
ಇನ್ನೊಂದೆಡೆ, ಕವಿತಾ ಕುಟುಂಬಕ್ಕೂ ಈ ಅಪಘಾತ ಭಾರೀ ಆಘಾತ ತಂದಿದೆ. ಕವಿತಾ ತಂದೆ ಕಾಂತರಾಜು ಮಾತನಾಡಿ, “ಫೆಬ್ರುವರಿಯಲ್ಲಿ ನನ್ನ ಮಗಳು ಕವಿತಾ ಮದುವೆ ನಿಗದಿಯಾಗಿತ್ತು. ಅದಕ್ಕಾಗಿ ರಜೆ ಸಮಯದಲ್ಲಿ ಕುಟುಂಬ ಹಾಗೂ ಸ್ನೇಹಿತರು ಸೇರಿ ಪ್ರವಾಸಕ್ಕೆ ಹೊರಟಿದ್ದರು. ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಅಪಘಾತದ ವಿಷಯ ತಿಳಿಯಿತು. ಮಗಳು ಬಸ್ನಿಂದ ಜಿಗಿದ ಕಾರಣ ಸ್ವಲ್ಪ ನೋವು ಆಗಿದೆ ಎಂದು ಹೇಳಿದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ. ಕವಿತಾ, ಮಂಜುನಾಥ್ ಹಾಗೂ ಇತರರು ಎಲ್ಲರೂ ಮಾವಳ್ಳಿ–ಶ್ರೀನಿವಾಸಪುರ ಭಾಗದವರಾಗಿದ್ದು, ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಸಂತಸದ ಪ್ರವಾಸವಾಗಿ ಆರಂಭವಾದ ಈ ಪ್ರಯಾಣ, ಕ್ಷಣಮಾತ್ರದಲ್ಲಿ ದುಃಖದ ದುರಂತವಾಗಿ ಮಾರ್ಪಟ್ಟಿದೆ.
ಚಿತ್ರದುರ್ಗ ಬಸ್ ದುರಂತದಲ್ಲಿ ತಾಯಿ–ಮಗು ನಾಪತ್ತೆ ಪ್ರಕರಣವು ಇನ್ನೂ ಆತಂಕದಲ್ಲಿದ್ದು, ಪೊಲೀಸ್ ಹಾಗೂ ರಕ್ಷಣಾ ತಂಡಗಳಿಂದ ಹುಡುಕಾಟ ಮುಂದುವರಿದಿದೆ. ಬಿಂದು ಹಾಗೂ ಪುಟ್ಟ ಗ್ರೀಯಾ ಸುರಕ್ಷಿತವಾಗಿ ಪತ್ತೆಯಾಗಲಿ ಎಂಬುದೇ ಇದೀಗ ಕುಟುಂಬಸ್ಥರು ಹಾಗೂ ಸಾರ್ವಜನಿಕರ ಪ್ರಾರ್ಥನೆಯಾಗಿದೆ.