Brahmagantu ಡೈರೆಕ್ಟರ್​ ಸಾಹೇಬ್ರೇ, ಇದೇನಿದು ಅನ್ಯಾಯ? ದೀಪಾಗೆ ವಾಟರ್​ಪ್ರೂಫ್​ ಮೇಕಪ್​ ಕೊಡೋದಲ್ವಾ?

Brahmagantu ಡೈರೆಕ್ಟರ್​ ಸಾಹೇಬ್ರೇ, ಇದೇನಿದು ಅನ್ಯಾಯ? ದೀಪಾಗೆ ವಾಟರ್​ಪ್ರೂಫ್​ ಮೇಕಪ್​ ಕೊಡೋದಲ್ವಾ?



Brahmagantu ಡೈರೆಕ್ಟರ್​ ಸಾಹೇಬ್ರೇ, ಇದೇನಿದು ಅನ್ಯಾಯ? ದೀಪಾಗೆ ವಾಟರ್​ಪ್ರೂಫ್​ ಮೇಕಪ್​ ಕೊಡೋದಲ್ವಾ?
<p>ಬ್ರಹ್ಮಗಂಟು ಸೀರಿಯಲ್​ನಲ್ಲಿ ದೀಪಾ ಮತ್ತು ದಿಶಾ ಒಬ್ಬಳೇ ಎಂಬ ಸತ್ಯ ರೂಪಾಳಿಗೆ ತಿಳಿದಿದೆ. ಈ ಸತ್ಯವನ್ನು ಬಯಲು ಮಾಡಲು ರೂಪಾ, ದೀಪಾಳ ಮುಖಕ್ಕೆ ನೀರು ಎರಚುತ್ತಾಳೆ, ಇದರಿಂದ ಆಕೆಯ ಮೇಕಪ್ ಅಳಿಸಿಹೋಗುತ್ತದೆ. ಇದನ್ನು ನೋಡಿದ ನೆಟ್ಟಿಗರು ವಾಟರ್​ಪ್ರೂಫ್ ಮೇಕಪ್ ಇರಲಿಲ್ವಾ ಎಂದು &nbsp;ಟ್ರೋಲ್ ಮಾಡುತ್ತಿದ್ದಾರೆ.</p><img><p>ಬ್ರಹ್ಮಗಂಟು ಸೀರಿಯಲ್​ (Brahmagantu Serial)ನಲ್ಲಿ ಇದೀಗ ದೀಪಾಗೆ ಹಿನ್ನಡೆಯಾಗುತ್ತದೆ. ದಿಶಾ ಮತ್ತು ದೀಪಾ ಒಬ್ಬಳೇ ಎನ್ನೋದು ತಿಳಿದಿರೋ ರೂಪಾ ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾಳೆ.</p><img><p>ದುಡ್ಡನ್ನು ಕದ್ದಿರೋ ಕೇಸ್​ನಲ್ಲಿ ದೀಪಾಳನ್ನು ಜೈಲಿಗೆ ಅಟ್ಟಿದ್ದ ರೂಪಾ, ಅದನ್ನೇ ಮುಂದು ಮಾಡಿಕೊಂಡು ದಿಶಾಳಿಗೆ ಕಾಟ ಕೊಡುತ್ತಿದ್ದರು. ಚಿರಾಗ್​ನ ಪರ್ಸನಲ್​ ಅಸಿಸ್ಟೆಂಟ್​ ಆಗಿ ನೇಮಕ ಮಾಡಿಸಿಕೊಳ್ಳೋದು ನಿನ್ನ ಜವಾಬ್ದಾರಿ ಎಂದು ಹೇಳಿ, ಅದೇ ಆಫೀಸ್​ನಲ್ಲಿ ಉಳಿದುಕೊಳ್ಳುವಂತೆ ಮಾಡಿದಳು.</p><img><p>ಇದೀಗ ಅವಳದ್ದು ಮಿತಿಮೀರಿದಾಗ ಏನು ಬೇಕಾದ್ರೂ ಮಾಡಿಕೋ ಎಂದು ದೀಪಾ ಹೇಳಿದಾಗ, ಕೊನೆಯ ಅಸ್ತ್ರವಾಗಿ ರೂಪಾ, ಅಲ್ಲಿದ್ದ ನೀರನ್ನು ದೀಪಾಳ ಮುಖದ ಮೇಲೆ ಚೆಲ್ಲಿ, ನೀನೇ ದೀಪಾ ಎನ್ನುವುದು ನನಗೆ ಗೊತ್ತು ಎಂದಿದ್ದಾಳೆ.</p><img><p>ಕುತೂಹಲ ಎಂದರೆ, ನೀರು ಸೋಕಿದ ತಕ್ಷಣ ದಿಶಾ ಹಾಕಿಕೊಂಡಿದ್ದ ಬಣ್ಣ ಎಲ್ಲಾ ಹೋಗಿ ಬಿಟ್ಟಿದೆ. ದಿಶಾ ಎಚ್ಚರ ತಪ್ಪಿದ್ದ ಸಂದರ್ಭದಲ್ಲಿ ಚಿರಾಗ್​ ನೀರು ಹಾಕಿದಾಗ ಹೋಗದಿದ್ದ ಮೇಕಪ್​ ಈಗ ಹೇಗೆ ಹೋಯ್ತು ಎಂದು ಇನ್ನಿಲ್ಲದಂತೆ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.</p><img><p>ದಿಶಾಳಿಗೆ ವಾಟರ್​ಪ್ರೂಫ್ ಮೇಕಪ್​ ಕೊಡೋದು ಅಲ್ವಾ ಡೈರೆಕ್ಟರ್​ ಸಾಹೇಬ್ರೆ ಎಂದು ನೆಟ್ಟಿಗರು ಕೇಳ್ತಿದ್ದಾರೆ. ನೀರು ಹಾಕಿದ ತಕ್ಷಣ ಮೇಕಪ್​ ಅಳಿಸಿಹೋಗುವುದು ಎಂದರೆ ಏನರ್ಥ, ಬೇರೆ ರೀತಿಯಲ್ಲಿ ಈ ವಿಷಯ ತನಗೆ ಗೊತ್ತು ಎಂದು ರೂಪಾ ಹೇಳಬಹುದಿತ್ತಲ್ವಾ, ಈ ರೀತಿಯ ನಾನ್​ಸೆನ್ಸ್​ ಸೀನ್​ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.</p><img><p>ಮತ್ತೆ ಕೆಲವರು ದೀಪಾಗೆ ಸರಿಯಾಗಿ ಆಯಿತು. ರೂಪಾಳನ್ನು ಹೊರಕ್ಕೆ ಹಾಕಿದಾಗ, ಅತಿ ಒಳ್ಳೆಯತನ ತೋರಿಸಿ ಅವಳನ್ನು ಕೆಲಸಕ್ಕೆ ಇಟ್ಟುಕೊಂಡಳು. ಅಕ್ಕ ಅಕ್ಕ ಎಂದು ಮಮಕಾರ ತೋರಿದಳು. ಅದಕ್ಕೆ ಸರಿಯಾದ ಶಾಸ್ತಿ ಆಗಿದೆ. ಅವಳಿಗೆ ಆಗಬೇಕಾದದ್ದೇ ಎನ್ನುತ್ತಿದ್ದಾರೆ.</p>



Source link

Leave a Reply

Your email address will not be published. Required fields are marked *