ದಿನಕ್ಕೆರಡು ಎಲೆ, ಮಾತ್ರೆಗಳಿಗೆ ಗುಡ್​ಬೈ: ಆರೋಗ್ಯದ ಕಣಜ ದೊಡ್ಡಪತ್ರೆಯ ಮಾಹಿತಿ ನೀಡಿದ ನಟಿ ಅದಿತಿ ಪ್ರಭುದೇವ

ದಿನಕ್ಕೆರಡು ಎಲೆ, ಮಾತ್ರೆಗಳಿಗೆ ಗುಡ್​ಬೈ: ಆರೋಗ್ಯದ ಕಣಜ ದೊಡ್ಡಪತ್ರೆಯ ಮಾಹಿತಿ ನೀಡಿದ ನಟಿ ಅದಿತಿ ಪ್ರಭುದೇವ



ದಿನಕ್ಕೆರಡು ಎಲೆ, ಮಾತ್ರೆಗಳಿಗೆ ಗುಡ್​ಬೈ: ಆರೋಗ್ಯದ ಕಣಜ ದೊಡ್ಡಪತ್ರೆಯ ಮಾಹಿತಿ ನೀಡಿದ ನಟಿ ಅದಿತಿ ಪ್ರಭುದೇವ
ನಟಿ ಅದಿತಿ ಪ್ರಭುದೇವ ಅವರು ದೊಡ್ಡಪತ್ರೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಶೀತ, ಕೆಮ್ಮು, ಅಜೀರ್ಣದಂತಹ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವ ಈ ಸಾಂಬ್ರಾಣಿ ಎಲೆಯು ರಾಮಬಾಣವಾಗಿದೆ. ಇದನ್ನು ದಿನನಿತ್ಯ ಸೇವಿಸುವುದರಿಂದ ಹಲವಾರು ಮಾತ್ರೆಗಳನ್ನು ದೂರವಿಡಬಹುದು ಎಂದು ಅವರು ವಿವರಿಸಿದ್ದಾರೆ.<img><p>ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಆರೋಗ್ಯ ಹದಗೆಡುವುದು ಮಾಮೂಲು. ಇಂದು ಕಾಲಕಾಲಕ್ಕೆ ಏನು ಬೇಕೋ ಅದು ಆಗುತ್ತಿಲ್ಲ. ಎಲ್ಲವೂ ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ಹವಾಮಾನ ಹದಗೆಡುತ್ತಿದೆ. ಅದರ ಜೊತೆಗೆ ಮೈಗೆ ಅಂಟಿಕೊಳ್ಳುವ ರೋಗಗಳು. ಆ ರೋಗಗಳ ವಾಸಿಗೆ ಒಂದಿಷ್ಟು ಮಾತ್ರೆಗಳು. ಆ ಮಾತ್ರೆಗಳಿಂದ ಸೈಡ್​ ಎಫೆಕ್ಟ್ಸ್​.</p><img><p>ಭಾರತ ಮೂಲದ ಆಯುರ್ವೇದದಲ್ಲಿಯೇ ಎಲ್ಲಾ ರೋಗಗಳಿಗೂ ಸೈಡ್​ ಎಫೆಕ್ಟ್​ ಇಲ್ಲದೇ ಪರಿಹಾರವೂ ಇರುವಾಗ, ಹೆಚ್ಚಿನ ಜನರಿಗೆ ಅದು ಬೇಡದ ವೈದ್ಯಕೀಯ ಪದ್ಧತಿಯಾಗಿದೆ. ಅದರಲ್ಲಿಯೂ ಅಡುಗೆ ಮನೆಯ ಪದಾರ್ಥ, ಹಿತ್ತಲಲ್ಲಿಯೇ ಇರುವ ಗಿಡಗಳಿಂದಲೂ ಸಾಕಷ್ಟು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದಾಗಿದೆ. ಅವುಗಳಲ್ಲಿ ಒಂದು ದೊಡ್ಡಪತ್ರೆ.</p><img><p>ದೊಡ್ಡಪತ್ರೆಯನ್ನು ಸಾಸಂಬರ್​ ಸೊಪ್ಪು, ಸಾವಿರಸಾಂಬಾರ್​ ಸೊಪ್ಪು, ಸಾಂಬಾರ್​ ಸೊಪ್ಪು, ಸಾಂಬ್ರಾಣಿ ಎಲೆ ಎಂದೆಲ್ಲಾ ಕರೆಯುವುದು ಉಂಟು. ಕುಂಡದಲ್ಲಿಯೂ ಆರಾಮವಾಗಿ ಬೆಳೆಯುವ ಈ ಸೊಪ್ಪಿನಿಂದ ಎಷ್ಟೊಂದು ಆರೋಗ್ಯಕಾರಿ ಪ್ರಯೋಜನಗಳು ಇವೆ. ದಿನಕ್ಕೆ ಎರಡೇ ಎರಡು ಸೊಪ್ಪನ್ನು ತಿನ್ನುತ್ತಾ ಬಂದರೆ ಹಲವಾರು ಮಾತ್ರೆಗಳನ್ನು ಮನೆಯಿಂದಲೇ ದೂರ ಇಡಬಹುದು ಎನ್ನುತ್ತಾರೆ ಸ್ಯಾಂಡಲ್​ವುಡ್​ ತಾರೆ ಅದಿತಿ ಪ್ರಭುದೇವ.</p><img><p>ತಮ್ಮ ತಾಯಿ ನೀಡಿರುವ ಟಿಪ್ಸ್​ ಅವರು ನಟಿ ಕೆಲ ಹಿಂದೆ ವಿಡಿಯೋ ಶೇರ್​ ಮಾಡಿದ್ದು, ಅದೀಗ ಮತ್ತೆ ವೈರಲ್​ ಆಗುತ್ತಿದೆ. ಈಗಂತೂ ಚಳಿ ಚಳಿ ಚಳಿ. ಇದರಿಂದ ಆಗುವ ಸಮಸ್ಯೆಗಳು ಹಲವಾರು. ಸೀನು, ಶೀತ, ನೆಗಡಿ ಎಲ್ಲವನ್ನೂ ದೂರ ಮಾಡುವ ಶಕ್ತಿ ಈ ದೊಡ್ಡ ಪತ್ರೆಗೆ ಇದೆ.