
<p>Ramachari Kannada Serial Today Episode: ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್ ನಟನೆಯ ರಾಮಾಚಾರಿ ಧಾರಾವಾಹಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಈ ಸೀರಿಯಲ್ ಅಂತ್ಯವಾಗುವ ಸಮಯ ಬಂದಿದೆ. ಹಾಗಾದರೆ ಕೊನೆಯಲ್ಲಿ ಏನಾಯ್ತು?</p><p> </p><img><p>ರಾಮಾಚಾರಿ ಹಾಗೂ ಚಾರುಲತಾ ಅನಿರೀಕ್ಷಿತವಾಗಿ ಮದುವೆಯಾದರು. ಆ ಬಳಿಕ ರಾಮಾಚಾರಿ ಕೂಡ ಚಾರುಳನ್ನು ಲವ್ ಮಾಡಲು ಆರಂಭಿಸಿದನು. ಇಷ್ಟವರ್ಷಗಳಿಂದ ದುಡ್ಡಿನ ಮದದಲ್ಲಿ ಮೆರೆಯುತ್ತಿದ್ದ ಚಾರು ಸಂಪೂರ್ಣ ಬದಲಾದಳು, ನಾರಾಯಾಣಾಚಾರ್ ಕುಟುಂಬದ ಸೊಸೆಯಾದಳು.</p><img><p>ಮಾನ್ಯತಾಳಿಗೆ ಮಗಳು ಚಾರುಲತಾ ದೊಡ್ಡವರ ಮನೆಯ ಸೊಸೆ ಆಗಬೇಕು, ಅವಳು ರಾಮಾಚಾರಿ ಜೀವನದಲ್ಲಿ ಇರಬಾರದು ಎಂದು ಏನೇನೋ ಪ್ರಯತ್ನಪಟ್ಟಳು. ಆದರೆ ಚಾರು ಮಾತ್ರ ರಾಮಾಚಾರಿಯನ್ನು ಬಿಟ್ಟುಕೊಡಲೇ ಇಲ್ಲ.</p><img><p>ರಾಮಾಚಾರಿ ಸಹೋದರ ಕೃಷ್ಣನನ್ನು ನವದೀಪ್ ಕೊಲೆ ಮಾಡಿದ್ದನು. ಚಾರುಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಬೇಕು, ಅವರ ಆಸ್ತಿಯನ್ನು ಪಡೆಯಬೇಕು ಎಂದು ನವದೀಪ್ ಅಂದುಕೊಂಡಿದ್ದನು. ಇದರಿಂದಲೇ ರಾಮಾಚಾರಿ ಕುಟುಂಬಕ್ಕೆ ನೂರಾರು ಸಮಸ್ಯೆ ಎದುರಾಗಿದೆ.</p><img><p>ಚಾರು ಮಗಳನ್ನು ನವದೀಪ್ ಕಿಡ್ನ್ಯಾಪ್ ಮಾಡಿದ್ದನು. ಮಗುವನ್ನು ಕಾಪಾಡಿಕೊಳ್ಳಲು ಚಾರು-ಚಾರಿ ಒದ್ದಾಡಿದ್ದಳು. ಅದರಂತೆ ಮಾನ್ಯತಾ ಕೂಡ ಇವರ ಸಹಾಯಕ್ಕೆ ಧಾವಿಸಿದರು. ಮಾನ್ಯತಾ ತಾನಾಗಿಯೇ ಜೈಲು ಪಾಲಾಗಿದ್ದಾಳೆ. ಅಂದಹಾಗೆ ಎಲ್ಲರೂ ನವದೀಪ್ ಹಾಗೂ ಮಗನಿಗೆ ಹೊಡೆದರು.</p><img><p>ಕೃಷ್ಣನ ಫೋಟೋ ಒಡೆದು ಹೋಯ್ತು, ಆ ಫೋಟೋದ ಕೆಳಗಡೆ ನವದೀಪ್ ಮಲಗಿದ್ದನು. ಆ ಗಾಜಿನ ಚೂರು ನವದೀಪ್ ಮೈಮೇಲೆ ಬಿದ್ದಿದೆ. ಅಲ್ಲಿಗೆ ನವದೀಪ್ ತೀರಿಕೊಂಡಿದ್ದಾನೆ. ಆಮೇಲೆ ಅವನ ಮಗ ಕೂಡ ಜೈಲು ಪಾಲಾಗಿದ್ದಾನೆ.</p><img><p>ರುಕ್ಮಿಣಿ ಕೂಡ ಜೈಲು ಪಾಲಾಗಿದ್ದಾಳೆ. ಚಾರುಲತಾ ತಂದೆ ಅವರ ಎಲ್ಲ ಆಸ್ತಿಯನ್ನು ಟ್ರಸ್ಟ್ಗೆ ಬರೆದಿದ್ದಾರೆ. ಜೈಲಿನಿಂದ ಹೊರಗಡೆ ಬಂದಮೇಲೆ ಆ ಟ್ರಸ್ಟ್ನಲ್ಲಿ ರುಕ್ಮಿಣಿ, ಮಾನ್ಯತಾ ಸೇವೆ ಮಾಡಲಿದ್ದಾರಂತೆ.</p><img><p>ಚಾರುಲತಾ ಮಗಳಿಗೆ ಕೃಷ್ಣವೇಣಿ ಎಂದು ಹೆಸರು ಇಟ್ಟಿದ್ದಾರೆ. ಈ ನಾಮಕರಣದಲ್ಲಿ ಎಲ್ಲರೂ ಭಾಗಿ ಆಗಿದ್ದಾರೆ. ಕೃಷ್ಣ ಈಗ ಕೃಷ್ಣವೇಣಿಯಾಗಿ ಬಂದಿದ್ದಾನೆ ಎಂದು ಎಲ್ಲರೂ ನಂಬಿದ್ದಾರೆ. </p><img><p>ಚಾರುಲತಾ-ಮೌನ ಗುಡ್ಡೇಮನೆ</p><p>ರಾಮಾಚಾರಿ- ರಿತ್ವಿಕ್ ಕೃಪಾಕರ್</p><p>ಅಂದಹಾಗೆ ಗುರು ದತ್, ಝಾನ್ಸಿ ಕಾವೇರಪ್ಪ, ಗುರುದತ್, ಅಂಜಲಿ, ಶಂಕರ್ ಅಶ್ವತ್ಥ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು.</p>
Source link
Ramachari Serial ಕ್ಲೈಮ್ಯಾಕ್ಸ್ ಎಪಿಸೋಡ್ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್ ಫೋಟೋಗಳಿವು!