
ಗೌತಮ್ ಮತ್ತು ಭೂಮಿಕಾ ಒಂದಾಗುವುದರೊಂದಿಗೆ ‘ಅಮೃತಧಾರೆ’ ಸೀರಿಯಲ್ ಮುಕ್ತಾಯದ ಹಂತದಲ್ಲಿದೆ ಎಂದು ಭಾವಿಸಲಾಗಿತ್ತು. ಆದರೆ, ಜೈದೇವ್ ಮನೆಗೆ ಹೊಸ ಯುವಕನೊಬ್ಬನ ಆಗಮನವಾಗಿದ್ದು, ಆತ ಜೈದೇವ್ಗೇ ಚಳ್ಳೆಹಣ್ಣು ತಿನ್ನಿಸಿ ಕಥೆಯಲ್ಲಿ ಹೊಸ ಕುತೂಹಲ ಮೂಡಿಸಿದ್ದಾನೆ.<img><p>ಅಮೃತಧಾರೆ (Amruthadhaare) ಸೀರಿಯಲ್ ಇನ್ನೇನು ಮುಗಿಯುವ ಹಂತದಲ್ಲಿ ಇದೆ ಎಂದೇ ಅಂದುಕೊಳ್ಳಲಾಗಿತ್ತು. ಗೌತಮ್ನ ಅಜ್ಜಿಯ ದಿಸೆಯಿಂದಾಗಿ ಇದೀಗ ಎಲ್ಲವೂ ಒಂದಾಗಿದ್ದಾರೆ.</p><img><p>ಸಾಯುವ ಹಂತದಲ್ಲಿ ಇದ್ದೇನೆ ಎಂದು ಸುಳ್ಳು ಹೇಳಿ ಗೌತಮ್ ಮತ್ತು ಭೂಮಿಕಾ ಹಾಗೂ ಮಕ್ಕಳನ್ನು ಕರೆಸಿಕೊಂಡಿರೋ ಅಜ್ಜಿ, ಎಲ್ಲರನ್ನೂ ಒಂದು ಮಾಡಿದ್ದಾಳೆ. ಸತ್ಯ ಮೊದಲೇ ಮಕ್ಕಳಿಗೆ ತಿಳಿದ ಹಿನ್ನೆಲೆಯಲ್ಲಿ, ಅವರಿಗೂ ಇದೇನೂ ಅಚ್ಚರಿಯಾಗಿಲ್ಲ.</p><img><p>ಇಷ್ಟು ಆಗುತ್ತಿದ್ದಂತೆಯೇ ಇನ್ನೇನು ಜೈದೇವ್ ಮತ್ತು ಶಕುಂತಲಾಗೆ ಬುದ್ಧಿ ಕಲಿಸಿದ್ರೆ ಅಲ್ಲಿಗೆ ಸೀರಿಯಲ್ ಮುಗಿಯತ್ತೆ ಎಂದುಕೊಳ್ಳುವಷ್ಟರಲ್ಲಿಯೇ ಹೊಸ ಎಂಟ್ರಿಯಾಗಿದೆ!</p><img><p>ಜೈದೇವನ ಮನೆಯಲ್ಲಿ ಹೊಸ ಯುವಕನ ಎಂಟ್ರಿಯಾಗಿದೆ. ಅವರು ಜೈದೇವನ ಪ್ರೊಫೈಲ್ನಲ್ಲೇ ಯಾಮಾರಿಸಿ ತಮ್ಮ ಫೋಟೋ ಹಾಕಿಕೊಂಡು ಒಂದಿಷ್ಟು ಯುವಕರಿಗೆ ಸಂದರ್ಶನ ಮಾಡಿದ್ದಾನೆ.</p><img><p>ಜೈದೇವ್ಗೆ ಬೇಕಾಗುವ ಒಂದು ಪೋಸ್ಟ್ಗೆ ಸಂದರ್ಶನಕ್ಕೆ ಬಂದಿರುವ ಯುವಕರಿಗೆ ತಾನೇ ಮ್ಯಾನೇಜರ್ ಎನ್ನುವಂತೆ ಪೋಸ್ ಕೊಟ್ಟು, ಅವರ ಎಕ್ಸ್ಪೀರಿಯೆನ್ಸ್ ಎಲ್ಲಾ ಸರಿ ಇಲ್ಲ ಎಂದು ಹೇಳಿ ಬಂದಿರುವವರನ್ನು ವಾಪಸ್ ಕಳಿಸಿದ್ದಾನೆ.</p><img><p>ಕೊನೆಗೆ ಈಗ ನನಗೆ ಕೆಲಸ ಗ್ಯಾರೆಂಟಿ ಎಂದುಕೊಂಡು ಕುಣಿಯುವಷ್ಟರಲ್ಲಿ ಜೈದೇವ್ ಬಂದು ಆತನ ಮೇಲೆ ಕೈ ಮಾಡಿದ್ದಾನೆ. ನನ್ನ ಪ್ರೊಫೈಲ್ ಎಲ್ಲಾ ಮಿಸ್ಯೂಸ್ ಮಾಡಿಕೊಂಡಿದ್ದಿ ಎಂದು ಬೈದಿದ್ದಾನೆ.</p><img><p>ನೀವೇ ನನ್ನ ಗುರುಗಳು ಸರ್, ನಾನು ಅದನ್ನು ಒಪ್ಪಿಕೊಂಡಾಗಿದೆ ಎಂದಿದ್ದಾನೆ ಯುವಕ. ಹಾಗಿದ್ರೆ ಈತ ಯಾರು ಎನ್ನುವ ಕುತೂಹಲ ಸದ್ಯಕ್ಕಿದೆ.</p><img><p>ಯುಟ್ಯೂಬರ್ ಆಗಿರುವ ಯಶು ಅವರೇ ಈ ಪಾತ್ರಕ್ಕೆ ಬಂದಿರುವುದಾಗಿ ಅವರ ಅಭಿಮಾನಿಗಳು ಖುಷಿಯಿಂದ ಕುಣಿದಾಡುತ್ತಿದ್ದಾರೆ. ಹಾಗಿದ್ದರೆ ಈ ಪಾತ್ರ ಯಾರದ್ದು? ಕೆಡಿ ಜೈದೇವ್ಗೇ ಚಳ್ಳೆಹಣ್ಣು ತಿನ್ನಿಸಿರುವ ಈ ಪಾತ್ರ ಯಾರದ್ದು?</p>
Source link
Amruthadhaare ಭಾರಿ ಟ್ವಿಸ್ಟ್: ಕೇಡಿ ಜೈದೇವ್ಗೇ ಚಳ್ಳೆಹಣ್ಣು ತಿನ್ನಿಸಿ ಭರ್ಜರಿ ಹೊಸ ಎಂಟ್ರಿ ಕೊಟ್ಟವ ಯಾರೀತ?