</p><img><p>ಖಾಲಿ ಹೊಟ್ಟೆಯಲ್ಲಿ ಎರಡು ದೊಡ್ಡಪತ್ರೆ ಎಲೆಯನ್ನು ತಿಂದು ನಸುಬೆಚ್ಚಗಿನ ನೀರನ್ನು ಕುಡಿಯುತ್ತಾ ಬಂದರೆ, ತಮ್ಮ ಅಮ್ಮನಿಗೆ ಸೀನು ಸಂಪೂರ್ಣ ನಿಂತೇ ಹೋಯಿತು ಎಂದಿದ್ದಾರೆ ನಟಿ ಅದಿತಿ. ಇದನ್ನು ಹಿಂಡಿದಾಗ ರಸ ಬರುತ್ತದೆ. ಇಲ್ಲದೇ ಹೋದರೆ ಗ್ಯಾಸ್​ ಮೇಲೆ ಎಲೆಯನ್ನು ತುಸು ಬೆಚ್ಚಗೆ ಮಾಡಿ ಹಿಂಡಿದರೂ ರಸ ಬರುತ್ತದೆ. ಆ ರಸವನ್ನು ಕುಡಿಯುತ್ತಾ ಬಂದರೆ, ಕೆಮ್ಮು, ಶೀತ , ಸ್ಕಿನ್​ ಅಲರ್ಜಿ, ಕ್ರಿಮಿ ಕಡಿದಿದ್ದರೆ ಎಲ್ಲವೂ ಮಾಯವಾಗುತ್ತದೆ. ಬಾಣಲೆಯಲ್ಲಿ ಎಲೆಯನ್ನು ಬಿಸಿ ಮಾಡಿ ನೆತ್ತಿಗೆ ಹೆಚ್ಚುವುದರಿಂದಲೂ ನೆಗಡಿ, ಕೆಮ್ಮು ಕಡಿಮೆ ಆಗುತ್ತದೆ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿದ ಅದಿತಿ ಅಮ್ಮ, ಒಂದು ಟೊಂಗೆ ಗಿಡವನ್ನು ಮನೆಯಲ್ಲಿ ನೆಟ್ಟರೆ 10 ಟೈಪ್​ ಮಾತ್ರೆಯನ್ನು (Medicines) ಹೊರಕ್ಕೆ ಹಾಕಬಹುದು ಎನ್ನುತ್ತಾರೆ ಅವರು.</p><img><p>ಇದರ ಪ್ರಯೋಜನಗಳು ಹಲವಾರು. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರಿಗೂ ಇದು ಪ್ರಯೋಜನಕಾರಿ. ಅದರ ಬಗ್ಗೆಯೂ ನಟಿ ತಿಳಿಸಿಕೊಟ್ಟಿದ್ದಾರೆ.</p><ul> <li>ದೊಡ್ಡ ಪತ್ರೆ ಎಲೆಗಳನ್ನ ಉಸಿರಾಟದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದರ ರಸವನ್ನ ಎದೆಯ ಮೇಲೆ ಹಚ್ಚುವುದರಿಂದ ಉಸಿರಾಟದ ಸಮಸ್ಯೆ ಸುಲಭವಾಗುತ್ತದೆ.</li> <li>ಚಿಕ್ಕ ಮಕ್ಕಳಿಗೆ ಜ್ವರ ಬಂದಾಗ ಈ ಎಲೆಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.</li> <li>ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ರಸವನ್ನ ಬಳಸಲಾಗುತ್ತದೆ.</li> <li>ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆಯನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.</li> <li>ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉರಿಯುವಿಕೆಯಿಂದ ಬಳಲುತ್ತಿರುವವರಿಗೆ ಇದರ ಎಲೆಯ ಔಷಧ ರಾಮ ಬಾಣದಂತೆ ಕೆಲಸ ಮಾಡುತ್ತದೆ.</li> <li>ಒಂದು ವಾರದ ವರೆಗೆ ಪ್ರತಿನಿತ್ಯ ತಪ್ಪದೆ ದೊಡ್ಡಪತ್ರೆ ಎಲೆಯ ರಸವನ್ನು ಸೇವನೆ ಮಾಡಿದಲ್ಲಿ ಕಾಮಾಲೆ ರೋಗ ನಿವಾರಣೆಯಾಗುತ್ತದೆ.</li> <li>ತುರಿಕೆ, ಕಜ್ಜಿಗೆ ಇದರ ರಸವನ್ನ ಹಚ್ಚಿದರೆ ತುರಿಕೆ ಕಜ್ಜಿಯಂತಹ ರೋಗಗಳು ಕಡಿಮೆಯಾಗುತ್ತದೆ.</li> <li>ದೊಡ್ಡ ಪತ್ರೆ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬಹಳ ಸಹಕಾರಿಯಾಗಿದೆ.</li></ul>



Source link

Leave a Reply

Your email address will not be published. Required fields are marked *