇ ಗೊತ್ತಿಲ್ಲ.&nbsp;</p><img><p>ಒಟ್ಟಿನಲ್ಲಿ ವೀಕ್ಷಕರು ಮುಂದೇನಾಗುತ್ತದೆ ಎಂಬ ಕುತೂಹದಿಂದ ಕಾಯುವಂತೆ ನೋಡಿಕೊಳ್ಳುತ್ತಿದ್ದಾರೆ ನಿರ್ದೇಶಕರು. ಅಷ್ಟೇ ಅಲ್ಲ, ಸ್ವಲ್ಪ ಮಟ್ಟಿಗೆ ಕರ್ಣನ ಅಭಿಮಾನಿಗಳು ನಿರಾಳವಾಗಿರುವಂತೆ ನೋಡಿಕೊಂಡಿದ್ದಾರೆ.&nbsp;</p><img><p>ಇತ್ತೀಚಿನ ದಿನಗಳಲ್ಲಿ ಕರ್ಣನನ್ನು ಬರೀ ಸಂಕಷ್ಟಕ್ಕೆ ಸಿಲುಕಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಇಲ್ಲವೇ ನಿತ್ಯಾ, ನಿಧಿ ಅಜ್ಜಿ ಗೋಳಾಡುವುದನ್ನ ತೋರಿಸಲಾಗುತ್ತಿತ್ತು ಆದರೀಗ ಸಂಜಯ್, ರಮೇಶ್ ಏನೇ ಮಾಡಿದರೂ ಪ್ಲಾನ್ ಉಲ್ಟಾ ಹೊಡೆಯುತ್ತಿರುವುದು ವೀಕ್ಷಕರಿಗಂತೂ ಭಾರೀ ಖುಷಿ ತಂದಿರುವುದು ಸೋಶಿಯಲ್ ಮೀಡಿಯಾ ಕಾಮೆಂಟ್‌ನಲ್ಲಿ ಕಾಣಬಹುದು.</p>



Source link

Leave a Reply

Your email address will not be published. Required fields are marked *