
<p>ಹೊಸ ಧಾರಾವಾಹಿಯಲ್ಲಿ ವಿಲನ್ ಆಗಿ ಮಿಂಚಲಿರುವ ನಟಿ ರಜಿನಿ ಹೊಸ ಲುಕ್ ಹಾಗೂ ಹೊಸ ಮೋಟಿವೇಶನ್ ಲೈನ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.</p><p> </p><img><p>ರಜಿನಿ</p><p>ಕನ್ನಡ ಕಿರುತೆರೆಯಲ್ಲಿ ಅಮೃತವರ್ಷಿಣಿ (Amruthavarshini) ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟು ಇವತ್ತಿನವರೆಗೂ ಕನ್ನಡ ವೀಕ್ಷಕರ ಪಾಲಿನ ಅಮೃತ ಆಗಿ ಜನಪ್ರಿಯತೆ ಪಡೆದ ನಟಿ ರಜಿನಿ.</p><img><p>ಹಲವು ಸೀರಿಯಲ್ ನಲ್ಲಿ ನಟನೆ</p><p>ರಜಿನಿ (Rajini) ಅವರು ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ.</p><img><p>ಹಿಟ್ಲರ್ ಕಲ್ಯಾಣ</p><p>ರಜಿನಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲೂ ನಟಿಸಿದ್ದು, ಆರಂಭದಲ್ಲಿ ಒಳ್ಳೆಯವರಾಗಿ, ಬಳಿಕ ವಿಲನ್ ಪಾತ್ರದಲ್ಲಿ ಮಿಂಚಿದ್ದರು.</p><img><p>ಹೊಸ ಸೀರಿಯಲ್ ನಲ್ಲೂ ವಿಲನ್</p><p>ಇದೀಗ ಮತ್ತೆ ಹಲವು ವರ್ಷಗಳ ಬಳಿಕ ಸ್ಟಾರ್ ಸುವರ್ಣ (Star Suvarna) ವಾಹಿನಿಗೆ ಎಂಟ್ರಿಕೊಟ್ಟಿದ್ದು, ಹೊಸ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ನಟಿಸಲಿದ್ದಾರೆ.</p><img><p>ನೀನಿರಲು ಜೊತೆಯಲ್ಲಿ</p><p>ನೀನಿರಲು ಜೊತೆಯಲ್ಲಿ ಎನ್ನುವ ಧಾರಾವಾಹಿಯಲ್ಲಿ ನಾಯಕನ ಅತ್ತಿಗೆಯಾಗಿ, ಖಡಕ್ ವಿಲನ್ ಆಗಿ ಮಿಂಚಲಿದ್ದಾರೆ.</p><img><p><strong>ಸದ್ದು ಮಾಡಿದ ಪ್ರೊಮೋ</strong></p><p>ಈಗಾಗಲೇ ಸೀರಿಯಲ್ ಪ್ರೊಮೋ (serial promo) ಬಿಡುಗಡೆಯಾಗಿದ್ದು, ನಟಿಯ ವಿಲನ್ ಲುಕ್ ಮನಗೆದ್ದಿದೆ. ಮತ್ತೆ ರಜನಿಯವರನ್ನು ಕಿರುತೆರೆಯಲ್ಲಿ ನೋಡಿ ಅಭಿಮಾನಿಗಳು ಖುಷೀಯಾಗಿದ್ದಾರೆ.</p><img><p>ಹೊಸ ಲುಕ್</p><p>ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಜಿನಿ, ಸೀರೆಯುಟ್ಟು, ಮಲ್ಲಿಗೆ ಹೂವು ಮುಡಿದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ</p><img><p>ನಟಿ ಹೇಳಿದ್ದೇನು?</p><p>ತಮ್ಮ ಫೋಟೊ ಕ್ಯಾಪ್ಶನ್ ನಲ್ಲಿ ನಟಿ ಹಣ, ಹೆಸರು ಸಂಪಾದಿಸಿ, ನೋಡೊಕೆ ಚೆನ್ನಾಗಿರೊರೇ ಆತ್ಮಹತ್ಯೆ ಮಾಡಿಕೊಳ್ತಾರೆ. ಇದಕ್ಕೆ ಕಾರಣ ಏನು ಅನ್ನೋದನ್ನು ಕೂಡ ಹೇಳಿದ್ದಾರೆ.</p><img><p>ನೆಮ್ಮದಿ</p><p>ಅಂದರೆ,ಅವುಗಳಿಗಿಂತ ಅಂದರೆ ಹಣ, ಹೆಸರಿಗಿಂತ ದುಬಾರಿಯಾದದ್ದು ಏನೋ ಇದೆ ಅಂತಾಯ್ತು..ಅದೇ ನೆಮ್ಮದಿ… ಶುಭ ದಿನ ಎಂದಿದ್ದಾರೆ ನಟಿ</p><img><p>ನಟಿಯ ಅಂದಕ್ಕೆ ಫ್ಯಾನ್ಸ್ ಫಿದಾ</p><p>ನಟಿಯ ಫೋಟೊ ಹಾಗೂ ಕ್ಯಾಪ್ಶನ್ ಗೆ ಮೆಚ್ಚುಗೆ ಸೂಚಿಸಿದ ಜನ ರಂಜು ಮೇಡಮ್ ಮೂಗಿಗೆ ಒಂದು ಮುಗುತ್ತಿ ಇದ್ದಿದ್ರೆ ನಿಮ್ಮ ಬ್ಯುಟಿ ಇನ್ನು ಚಂದ ಕಾಣುತಿತ್ತು. ಕ್ಯಾಪ್ಶನ್ ಸೂಪರ್ ಅಂದಿದ್ದಾರೆ.</p>
Source link
ಸೀರೆಯುಟ್ಟು, ಕೈಯಲ್ಲಿ ಜಪಮಾಲೆ ಹಿಡಿದು…. ನೆಮ್ಮದಿ ಬಗ್ಗೆ ಏನು ಹೇಳಿದ್ರು ನಟಿ ರಜಿನಿ